Breaking News
Home / Breaking News / ರಾಜಕುಮಾರ್ ಟಾಕಳೆ,ಬೇಲ್ ಅರ್ಜಿ ವಜಾ,ನವ್ಯಶ್ರೀಗೆ ಮಜಾ…!!

ರಾಜಕುಮಾರ್ ಟಾಕಳೆ,ಬೇಲ್ ಅರ್ಜಿ ವಜಾ,ನವ್ಯಶ್ರೀಗೆ ಮಜಾ…!!

ಬೆಳಗಾವಿ-ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆಗೆ ಸಂಕಷ್ಟ ಎದುರಾಗಿದೆ.ಯಾಕಂದ್ರೆ ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ.ಟಾಕಳೆ ಹೆಂಡತಿ ಎಂದೇ ಹೇಳಿಕೊಳ್ಳುತ್ತಿರುವ ನವ್ಯಶ್ರೀಗೆ ಆರಂಭಿಕ ಜಯ ಸಿಕ್ಕಿದಂತಾಗಿದೆ.

ರಾಜಕುಮಾರ ಟಾಕಳೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ಆರೋಪಗಳ ಸುರಿಮಳೆ ಮಾಡಿದ್ದರು,ರಾಜಕುಮಾರ್ ಟಾಕಳೆ ವಿರುದ್ಧ ಪ್ರಕರಣ ದಾಖಲಾಗಿದೆ.ರಾಜಕುಮಾರ ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದೆ.ಬೆಳಗಾವಿಯ ಎಂಟನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ,ರಾಜಕುಮಾರ್ ಟಾಕಳೆ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ.ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿ ನ್ಯಾಯಾಧೀಶ ಅನಂತ್ ಹೆಚ್. ಆದೇಶ ಮಾಡಿದ್ದಾರೆ.

ಟಾಕಳೆ ವಿರುದ್ಧ ಅತ್ಯಾಚಾರ, ಗರ್ಭಪಾತ, ದೈಹಿಕ ಹಲ್ಲೆ ಸೇರಿ ಹತ್ತಕ್ಕೂ ಅಧಿಕ ಆರೋಪಗಳಿವೆ.ಎಪಿಎಂಸಿ ಠಾಣೆಯಲ್ಲಿ ರಾಜಕುಮಾರ ಟಾಕಳೆ ವಿರುದ್ಧ ನವ್ಯಶ್ರೀ ದೂರು ದಾಖಲಿಸಿದ್ದರು.ಇದಕ್ಕೂ ಮುನ್ನ ನವ್ಯಶ್ರೀ ವಿರುದ್ಧ ರಾಜಕುಮಾರ್ ಟಾಕಳೆ ಬ್ಲ್ಯಾಕ್ ಮೇಲ್ ಮತ್ತು ಹನಿಟ್ರ್ಯಾಪ್ ದೂರು ದಾಖಲಿಸಿದ್ದರು.

Check Also

ಇಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬೆಳಗಾವಿಗೆ ಬರ್ತಾರೆ.

ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಬಿಜೆಪಿಯಲ್ಲಿ ಆತ್ಮಾವಲೋಕನ ಪರ್ವ ಶುರುವಾಗಿದೆ. ಇಂದು ಸೋಮವಾರ ಮಾಜಿ ಸಿಎಂ ಬಸವರಾಜ …

Leave a Reply

Your email address will not be published. Required fields are marked *