ರಕ್ಷಾ ಬಂಧನಕ್ಕೆ ಸಹೋದರಿಯರಿಗೆ ತಲ್ವಾರ್ ಗಿಫ್ಟ್ ಕೊಡಿ.- ಸಾದ್ವಿ ಹೇಳಿಕೆ

ಬೆಳಗಾವಿ-

ಮುಂಇದಿನ ರಕ್ಷಾ ಬಂಧನಕ್ಕೆ ಸಹೋದರರಿಗೆ ತಲ್ವಾರ್ ಗಿಫ್ಟ್ ಕೊಡಿ ಎಂದು ಸಾದ್ವಿ ಸರಸ್ವತಿ ವಿವಾದಾತ್ಮಕ ಹೇಳಿಕೆಯನ್ನು ಬೆಳಗಾವಿಯಲ್ಲಿ ನೀಡಿದ್ದಾರೆ.

ಬೆಳಗಾವಿಯ ಗುಜರಾತ್ ಭವನದಲ್ಲಿ ಭಜರಂಗದಳದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಾಧ್ವಿ ಸರಸ್ವತಿ, ದೇಶದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ದೇಶದ ಸಂಸ್ಕೃತಿ ಹಾಳಾಗುವ ಜತೆಗೆ ಲವ್ ಜಿಹಾದ್ ಹೆಚ್ಚಾಗುತ್ತಿದೆ ಎಂದಿದ್ದಾರೆ. ಲವ್ ಜಿಹಾದ್ ಉದ್ದೇಶವೆ ಹಿಂದು ಜನಸಂಖ್ಯೆಯನ್ನು ಕಡಿಮೆಗೊಳಿಸಿ ಮುಸ್ಲಿಂ ಜನಸಂಖ್ಯೆಯನ್ನು ಹೆಚ್ಚು ಮಾಡುವುದಾಗಿದೆ. ಹಿಂದು ಯುವತಿಯರು ರಾಣಿ ಲಕ್ಷ್ಮೀಬಾಯಿ ಅಂಥರವ ಇತಿಹಾಸ ಓದುವುದನ್ನು ನಿಲ್ಲಿದ್ದಾರೆ. ಇದರಿಂದ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿವೆ. ಮುಂದಿನ ರಕ್ಷಾ ಬಂಧನದ ಸಮಯದಲ್ಲಿ ಸಹೋದರರು ತಮ್ಮ ಸಹೋದರಿಯರಿಗೆ ಗಿಫ್ಟ್ ರೂಪದಲ್ಲಿ ತಲ್ವಾರ್ ನೀಡಿಬೇಕು. ಯಾವದೇ ಅನ್ಯ ಧರ್ಮದ ಯುವಕರ ಯುವತಿಯ ಮೇಲೆ ಕಣ್ಣು ಹಾಕಿದ್ರೆ ಅಂತವರ ರುಂಡ ಕಟ್ ಮಾಡಬೇಕು ಎಂದರು.

ಇನ್ನೂ ಗೋ ಹತ್ಯೆ ಮಾಡುವರರಿಗೆ ಗಲ್ಲು ಶಿಕ್ಷೆ ವಿಧಿಸಿಬೇಕು. ಭಾರತ ಹಿಂದು ರಾಷ್ಟ್ರ ಎಂದು ಘೋಷಣೆ ಮಾಡಿದ್ರೆ ದೇಶದ ಎಲ್ಲಾ ಸಮಸ್ಯೆ ಇತ್ಯರ್ಥವಾಲಿವೆ ಎಂದು ಮದ್ಯಪ್ರದೇಶದ ಮಧ್ಯಪ್ರದೇಶದ ಚೈತನ್ಯ ಪೀಠದ ಪ್ರಚಾರಕಿ ಸಾಧ್ವಿ ಸರಸ್ವತಿ ಹೇಳಿಕೆ ನೀಡಿದ್ದಾರೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *