Breaking News

ಬೆಳಗಾವಿಯಲ್ಲಿ ಸರ್ವಜ್ಞನ ಜಯಂತಿ ಉತ್ಸವಕ್ಕೆ ಚಾಲನೆ

ಬೆಳಗಾವಿ: ನಗರದಲ್ಲಿ ತ್ರಿಪದಿ‌ ಕವಿ ಸರ್ವಜ್ಞ ಜಯಂತಿ‌ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಕೋಟೆ ಬಳಿ ಇರುವ ಅಶೋಕ ವೃತ್ತದಲ್ಲಿ ಸರ್ವಜ್ಞ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗರ ವಿದ್ಯುಕ್ತವಾಗಿ ಚಾಲನೆ ಕೊಟ್ಟರು‌.

ಮೆರವಣಿಗೆಯಲ್ಲಿ ಜಿಲ್ಲೆಯ ವಿವಿಧ ಜಾನಪದ ಕಲಾತಂಡಗಳು ಡೊಳ್ಳು‌ಕುಣಿತ, ಲೇಜಿಮ್, ಜಾಂಝ್ ಪಥಕ್, ಜಾನಪದ ಶೈಲಿಯ‌ ನೃತ್ಯಗಳನ್ನು ಪ್ರದರ್ಶಿಸಿದವು. ಕುಂಭ ಹೊತ್ತ ಮಹಿಳೆಯರು ಗಮನಸೆಳೆದರು.

ಜಿಲ್ಲಾ ಕುಂಬಾರ ಸಮಾಜದ ಪದಾಧಿಕಾರಿಗಳು ಹಾಗೂ ಸಮಾಜದ ಸಾವಿರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರಗು ತಂದುಕೊಟ್ಟರು.

Check Also

ಬೆಳಗಾವಿ ಜಿಲ್ಲೆಯ ವೀರ ಯೋಧ ನಿಧನ

ಮೂಡಲಗಿ:ಕಲ್ಲೋಳಿ ಪಟ್ಟಣದ ವೀರ ಯೋಧ ಶ್ರೀ ಪ್ರವೀಣ್ ಸುಭಾಸ್ ಖಾನಗೌಡ್ರ (24) ಅವರು ಬುಧವಾರ ಚೆನ್ನೈನ ಭಾರತೀಯ ನೌಕಾ ಪಡೆಯಲ್ಲಿ …

Leave a Reply

Your email address will not be published. Required fields are marked *