Breaking News
Home / Breaking News / ದಕ್ಷಿಣಕ್ಕೆ ಕಿರಣ ಸೈನಾಯಿಕ್ ಗೆ ಟಿಕೆಟ್ ಕೊಡಲು ನಗರಸೇವಕರ ಪಟ್ಟು ,ಸಂಬಾಜಿ ಕಂಗಾಲು

ದಕ್ಷಿಣಕ್ಕೆ ಕಿರಣ ಸೈನಾಯಿಕ್ ಗೆ ಟಿಕೆಟ್ ಕೊಡಲು ನಗರಸೇವಕರ ಪಟ್ಟು ,ಸಂಬಾಜಿ ಕಂಗಾಲು

ಬೆಳಗಾವಿ -ಗಡಿನಾಡು ಗುಡಿಯಲ್ಲಿ ಭಾಷೆ ಆಧಾರಿತ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ ಎಲ್ಲ ಸಂಘ ಸಂಸ್ಥೆಗಳಲ್ಲಿ ಅಧಿಕಾರ ಕಳೆದುಕೊಂಡು ಕಂಗಾಲ್ ಆಗಿರುವ ಎಂಈಎಸ್ ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಮತ್ತೇ ಚೇತರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ

ಬೆಳಗಾವಿ ದಕ್ಷಿಣದ  ಹಾಲಿ ಎಂಈಎಸ್ ಶಾಸಕನಾಗಿರುವ ಸಂಬಾಜಿ ಪಾಟೀಲ ಇಂದು ಭಾಗ್ಯನಗರದ ಲೋಕಮಾನ್ಯ ಸೊಸೈಟಿಯ ಸಭಾಗ್ರಹದಲ್ಲಿಯೇ ಬೆಳಗಾವಿ ನಗರ ಸೇವಕರ ಸಭೆ ಕರೆದು ಟಿಕೆಟ್ ಯಾರಿಗೆ ಕೊಡಬೇಕು ಯಾವ ನಗರ ಸೇವಕ ಯಾವ ಕ್ಷೇತ್ರದ ಆಕಾಂಕ್ಷಿ ಎಂದು ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ

ಬೆಳಗಾವಿ ದಕ್ಷಿಣದಲ್ಲಿ ಕಿರಣ ಸೈನಾಯಿಕ ಅವರಿಗೆ ಟಿಕೆಟ್ ಕೊಡಬೇಕು ಎಂದು ನಗರ ಸೇವಕರು ತಮ್ಮ ಅಭಿಪ್ರಾಯ ಮಂಡಿಸಿದ ಮೇಲೆ ತಬ್ಬಿಬ್ಬರಾದ ಸಂಬಾಜಿ ಪಾಟೀಲ ಬೆಳಗಾವಿ ದಕ್ಷಿಣದಲ್ಲಿ ನಿಮಗೆ ಯಾರು ಬೇಕೋ ಅವರಿಗೆ ಟಿಕೆಟ್ ಕೊಡಿ ಉತ್ತರದಲ್ಲಿ ನಿಮಗೆ ಅಭ್ಯರ್ಥಿ ಸಿಗದಿದ್ದರೆ ನಾನೇ ಉತ್ತರದ ಅಭ್ಯರ್ಥಿ ಆಗಲು ಸಿದ್ಧ ಎಂದು ಸಂಬಾಜಿ ಪಾಟೀಲ ಹೇಳಿ ಸಭೆಯನ್ನು ಮುಕ್ತಾಯಗೊಳಿಸಿದ್ರು ಅಂತ ತಿಳಿದು ಬಂದಿದೆ

ಸಭೆ ನಡೆದಿದ್ದು ಕಿರಣ ಠಾಖೂರ ನೇತ್ರತ್ವದ ಲೋಕಮಾನ್ಯ ಸೊಸೈಟಿಯಲ್ಲಿ ಸಭೆಯ ನೇತ್ರತ್ವ ವಹಿಸಿದ್ದು ಸಂಬಾಜಿ ಪಾಟೀಲ ಬೆಳಗಾವಿ ದಕ್ಷಿಣದ ಅಭ್ಯರ್ಥಿ ಕಿರಣ ಸೈನಾಯಕ ಅದು ನಮ್ಮ ನಿರ್ಧಾರ ಎಂದು ಎಂಈಎಸ್ ನಗರ ಸೇವಕರು ಹೇಳುತ್ತಿದ್ದಂತೆಯೇ ಉತ್ತರದಲ್ಲಿ ಜಾಗ ಖಾಲಿ ಇದ್ದರೆ ನನಗೆ ಟಿಕೆಟ್ ಕೊಡಿ ಎಂದು ಸಂಬಾಜಿ ಪಾಟೀಲ ಹೇಳಿ ಸಭೆ ಮುಕ್ತಾಯಗೊಳಿಸಿದರು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *