Breaking News
Home / Breaking News / ಶ್ರೀರಾಮ ಸೇನೆ ಕಾರ್ಯಕರ್ತರನ್ನು ಬಂಧಿಸಲು ಮಹಿಳಾ ಸಂಘಟನೆಗಳ ಒತ್ತಾಯ

ಶ್ರೀರಾಮ ಸೇನೆ ಕಾರ್ಯಕರ್ತರನ್ನು ಬಂಧಿಸಲು ಮಹಿಳಾ ಸಂಘಟನೆಗಳ ಒತ್ತಾಯ

ಬೆಳಗಾವಿ-

ಕೆಲ ದಿನಗಳ ಹಿಂದೆ ಶ್ರೀರಾಮ ಸೇನೆ ಕಾರ್ಯಕರ್ತರು ಬೆಳಗಾವಿಯ ಕೋರ್ಟ ಆವರಣದಲ್ಲಿ ಮಹಿಳಾ ಸಂಘಟನೆಯ ಪದಾದಿಕಾರಿ ಮಹಿಹಳೆ ಮೇಲೆ ಹಲ್ಲೆ ಮಾಡಿ ಆಕೆಯ ಮಂಗಳ ಸೂತ್ರ ಹರಿದು ಹಾಕಿದ್ದು, ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಇನ್ನೂವರೆಗೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿ ವಿವಿಧ ಮಹಿಳಾ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಚವಾಟಗಲ್ಲಿಯ ಸಮಾಜ ಸೇವಕಿ ಅಕ್ಕಾತಾಯಿ ಸುತಾರ ಇವಳ ಮೇಲೆ ಶ್ರೀರಾಮ ಸೇನೆ ಕಾರ್ಯಕರ್ತರು ಹಲ್ಲೆ‌ನಡೆಸಿ ಜೀವ ಬೆದರಿಕೆ ಹಾಕಿ ಮಂಗಳ ಸೂತ್ರ ಹರಿದು ಹಾಕಿದ್ದಾರೆ ಎಂದು ಮಹಿಳಾ ಸಂಘಟನೆಗಳು ಆರೋಪಿಸಿದ್ದು, ಶ್ರೀರಾಮ ಸೇನೆ ಕಾರ್ಯಕರ್ತರಾದ ನಂದು ಇಂದಲಕರ ಹಾಗೂ ಪರಶುರಾಮ ದೇಸಾಯಿ ಅವರನ್ನು ಕೂಡಲೆ ಬಂದಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮಹಿಳೆ ಮೇಲೆ ಸಾರ್ವಜನಿಕ ವಾಗಿ ಹಲ್ಲೆ ಮಾಡಿ ಸಮಾಜ ಸೇವಕಿ ಒಬ್ಬಳನ್ನು ಅವಮಾನಿಸಿದ ಇಬ್ಬರೂ ಆರೋಪಿಗಳನ್ನು ಬಂಧಿಸದಿದ್ದರೆ ಎಲ್ಲ ಮಹಿಳಾ ಸಂಘಟನೆಗಳು ಕೂಡಿ ಉಗ್ರಸ್ವರೂಪದ ಹೋರಾಟ ಮಾಡಲಾಗುವುದು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

Check Also

ಹೃದಯಾಘಾತದಿಂದ ನರೇಗಾ ಕಾರ್ಮಿಕ ಸಾವು

ಬೈಲಹೊಂಗಲ: ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಸ್ಥಳದಲ್ಲಿಯೇ ಸೋಮವಾರ ಸಾವನ್ನಪ್ಪಿದ್ದಾರೆ. ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತ …

Leave a Reply

Your email address will not be published. Required fields are marked *