ಸ್ಮಶಾನದಲ್ಲಿಯೇ ಊಟ..ಸ್ಮಶಾನದಲ್ಲಿಯೇ ಜಾಗೃತಿ..ಸ್ಮಶಾನದಲ್ಲಿಯೇ ವಾಸ್ತವ್ಯ..

ಬೆಳಗಾವಿ

ಭಾರತ ರತ್ನ ಬಾಬಾ ಸಾಹೇಬ ಅಂಬೇಡ್ಕರ್ ಅವರ ಪರಿನಿರ್ವಾಣ ದಿನಾಚರಣೆಯ ದಿನವನ್ನು ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಪರಿವರ್ತನಾ ದಿನವನ್ನಾಗಿ ಆಚರಣೆ ಮಾಡುತ್ತಿದ್ದಾರೆ
ಈ ದಿನ ಇಂದು ಬೆಳಗಾವಿಯ ಸದಾಶಿವ ನಗರದಲ್ಲಿರುವ ಸ್ಮಶಾನದಲ್ಲಿ ಮಾನವ ಬಂಧುತ್ವ ವೇದಿಕೆಯ ಮುಖೇನ ಮೂಡನಂಬಿಕೆಯ ವಿರುದ್ದ ಸ್ಮಶಾನದಲ್ಲಿಯೇ ಜಾಗೃತಿ ಕಾರ್ಯಕ್ರಮಗಳು ಪ್ರಗತಿಪರ ವಿಚಾರವಾದಿಗಳಿಂದ ಉಪನ್ಯಾಸ ನಡೆಯಲಿದೆ
ಸ್ಮಶಾನದಲ್ಲಿಯೇ ಈಗ ಉಪಹಾರದ ವ್ಯೆವಸ್ಥೆ ಮಾಡಲಾಗಿದ್ದು ಸಾವಿರಾರು ಜನ ಸ್ಮಶಾನದಲ್ಲಿ ಸಮಾವೇಶ ಗೊಂಡಿದ್ದಾರೆ ಸ್ಮಶಾನದಲ್ಲಿಯೇ ಸುಮಾರು ಐವತ್ತು ಸಾವಿರ ಜನರಿಗೆ ಊಟದ ವ್ಯೆವಸ್ಥೆ ಮಾಡಲಾಗಿದೆ

ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಮಾನವ ಬಂಧುತ್ವ ವೇದಿಕೆಯ ಸಾವಿರಾರು ಜನರು ಪಾಲ್ಗೊಂಡಿದ್ದಾರೆ ದೋಣ ಕ್ಯಾಮರಾ ಮೂಲಕ ಸ್ಮಶಾನ ಯಾತ್ರೆಯ ದೃಶ್ಯಾವಳಿಗಳನ್ನು ಚಿತ್ರೀಕರಿಸಲಾಗುತ್ತಿದೆ

ಸ್ಮಶಾನದಲ್ಲಿ ಅಂಧಶ್ರಧ್ಧೆ ಹಾಗು ಮೂಡ ನಂಬಿಕೆಯನ್ನು ಹೋಗಲಾಡಿಸಿ ಮೌಢ್ಯದ ವಿರುದ್ಧ ಸೆಡ್ಡು ಹೊಡೆಯುವ ಎಲ್ಲ ರೀತಿಯ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ

ಸತೀಶ ಜಾರಕಿಹೊಳಿ ಅವರು ಸ್ಮಶಾನಕ್ಕೆ ಆಗಮಿಸಿದ್ದು ಕಾರ್ಯಕ್ರಮಕ್ಕೆ ಕ್ಷಣಗನನೆ ಆರಂಭವಾಗಿದೆ

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *