Home / Breaking News / ಡಿಕೆ ಶಿವಕುಮಾರ್,ಹೆಬ್ಬಾಳಕರ್,ರಮೇಶ್ ಜಾರಕಿಹೊಳಿ ಒಂದೇ ಪರಿವಾರ- ಸತೀಶ್ ಜಾರಕಿಹೊಳಿ

ಡಿಕೆ ಶಿವಕುಮಾರ್,ಹೆಬ್ಬಾಳಕರ್,ರಮೇಶ್ ಜಾರಕಿಹೊಳಿ ಒಂದೇ ಪರಿವಾರ- ಸತೀಶ್ ಜಾರಕಿಹೊಳಿ

ಬೆಳಗಾವಿ- ಡಿಕೆ ಶಿವಕುಮಾರ್ ಲಕ್ಷ್ಮೀ ಹೆಬ್ಬಾಳಕರ ಮತ್ತು ರಮೇಶ್ ಜಾರಕಿಹೊಳಿ ಅವರದ್ದು ಒಂದೇ ಪರಿವಾರ ಅವರ ನಡುವೆ ಒಡಕು ಯಾಕಾಯ್ತು ಅದನ್ನು ಅವರನ್ನೇ ಕೇಳಿ ಆರು ತಿಂಗಳ ಹಿಂದೆ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಅವರಾಗಿ ಸಪೋರ್ಟ್ ಮಾಡಿದ್ರು ಅವರ ಸಪೋರ್ಟ್ ತಗೊಂಡೆ ಅಷ್ಟೇ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ರಾಜಕೀಯ ಬೆಳವಣಿಗೆ ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ

ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು
ಪ್ರತಿಭಟನಾ ನಿರತ ರೈತರ ಸಚಿವ ಡಿಕೆಶಿ ಭೇಟಿ ವಿಚಾರ
ಬೇರೆ ಜಿಲ್ಲೆಯ ನಾಯಕರು ಇಲ್ಲಿ ಬಂದು ಷರಬತ್ತು ಕುಡಿಸಿದ್ರೆ ನಾಯಕರು ಆಗಲ್ಲ
ಷರಬತ್ತು ಮತ್ತು ಕಬ್ಬಿನ ರಸದಿಂದ ನಾಯಕತ್ವ ಬರಲ್ಲ
ನಾವು ಬೇರೆ ಜಿಲ್ಲೆಯಲ್ಲಿ ಧರಣಿ ನಿತರ ಮನವೊಲಿಸಿದ್ದೇವೆ
ಆದರೇ ನಾವು ಅಲ್ಲಿ ಹೋಗಿ ಲಿಡರ್ ಆಗೋಕೆ ಆಗಲ್ಲ
ಅವರು ಇಲ್ಲಿ ಬಂದು ಲಿಡರ್ ಆಗೋಕೆ ಆಗಲ್ಲ
ಸಚಿವ ಡಿಕೆಶಿ ತಮ್ಮ ಕರ್ತವ್ಯವನ್ನು ಅಷ್ಟೇ ಮಾಡಿದ್ದಾರೆ
ಇದರಲ್ಲಿ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದು ಸತೀಶ್ ಸ್ಪಷ್ಟಪಡಿದಿದರು

ಇತ್ತೀಚೆಗೆ ಅಷ್ಟೆ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ನಾನು‌ ಬಂದಿದ್ದೇ‌ನೆ. ಕಳೆದ 20 ವರ್ಷದಿಂದ ಸಚಿವ ಡಿ.ಕೆ.ಶಿವಕುಮಾರ, ರಮೇಶ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಒಂದೇ ಕುಟುಂಬದವರಿದ್ದ ಹಾಗೆ ಅವರ ಹಳೆಯ ವ್ಯವಹಾರ ನಮಗೆ ಗೋತ್ತಿಲ್ಲ.
ಪಿಎಲ್ ಡಿ ಬ್ಯಾಂಕ್ ನಲ್ಲಿ ನಾನೇ‌ ಮಾಡುತ್ತಿದ್ದೆ. ಆದರೆ ರಮೇಶ ಜಾರಕಿಹೊಳಿ ಅವರೇ ಮಧ್ಯಸ್ಥಿಕೆ ಮಾಡಿದ್ದರು. ಜಿಲ್ಲೆಯಲ್ಲಿ ಎರಡು ಸಚಿವ ಸ್ಥಾನ ಬೇಕಿಲ್ಲ. ಎರಡು ವರ್ಷದ ನಂತರ ನನಗೆ ಸೂಕ್ತ ಸ್ಥಾನ ನೀಡುತ್ತೇನೆ ಎಂದು ಹೈಕಮಾಂಡ್ ಭರವಸೆ ನೀಡಿದೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಶಾಸಕನಾಗಿಯೂ ಅಭಿವೃದ್ಧಿ ಕಾರ್ಯ ಮಾಡಿ ಪಕ್ಷ ಸಂಘಟಿಸುತ್ತೇನೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಜಿಲ್ಲೆಯಲ್ಲಿ ಅಂತರ ಕಾಯುತ್ತಿರುವ ವಿಚಾರವಾಗಿ ಅವರಿಗೆ ಮಾಧ್ಯಮದವರೆ ಪ್ರಶ್ನಿಸಬೇಕು. ನಮ್ಮ ವ್ಯಾಪ್ತಿಯಲ್ಲಿ ನಾವು ನಗರಾಭಿವೃದ್ಧಿ ಪ್ರಾಧಿಕಾರ, ಪಾಲಿಕೆ ಹಾಗೂ ಯಮಕನಮರಡಿ ಕ್ಷೇತ್ರದದ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತು ನೀಡುತ್ತಿದ್ದೇನೆ. ಜಿಲ್ಲಾ ಉಸ್ತುವಾರಿ ಆದವರು ಸಭೆ,‌ಜನರ‌ ಸಮಸ್ಯೆಯನ್ನು ಆಲಿಸಬೇಕು ಎಂದರು.
ಬೆಳಗಾವಿಯಲ್ಲಿ ಗಾಂಜಾ ಹಾಗೂ ಮಾರಾಟ ಅವ್ಯಾಹತವಾಗಿ ನಡೆಯುತ್ತಿವೆ. ಈ ಕುರಿತು ಬೆಳಕು ಚೆಲ್ಲಿದರೆ ಸರಕಾರನೇ ಸಭೆ ನಡೆಸುವಂತೆ ಸೂಚಿಸುತ್ತದೆ.
ಅಭಿವೃದ್ಧಿಗಾಗಿ ಸದನದಲ್ಲಿ ಚರ್ಚೆ ಮಾಡಿದರೆ ಮಾತ್ರ ಅನುದಾನ ಬಿಡುಗಡೆ ಮಾಡುವುದಿಲ್ಲ. ಬೇರೆ ಸಂದರ್ಭದಲ್ಲಿಯೂ ಬಿಡುಗಡೆ ಮಾಡಬಹುದು.ಎಂದರು

Check Also

ಆಮೀಷಗಳಿಗೆ ಬಲಿಯಾಗಬೇಡಿ, -ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಪರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತಬೇಟೆ ಮುಂದುವರೆಸಿದ್ದಾರೆ‌ …

Leave a Reply

Your email address will not be published. Required fields are marked *