Breaking News
Home / Breaking News / ಸ್ವಾಮೀಜಿ ನೀಡಿದ ನಾಟಿ ಔಷಧಿ ಕುಡಿದು ಪ್ರಾಣ ಕಳೆದುಕೊಂಡ ಭಕ್ತ..!!

ಸ್ವಾಮೀಜಿ ನೀಡಿದ ನಾಟಿ ಔಷಧಿ ಕುಡಿದು ಪ್ರಾಣ ಕಳೆದುಕೊಂಡ ಭಕ್ತ..!!

ಬೆಳಗಾವಿ- ನನ್ನ ಮಗ ವಿಪರೀತವಾಗಿ ಸರಾಯಿ ಕುಡಿಯುತ್ತಾನೆ ಸ್ವಾಮೀಜಿ ಇತನಿಗೆ ಕುಡಿಯುವದನ್ನು ಬಿಡಿಸಿ ಎಂದು ಭಕ್ತನೊಬ್ಬ ಸ್ವಾಮೀಜಿ ಬಳಿ ಬಂದಾಗ ಸ್ವಾಮೀಜಿ ಅವಾಂತರ ಮಾಡಿದ್ದಾನೆ ಸ್ವಾಮೀ ನೀಡಿದ್ದ ನಾಟಿ ಔಷಧ ಸೇವಿಸಿ ಸ್ಥಳದಲ್ಲಿಯೇ ವ್ಯಕ್ತಿ ಯೊಬ್ಬ ಸಾವನ್ನೊಪ್ಪಿದ ಘಟನೆ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿಯಲ್ಲಿ ನಡೆದಿದೆ

ಬೆಳಗಾವಿ ತಾಲೂಕಿನ ಜುಮನಾಳ ಗ್ರಾಮದ ನಿವಾಸಿ ಸಿದ್ದರಾಯ್ ನಾಯಕ್ (28) ಮೃತಪಟ್ಟ ವ್ಯಕ್ತಿಯಾಗಿದ್ದಾನೆ ಮಾರ್ಚ್ 14, 2017ರಂದು ನಡೆದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ

ಬೈಲಹೊಂಗಲ ತಾಲೂಕಿನ ಹಣ್ಣಿಕೇರಿಯಲ್ಲಿ ನಡೆದ ಪ್ರಕರಣಕ್ಕೆ ಸಮಂಧಿಸಿದಂತೆ ದೂರು ದಾಖಲಿಸಿಕೊಳ್ಳದೆ ರಾಜಿ ಪಂಚಾಯತಿ ಮೂಲಕ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ನೇಸರ್ಗಿ ಪೋಲೀಸರು ಪ್ರಕರಣವನ್ನು ಮುಚ್ಚಿಹಾಕಿದ್ದಾರೆ

3.5 ಲಕ್ಷ ರೂಪಾಯಿಗೆ ರಾಜಿ ಪಂಚಾಯತಿಯಲ್ಲಿ ಪ್ರಕರಣ ಇತ್ಯರ್ಥ ಪಡಿಸಿದ ಹಣ್ಣಿಕೇರಿ ಗ್ರಾಮದ ಪಂಚರು ಮೃತನ ಕುಟುಂಬಕ್ಕೆ 85 ಸಾವಿರ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು ಇದುವರೆಗೆ ಮೃತನ ಕುಟುಂಬಕ್ಕೆ ಯಾವುದೇ ದುಡ್ಡು ತಲುಪಿಲ್ಲ ಪಂಚರು ನೇಸರ್ಗಿ ಠಾಣೆಯಲ್ಲಿಯೇ ರಾಜಿ ಪಂಚಾಯತಿ ನಡೆಸಿರುವದು ಅಚ್ಚರಿ ಮೂಡಿಸಿದೆ

ಮಾದ್ಯಮಗಳಿಗೆ ಮಾಹಿತಿ ತಿಳಿಯುತ್ತಿದ್ದಂತೆ ರಾತ್ರೋರಾತ್ರಿ ಪ್ರಕರಣ ದಾಖಲಿಸಿಕೊಂಡಿರುವ ನೇಸರ್ಗಿ ಠಾಣೆಯ ಪೋಲೀಸರು ಸ್ವಾಮಿಜೀ ಶಿವಪ್ಪ ಭಾವಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ

ಐಪಿಸಿ 328, 304(ಎ) ಅನ್ವಯ ದೂರು ದಾಖಲು
ತಡರಾತ್ರಿ ಸ್ವಾಮಿಜೀ ಶಿವಪ್ಪ ಭಾವಿಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ
ಸಿದ್ದರಾಯ ನಾಯಕ್ ವಿಪರಿತ ಮದ್ಯಪಾನಕ್ಕೆ ದಾಸನಾಗಿದ್ದ ಮದ್ಯಪಾನ ಬಿಡಿಸುವುದಾಗಿ ಹೇಳಿ ನಾಟಿ ಔಷಧಿವೊಂದನ್ನು ನೀಡಿದ್ದ  ಹಣ್ಣಿಕೇರಿ ಗ್ರಾಮದ ಶಿವಪ್ಪ ಭಾವಿ ಸ್ವಾಮೀಜಿ ಈ ಔಷಧಿ ಸೇವಿಸಿ ಜಿಮನಾಳ ಗ್ರಾಮದ   ಸಿದ್ದರಾಯ ನಾಯಕ್ ಎಂಬಾತ ಸ್ಥಳದಲ್ಲಿಯೇ ಅಸುನೀಗಿದ್ದಾನೆ

 

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *