Breaking News
Home / Breaking News / ಬೆಳಗಾವಿ ನಗರದಲ್ಲಿರುವ ಬಾಂಗ್ಲಾ ದೇಶಿಯರನ್ನು ಹೊರಗೆ ಹಾಕುವಂತೆ ಶ್ರೀರಾಮ ಸೇನೆ ಒತ್ತಾಯ

ಬೆಳಗಾವಿ ನಗರದಲ್ಲಿರುವ ಬಾಂಗ್ಲಾ ದೇಶಿಯರನ್ನು ಹೊರಗೆ ಹಾಕುವಂತೆ ಶ್ರೀರಾಮ ಸೇನೆ ಒತ್ತಾಯ

ಬೆಳಗಾವಿ

ನಗರದಲ್ಲಿ ಅಕ್ರಮ ಬಾಂಗ್ಲಾದೇಶದಿಂದ ವಲಸೆ ಬಂದವರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಸೋಮವಾರ ಶ್ರೀರಾಮ ಸೇನೆಯ ಕಾರ್ಯಕತ್ರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.

ಸುಪ್ರಿಂಕೋರ್ಟ್ ನಿರ್ದೇಶನದ ಮೆರೆಗೆ ಆಸ್ಸಾಂ ರಾಜ್ಯದಲ್ಲಿ ನಡೆದ ಪೌರತ್ ನೋಂದಣಿ ಅಭಿಯಾನದಲ್ಲಿ 40 ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿಗರು ಇರುವ ಬಗ್ಗೆ ಆಘಾತಕಾರಿ ವಿಷಯ ಹೊರ ಬಿದಿರುತ್ತದೆ. ಈ ರೀತಿ ಇಡೀ ದೇಶಾದ್ಯಂತ ಇಂಥ ಬಾಂಗ್ಲಾದೇಶದ ರಹವಾಸಿಗಳು ಅಕ್ರಮವಾಗಿ ನುಸುಳಿದ್ದಾರೆ. ಬೆಳಗಾವಿ ನಗರದಲ್ಲಿಯು ವಾಸವಿರುವ ಅನುಮಾನವಿದ್ದು ಕೂಡಲೇ ಅವರನ್ನು ದೇಶದಿಂದ ಗಡಿಪಾರು ಮಾಡುಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ದೇಶದ ಅಂತರಿಕ, ಭದ್ರತೆ, ಸಮಾಜಿ, ಆರ್ಥಿಕ, ರಾಜಕೀಯ, ಅನೈತಿಕ ವಿಷಯಗಳಿಗೆ ಈ ಅಕ್ರಮ ಬಾಂಗ್ಲಾ ರಹವಾಸಿಗಳಿಂದ ತೊಂದರೆಯಾಗುತ್ತಿದೆ. ಈ ವಿಷಯವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ರಹವಾಸಿಗಳನ್ನು ಸರಕಾರ ಗಡಿಪಾರು ಮಾಡಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವಿಕ್ರಮ ಬಣಗೆ, ಶಿವಾಜಿ ನಾಗನಾಯಕ, ಪರಶುರಾಮ ಹರದಾಳೆ, ರಾಜು ಮೇಸ್ತ್ರಿ, ಶೇಖು ಕದಂ, ಮುತ್ತಣ್ಣ ಕಾಂಬಳೆ, ಅರುಣ ಧಾರವಾಡಕರ, ಯಲ್ಲಪ್ಪ ದೊಡವಾಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *