ವರದೇ ಹರೀ… ಪಂಡರೀನಾಥ ಮಹಾರಾಜ್ ಕೀ..ಜೈ…!!

ಪಂಡರಪೂರದಲ್ಲಿ ತಪ್ಪಿಸಿಕೊಂಡ ನಾಯಿ 200 ಕೀ.ಮೀ ಕ್ರಮಿಸಿ ಮರಳಿ ಮನೆಗೆ ಬಂದಿತ್ತು.

ಬೆಳಗಾವಿ- ಆಷಾಢ ಏಕಾದಶಿಯ ನಿಮಿತ್ಯ ದಿಂಡಿ ಯಾತ್ರೆಯಲ್ಲಿ ವಿಠ್ಠಲನ ಭಕ್ತರ ಜೊತೆ ಮಹಾರಾಷ್ಟ್ರದ ಪಂಡರಪೂರಕ್ಕೆ ಹೋಗಿದ್ದ ನಾಯಿ, ಪಂಡರಪೂರದಲ್ಲಿ ತಪ್ಪಿಸಿಕೊಂಡು 200 ಕೀ ಮೀ. ಏಕಾಂಗಿಯಾಗಿ ಕ್ರಮಿಸಿ ಈಗ ಮನೆಗೆ ತಲುಪಿರುವ ಘಟನೆ ನಿಪ್ಪಾಣಿ ಪಕ್ಕದ ಯಮಗರ್ಣಿ ಗ್ರಾಮದಲ್ಲಿ ನಡೆದಿದೆ.

ಯಮಗರ್ಣಿ ಗ್ರಾಮದಿಂದ ಪಂಡರಪೂರಕ್ಕೆ ದಿಂಡಿ ಯಾತ್ರೆ ಹೋಗಿತ್ತು, ಊರಿನ ಭಕ್ತರ ಜೊತೆ ಜ್ಞಾನದೇವ ಕಂಬಾರ ಅವರ ಸಾಕು ನಾಯಿಯೂ ದಿಂಡಿಯಾತ್ರೆಯನ್ನು ಹಿಂಬಾಲಿಸಿ ಪಂಡರಪೂರ ತಲುಪಿತ್ತು.

ಯಮಗರ್ಣಿಯ ದಿಂಡಿ ಯಾತ್ರೆ ಆಷಾಢ ಏಕಾದಶಿಯ ಪೂಜೆ ಮುಗಿಸಿ ಊರಿಗೆ ಮರಳುವ ಸಂಧರ್ಭದಲ್ಲಿ ಈ ನಾಯಿ ತಪ್ಪಿಸಿಕೊಂಡಿತ್ತು. ಯಮಗರ್ಣಿಯ ಭಕ್ತರು ಪಂಡರಪೂರದಲ್ಲಿ ಸಮಾವೇಶಗೊಂಡ ಲಕ್ಷಾಂತರ ಭಕ್ತರ ನಡುವೆ ನಾಯಿಯನ್ನು ಹುಡುಕಾಟ ನಡೆಸಿದರೂ ನಾಯಿ ಪತ್ತೆ ಆಗಲಿಲ್ಲ.

ನಾಯಿಯನ್ನು ಹುಡುಕಿ ಸುಸ್ತಾದ ಯಮಗರ್ಣಿಯ ಭಕ್ತರು ನಾಯಿಯನ್ನು ಅಲ್ಲೇ ಬಿಟ್ಟು ಊರಿಗೆ ಮರಳಿದ್ದರು. ಈ ನಾಯಿಯೂ ತನ್ನ ಮಾಲೀಕನನ್ನು ಪಂಡರಪೂರದಲ್ಲಿ ಹುಡುಕುವ ಪ್ರಯತ್ನ ಮಾಡಿ, ಕೊನೆಗೆ ಏಕಾಂಗಿಯಾಗಿ 200 ಕೀ ಮೀಟರ್ ಕ್ರಮಿಸಿ ಸುರಕ್ಷಿತವಾಗಿ ಯಮಗರ್ಣಿ ಗ್ರಾಮಕ್ಕೆ ತಲುಪಿದೆ.

ಏಕಾಂಗಿಯಾಗಿ ಸುರಕ್ಷಿತವಾಗಿ ಊರಿಗೆ ಬಂದಿರುವ ಈ ನಾಯಿಗೆ ಗ್ರಾಮಸ್ಥರು ಭವ್ಯ ಸ್ವಾಗತ ಮಾಡಿದ್ದಾರೆ.ಈ ನಾಯಿಯ ಕೊರಳಿಗೆ ಹೂ ಮಾಲೆ ಹಾಕಿ ಊರಿನಲ್ಲಿ ನಾಯಿಯ ಮೆರವಣಿಗೆ ಮಾಡಿದ್ದಾರೆ.

ವರದೇ ಹರೀ… ಪಂಡರೀನಾಥ ಮಹಾರಾಜ್ ಕೀ..ಜೈ…!!

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *