ಲಕ್ಷ್ಮೀ ಯಿಂದಲೇ ಕಾಂಗ್ರೆಸ್ ಹಾಳಾಗಿದೆ ,ಲಖನ್ ಇಂದಿನಿಂದ ನನ್ನ ತಮ್ಮ- ರಮೇಶ್ ಜಾರಕಿಹೊಳಿ

ಲಕ್ಷ್ಮೀ ಯಿಂದಲೇ ಕಾಂಗ್ರೆಸ್ ಹಾಳಾಗಿದೆ ,ಲಖನ್ ಇಂದಿನಿಂದ ನನ್ನ ತಮ್ಮ- ರಮೇಶ್ ಜಾರಕಿಹೊಳಿ

ಬೆಳಗಾವಿ- ಗೋಕಾಕ್ ಕ್ಷೇತ್ರದ ಅರ್ಹ ಶಾಸಕ ರಮೇಶ ಜಾರಕಿಹೊಳಿ  ಕ್ಷೇತ್ರದ ಮತದಾರರಿಗೆ ಧನ್ಯವಾದ ಹೇಳುವ ಜೊತೆಗೆ ಮಾಜಿ ಸ್ಪೀಕರ್
ರಮೇಶ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿ ಈ ಫಲಿತಾಂಶ ಅವರ ಮುಖಕ್ಕೆ ಹೊಡೆದ ಹಾಗೆ ಹಾಗೇ ಆಗಿದೆ. ಎಂದು ಪ್ರತಿಕ್ರಿಯೆ ನೀಡಿದ್ದಾರೆ

ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಅವರು ಕಾನೂನು ಬಾಹಿರವಾಗಿ ಅನರ್ಹಗೊಳಿಸಿದ್ದರು ಪ್ರವಾಹ ಸಂದರ್ಭದಲ್ಲಿ ಸಹ ನಮ್ಮನ್ನು ಗೆಲ್ಲಿಸಿದ್ದಾರೆ ಈ ಗೆಲುವು
ಯಡಿಯೂರಪ್ಪ, ಅಮಿತ್ ಶಾ ಗೆಲವು.
ಈ ಗೆಲವು ಹೊಸ ಇತಿಹಾಸ ಸೃಷ್ಟಿಸಿದೆ.
ಜನತಾ ನ್ಯಾಯಾಲದಲ್ಲಿ ನನಗೆ ನ್ಯಾಯ ಸಿಕ್ಕಿದೆ ಎಂದು ರಮೇಶ್ ಜಾರಕಿಹೊಳಿ ಸಮಾಧಾನ ವ್ಯೆಕ್ತ ಪಡಿಸಿದರು.

ಒಳ್ಳೆಯ ರೀತಿಯ ಚುನಾವಣೆ ಮಾಡಿದ್ರು,ಸತೀಶ ಜಾರಕಿಹೊಳಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಸಿದ್ದರಾಮಯ್ಯ ಇಂದಿಗು ನಮ್ಮ ನಾಯಕ
ಎಂ ಟಿ ಬಿ ಸೋಲಿಸಲು ಸಿದ್ದರಾಮಯ್ಯ ಕಾರಣ ಎಂದು ಆರೋಪಿಸಿದರು

ಅನರ್ಹರ ಸ್ಥಾನಮಾನ ಬಗ್ಗೆ ಮುಂದಿನ ದಿನದಲ್ಲಿ ಹೈಕಮಾಂಡ್ ತೀರ್ಮಾನ. ಮಾಡುತ್ತದೆ.
ಕೆಟ್ಟ ಸರ್ಕಾರ ತೆಗೆಯಲು ಈ ತಿರ್ಮಾನ ಮಾಡಿದ್ದೇವೆ
ಮನುಷ್ಯ ಯಾವಾಗಲೂ ಹಠವಾದಿಯಾಗಬೇಕು
ಬಿಜೆಪಿಯಿಂದ ಹೊಸ ಅದ್ಯಾಯ ಆರಂಭವಾಗಿದೆ
ಇಂದಿನಿಂದ ಲಖನ್ ಜಾರಕಿಹೊಳಿ ನನ್ನ ತಮ್ಮ ಎಂದು ರಮೇಶ್ ಹೇಳಿದರು.

ಭ್ರಷ್ಟಾಚಾರ ಬಗ್ಗೆ ತೀರ್ಮಾನ ಮಾಡಿದ್ರೆ ಇಂದೇ ರಾಜೀನಾಮೆ ನೀಡಲು ಸಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ರಮೇಶ ಜಾರಕಿಹೊಳಿ ಟಾಂಗ್ ಕೊಟ್ಟರು
ಗ್ರಾಮೀಣ ಕ್ಷೇತ್ರದಲ್ಲಿ ಅನೇಕ ಅಕ್ರಮ ಚಟುವಟಿಕೆ ನಡೆಯುತ್ತಿವೆ‌ ಈ ಬಗ್ಗೆ ಮುಂದಿನ ದಿನದಲ್ಲಿ ಕ್ರಮ ಕೈಗೊಳ್ಳುತ್ತೇನೆ ಮಂಡ್ಯದಲ್ಲಿ ಎಚ್ ಡಿ ಕೆ ಸೋತಿದ್ದಾರೆ ಅವರ ಕಥೆ ಮುಗಿತು. ದೇವರ ಸಾಕ್ಷಿಯಾಗಿ ನಾನು ಲಕ್ಷ್ಮೀ ಹೆಬ್ಬಾಳ್ಕರ್ ಕರೆದಿಲ್ಲ ಹೈದರಾಬಾದ್ ಗೆ ಲಕ್ಷ್ಮೀ ಹೆಬ್ಬಾಳ್ಕರ್ ಕರೆದಿಲ್ಲ ಆಕೆಯಿಂದಲೇ ಕಾಂಗ್ರೆಸ್ ಪಕ್ಷ ಹಾಳಾಗಿದೆ ಎಂದು ರಮೇಶ್ ಜಾರಕಿಹೊಳಿ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಗುಡುಗಿದರು.

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *