Breaking News
Home / Breaking News / ಕೃಷ್ಣಾ ನಿನ್ನನ್ನು ಬಿಟ್ಟು ಇರಲಾರೆವು…ಬೇರೆ ಪಕ್ಷಕ್ಕೆ ನಿಮ್ಮನ್ನು ಬಿಡಲಾರೆವು

ಕೃಷ್ಣಾ ನಿನ್ನನ್ನು ಬಿಟ್ಟು ಇರಲಾರೆವು…ಬೇರೆ ಪಕ್ಷಕ್ಕೆ ನಿಮ್ಮನ್ನು ಬಿಡಲಾರೆವು

ಬೆಳಗಾವಿ- ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣಾ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ ಹಿನ್ನಲೆಯಲ್ಲಿ ಮನನೊಂದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ಸೇರಿ ಕೃಷ್ಣಾ ನಿಮ್ಮನ್ನು ಬಿಟ್ಟು ಇರಲಾರೆವು ಬೇರೆ ಪಕ್ಷಕ್ಕೆ ಹೋಗಲು ನಿಮ್ಮನ್ನು ಬಿಡಲಾರೆವು ಎನ್ನುವ ಮನದಾಳದ ಇಂಗಿತವನ್ನು ಹೊರಹಾಕಿದರು

ಶಂಕರ ಮುನವಳ್ಳಿ ಅವರ ನೇತ್ರತ್ವದಲ್ಲಿ ಸಭೆ ಸೇರಿದ ಬೆಳಗಾವಿ ಜಿಲ್ಲೆಯ ನಿಷ್ಠಾವಂತ ಕಾರ್ಯಕರ್ತರು ಎಸ್ ಎಂ ಕೃಷ್ಣಾ ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದು ಅವರಿಗಾದ ಅವಮಾನ ಸಹಿಸುವದಿಲ್ಲ,ರಾಜ್ಯದ ಕಾಂಗ್ರೆಸ್ ನಾಯಕರು ಅವರನ್ನು ಮನವೊಲಿಸಬೇಕು ಅವರ ಮಾರ್ಗದರ್ಶನ ಪಕ್ಷಕ್ಕೆ ಬೇಕು ಎನ್ನುವ ಅಭಿಪ್ರಾಯವನ್ನು ಕಾರ್ಯಕರ್ತರು ಮಂಡಿಸಿದರು

ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಶಂಕರ ಮುನವಳ್ಳಿ ಫೆ ೧೩ ರಂದು ಎಸ್ ಎಂ ಕೃಷ್ಣಾ ಅವರನ್ನು ಮನವೊಲಿಸಲು ನಿಷ್ಠಾವಂತ ಕಾಂಗ್ರೆಸ ಕಾರ್ಯಕರ್ತರು ಬೆಂಗಳೂರಿಗೆ ತೆರಳಿ ಅವರ ನಿವಾಸದ ಎದುರು ಧರಣಿ ನಡೆಸುತ್ರೇವೆ ಬೆಳಗಾವಿ, ಧಾರವಾಡ,ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಾರು ಜನ ಕಾರ್ಯಕರ್ತರು ಭಾಗವಹಿಸುತ್ತಾರೆ ಎಂದು ತಿಳಿಸಿದರು

ಸಭೆಯಲ್ಲಿ ಬಾಬುಲಾಲ ಬಾಗವಾನ ಸದಾ ಕೋಲಕಾರ ಸೇರಿದಂತೆ ಜಿಲ್ಲೆಯ ಹಲವಾರು ಜನ ಕಾಂಗ್ರೆಸ್ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *