ಲಕ್ಷ್ಮೀ ನಾರಾಯಣ ಬಾಯಿಗೆ ಬೀಗ ಹಾಕಿ- ಶಂಕರ ಮುನವಳ್ಳಿ…..

ಬೆಳಗಾವಿ- ಬೆಳಗಾವಿ ದಕ್ಷಿಣದಿಂದ ಸ್ಪರ್ದೆ ಮಾಡಲು ಸಿಎಂ ಹೇಳಿದ್ದಾರೆ ಸೋನಿಯಾ ಗಾಂಧೀ ಒಪ್ಪಿದ್ದಾರೆ ರಮೇಶ ಜಾರಕಿಹೊಳಿ ಸಪೋರ್ಟ್ ಮಾಡುವ ಭರವಸೆ ನೀಡಿದ್ದಾರೆ ಎಂದು ಸುಳ್ಳು ಹೇಳಿ ದಕ್ಷಿಣ ಮತಕ್ಷೇತ್ರದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಠಿ ಮಾಡುತ್ತಿರುವ ವಿಧಾನ ಬ ಪರಿಷತ್ತ ಸದಸ್ಯ ಎಂ ಡಿ ಲಕ್ಷ್ಮೀ ನಾರಾಯಣ ಅವರ ಬಾಯಿಗೆ ಬೀಗ ಹಾಕಿ ಇಲ್ಲಾ ಅಂದ್ರೆ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಒತ್ತಾಯಿಸಿದ್ದಾರೆ

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಅವರು ಬೆಳಗಾವಿ ದಕ್ಷಿಣ ಮತ ಕ್ಷೇತ್ರದಲ್ಲಿ ಹಲವಾರು ದಶಕಗಳಿಂದ ಪಕ್ಷದ ಸಂಘಟನೆ ಮಾಡಿದ ಕಾರ್ಯಕರ್ತರಿದ್ದಾರೆ ಬೇರೆ ಪ್ರದೇಶದಿಂದ ಬೆಳಗಾವಿ ದಕ್ಷಿಣ ಕ್ಷೇತ್ರಕ್ಕೆ ಒಲಸೆ ಬರಲು ನಾವು ಅವಕಾಶ ನೀಡುವದಿಲ್ಲ ಪಕ್ಷಕ್ಕಾಗಿ ದುಡಿದ ಸ್ಥಳೀಯ ಪ್ರಾಮಾಣಿಕ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಸುಳ್ಳು ಹೇಳಿ ಕಾರ್ಯಕರ್ತರ ದಿಕ್ಕು ತಪ್ಪಿಸುತ್ತಿರುವ ಲಕ್ಷ್ಮೀ ನಾರಾಯಣ ವಿರುದ್ಧ ಕ್ರಮ ಜರುಗಿಸಬೇಕು ಎಂದು ಶಂಕರ ಮುನವಳ್ಳಿಬ ಒತ್ತಾಯಿಸಿದ್ದಾರೆ

ಚುನಾವಣೆಗೆ ಮುನ್ನ ಕೆಲವು ಮಾದ್ಯಮಗಳು ಚುನಾವಣೆ ಪೂರ್ವ ಸಮೀಕ್ಷೆ ನಡೆಸುವದು ಸರಿಯಲ್ಲ ಪೂರ್ವ ಸಮೀಕ್ಷೆ ಮತದಾರರನ್ನು ಗೊಂದಲಕ್ಕೆ ಸಿಲುಕಿಸುತ್ತದೆ ಚುನಾವಣಾ ಪೂರ್ವ ಸಮೀಕ್ಷೆ ನಡೆಸದಂತೆ ಮಾದ್ಯಮಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡದಂತೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಮುನವಳ್ಳಿ ತಿಳಿಸಿದರು

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *