Breaking News

ಸಹ್ಯಾದ್ರಿ ನಗರದಲ್ಲಿ ಮನೆಗಳ್ಳತನ 80 ತೊಲೆ ಚಿನ್ನಾಭರಣ ಕಳುವು..

ಬೆಳಗಾವಿ- ಬೆಳಗಾವಿಯ ಸಹ್ಯಾದ್ರಿ ನಗರದ ಹೊರವಲಯದಲ್ಲಿರುವ ಮನೆಯ ಹಿಂಬಾಗಿಲು ಮುರಿದು ಒಳಗೆ ನುಗ್ಗಿರುವ ಕಳ್ಳರು ಮನೆಯಲ್ಲಿನ ಟ್ರೇಝರಿ ಲಾಕ್ ಮುರಿದು ಸುಮಾರು 80 ತೊಲೆ ತೂಕದ ಚಿನ್ನಾಭರಣಗಳನ್ನು ದೋಚಿದ ಘಟನೆ ನಡೆದಿದೆ

ಸಹ್ಯಾದ್ರಿ ನಗರದಲ್ಲಿರುವ ರಾಮಚಂದ್ರ ಭೂತಾಳೆ ಎನ್ನುವವರ ಮನೆಯಲ್ಲಿ ಕಳ್ಳತನ ನಡೆದಿದೆ ಸ್ಥಳಕ್ಕೆ ಅಮರನಾಥ ರೆಡ್ಡಿ ಹಾಗು ಸಿಪಿಐ ಕಾಳಿಮಿರ್ಚಿ ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ

ರಾಮಚಂದ್ರ ಭೂತಾಳೆ ಅವರ ಮನೆಯ ಹಿಂಬಾಗಿಲನ್ನು ರಾಡ್ ನಿಂದ ಮುರಿಯಲಾಗಿದೆ ಜೊತೆಗೆ ಟ್ರೇಝರಿಯ ಲಾಕ್ ಮುರಿದು ಟ್ರೇಝರಿಯಲ್ಲಿನ ಬಟ್ಟೆಗಳನ್ನು ಚಿಲ್ಲಾ ಪಿಲ್ಲಿಯಾಗಿ ಎಸೆದು ಸುಮಾರು ಎಂಬತ್ತು ತೊಲೆಯ ಚಿನ್ನಾಭರಣಗಳನ್ನು ದೋಚಲಾಗಿದೆ ಎಂದು ಎಪಿಎಂಸಿ ಠಾಣೆಯಲ್ಲಿ ದೂರು ನೀಡಲಾಗಿದೆ

ಘಟನಾ ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚುಗಾರರ ತಂಡ ಭೇಟಿ ನೀಡಿ ಪರಶೀಲನೆ ನಡೆಸುತ್ತಿದೆ

Check Also

ಶಾಲಿನಿ ರಜನೀಶ್, ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ..

ಬೆಂಗಳೂರು: ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಅವರ ಇದೇ ಜುಲೈ 31ಕ್ಕೆ ನಿವೃತ್ತಿಯಾಗುತ್ತಿದ್ದು, ಅವರ​ ಪತ್ನಿ ಶಾಲಿನಿ …

Leave a Reply

Your email address will not be published. Required fields are marked *