ಬೆಳಗಾವಿಯಲ್ಲಿ ಬೃಹತ್ತ ಪರಿವರ್ತನಾ ಬೈಕ್ ರ್ಯಾಲಿ

ಬೆಳಗಾವಿ-ಹಿಂದುಳಿದ ವರ್ಗದ ಧ್ವನಿ ಬಡವರ ಬಂಧು ಬೆಳಗಾವಿ ಜಿಲ್ಲೆಯ ನಾಯಕ ರಾಜ್ಯ ರಾಜಕಾರಣದ ನಿರ್ಣಾಯಕ ಗೋಕಾಕ ಹುಲಿ ಮಾಸ್ಟರ್ ಮೈಂಡ್ ಸತೀಶ ಜಾರಕಿಹೊಳಿ ಅವರ ಮಾನವ ಬಂಧುತ್ವ ವೇದಿಕೆ ಡಿ ೬ ರಂದು ಬೆಳಗಾವಿಯ ಸದಾಶಿವ ನಗರದ ರುದ್ರ ಭೂಮಿಯಲ್ಲಿ ಮೌಡ್ಯದ ವಿರುದ್ಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಲು ಮಾನವ ಬಂಧುತ್ವ ವೇದಿಕೆಯ ನೂರಾರು ಕಾರ್ಯಕರ್ತರು ನಗರದಲ್ಲಿ ಬೈಕ್ ರ್ಯಾಲಿ ನಡೆಸಿದರು
ನಗರದ ಸಾಹಿತ್ಯ ಭವನದಿಂದ ಬೈಕ್ ರ್ಯಾಲಿ ಆರಂಭ ವಾಯಿತು ಈ ರ್ಯಾಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಿತು

ಬೆಳಗಾವಿಯ ಚನ್ನಮ್ಮ ವೃತ್ತದಿಂದ ಆರಂಭಗೊಂಡ ಬೈಕ್ ರ್ಯಾಲಿ ಕಾಲೇಜು ರಸ್ತೆ,ಕ್ಯಾಂಪ್ ಟಿಳಕವಾಡಿ ಹಿಂದವಾಡಿ ವಡಗಾಂವ ಖಾಸಬಾಗ  ಉದ್ಯಮ ಬಾಗ ಹನುಮಾನ ನಗರ ಮಾರುತಿ ಗಲ್ಲಿ ಖಡೇ ಬಝಾರ ಸದಾಶಿವ ನಗರ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ಸಂಚರಿಸಿ ಮೂಡ ನಂಬಿಕೆ ವಿರುದ್ಧ ಜಾಗೃತಿ ಮೂಡಿಸಿತು

ರವಿ ನಾಯ್ಕರ್ ರಾಜು ರಾಸಿಂಗೆ ಹಾಗು ಮಾನವ ಬಂದುತ್ವ ವೇದಿಕೆಯ ಪದಾಧಿಕಾರಿಗಳು ಐನೂರಕ್ಕು ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *