Breaking News

ಹೋ ಮೈ ಗಾಡ್ …ಮಾಲೀಕನ ಪ್ರಾಣ ಉಳಿಸಲು ಹೋಗಿ ಬಲಿಯಾಯ್ತು ನಿಯತ್ತಿನ ಡಾಗ್……!!!!!

ಮಾಲೀಕನಿಗೆ ಕರೆಂಟ್ ಶಾಕ್,ಪ್ರಾಣ ಉಳಿಸಲು ಪ್ರಾಣ ಕಳೆದುಕೊಂಡ ನಿಯತ್ತಿನ ನಾಯಿ…..

ಬೆಳಗಾವಿ- ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ ಎಂದು ಕೇಳಿದ್ದೆವು ಆದರೆ ಕರೆಂಟ್ ತಗುಲಿ ನರಳುತ್ತಿದ್ದ ಮಾಲೀಕನ ಪ್ರಾಣ ಉಳಿಸಲು ನಿಯತ್ತಿನ ನಾಯಿ ನಡೆಸಿದ ಹೋರಾಟ ನೋಡಿದ್ರೆ ಮೈ ಝುಂ ಅನ್ನುತ್ತೆ ಹಾಗಾದ್ರೆ ಈ ನಾಯಿ ಮಾಡಿದ್ದಾರೂ ಏನು ಅಂತೀರಾ ಈ ಡಿಟೇಲ್ ಸ್ಟೋರಿ ಓದಿ

ಜಮೀನಿನಲ್ಲಿ ಮಂಗಗಳ ಕಾಟ ತಾಳಲಾರದೆ ವಿದ್ಯುತ್ ತಂತಿ ಹಾಕಿದ್ದ ರೈತನೊಬ್ಬ ಮೈಮರೆತು ವಿದ್ಯುತ್ ತಂತಿಗೆ ಸ್ಪರ್ಷ ಮಾಡಿ ನರಳುತ್ತಿರುವಾಗ ಮಾಲೀಕನ ಪ್ರಾಣ ಉಳಿಸಲು ಈ ಸಾಕು ನಾಯಿ ಧಾವಿಸಿದೆ ಬಾಯಿಯಿಂದ ಕರೆಂಟ್ ತಂತಿಯನ್ನು ಕಟ್ ಮಾಡುವ ಪ್ರಯತ್ನ ಮಾಡಿ ಈ ನಾಯಿ ಸಾವನ್ನೊಪ್ಪಿದೆ

ಜಮಿನಲ್ಲಿ ವಿದ್ಯುತ್ ಸ್ಪರ್ಶ ಹಿನ್ನೆಲೆಯಲ್ಲಿ ರೈತ ಮತ್ತು ಸಾಕುನಾಯಿ ಸ್ಥಳದಲ್ಲೇ ಮೃತಪಟ್ಡಿದ್ದಾರೆ ವಿದ್ಯುತ್ ತಂಯಿ ಅಳವಡಿಕೆ ಬಗ್ಗೆ ಅರಿವಿಲ್ಲದೇ ವಿದ್ಯುತ್ ಸ್ಪರ್ಶ ಮಾಡಿದ ರೈತ ತಾನು ಅಳವಡಿಸಿದ ತಂತಿಯನ್ನು ತಾನೇ ಸ್ಪರ್ಷ ಮಾಡಿ ಸಾವನ್ನೊಪ್ಪಿದ್ದಾನೆ

ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಹಿರೇನಂದಿಹಳ್ಳಿ ಗ್ರಾಮದ ನಿಂಗಪ್ಪ ಈರಪ್ಪ ಜುಲ್ಪಿ( ೫೦). ಪ್ರಾಣ ಕಳೆದುಕೊಂಡ ದುರ್ದೈವಿಯಾಗಿದ್ದಾನೆ ಕಿತ್ತೂರು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Check Also

ಶಹಬ್ಬಾಷ್‌….ಬೆಳಗಾವಿ ಮಹಾಪೌರ ಮಂಗೇಶ್ ಪವಾರ್….!!

    ಬೆಳಗಾವಿ – ಬೆಳಗಾವಿ ಮಹಾನಗರ ಪಾಲಿಕೆ ಅಂದ್ರೆ ಕನ್ನಡ- ಮರಾಠಿ ಜಗಳ, ಎಂಈಎಸ್ ಕೇಂದ್ರ ಎನ್ಬುವ ಕಾಲ …

Leave a Reply

Your email address will not be published. Required fields are marked *