ಬಾಂಬ್ ಬೆದರಿಕೆ ಕರೆ ಮಾಡಿದ ಬೆಳಗಾವಿ ಯುವತಿಯ ಮನೆಗೆ ಬೆಂಗಳೂರು ಪೋಲೀಸರು…

ಬೆಳಗಾವಿ-ಬೆಂಗಳೂರಿನ ಖಾಸಗಿ ಕಂಪನಿಗೆ ಹುಸಿ ಬಾಂಬ್ ಕರೆ ಮಾಡಿದ ಬೆಳಗಾವಿಯ ಯುವತಿಯ ಮನೆಗೆ ಬೆಂಗಳೂರು ಪರಪ್ಪನ ಅಗ್ರಹಾರ ಠಾಣೆಯ ಪೋಲೀಸರು ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.

ಬೆಳಗಾವಿಯ ಶಾಹು ನಗರದಲ್ಲಿರುವ ಶೃತಿ ಶೆಟ್ಟಿ ಎಂಬ ಯುವತಿಯು ತನ್ನ ತಾಯಿಯ ಮೋಬೈಲ್ ನಿಂದ ಬೆಂಗಳೂರಿನ ಟಿಸಿಎಸ್ ಕಂಪನಿಯ ಕಚೇರಿಗೆ ಹುಸಿ ಬಾಂಬ್ ಕರೆ ಮಾಡಿ ಬೆದರಿಕೆ ಹಾಕಿದ ಆರೋಪದ ವಿಚಾರದಲ್ಲಿ ಬೆಂಗಳೂರಿನ ಪೋಲೀಸರ ತಂಡ ಬೆಳಗಾವಿಗೆ ಆಗಮಿಸಿ ಇಂದು ಸಂಜೆ ಯುವತಿ ಶೃತಿ ಶೆಟ್ಟಿ ಮತ್ತು ಅವಳ ಪೋಷಕರನ್ನು ವಿಚಾರಣೆ ಮಾಡಿದ್ದಾರೆ.

ಪೋಷಕರೊಂದಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣೆಗೆ ವಿಚಾರಣೆಗೆ ಬರುವಂತೆ ಶೃತಿ ಶೆಟ್ಟಿಗೆ, ಬೆಂಗಳೂರಿನ ಪೋಲೀಸರು ನೋಟೀಸ್ ಕೊಟ್ಟಿದ್ದಾರೆ.

ಬೆಳಗಾವಿಯ ಶಾಹುನಗರದ ನಿವಾಸಿಯಾಗಿರುವ ಶೃತಿ ಶೆಟ್ಟಿ ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು, ಉನ್ನತ ವ್ಯಾಸಂಗದ ಹಿನ್ನಲೆಯಲ್ಲಿ ಕಂಪನಿಯ ಜಾಬ್ ಬಿಟ್ಟಿದ್ದಳು, ವ್ಯಾಸಂಗ ಮುಗಿಸಿದ ಬಳಿಕ ಕಂಪನಿಯವರು ರಿಜ್ವಾಯಿನ್ ಪುನರ್ ನೇಮಕ ಮಾಡಿಕೊಳ್ಳಲು ನಿರಾಕರಿಸಿದ ಹಿನ್ನಲೆಯಲ್ಲಿ ಶೃತಿ ಶೆಟ್ಟಿ ಕಂಪನಿಗೆ ಹುಸಿ ಬಾಂಬ್ ಕರೆ ಮಾಡಿದ್ದಳು ಎಂದು ಹೇಳಲಾಗಿದ್ದು ಬೆಂಗಳೂರಿನ ಪೋಲೀಸರ ತಂಡ ಎಪಿಎಂಸಿ ಠಾಣೆ ಪೋಲೀಸರ ಸಹಾಯ ಪಡೆದು ಯುವತಿ ಶೃತಿ ಶೆಟ್ಟಿಯನ್ನು ವಿಚಾರಿಸಿ,ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಬರುಂತೆ ನೋಟೀಸ್ ಕೊಟ್ಟು ತೆರಳಿದ್ದಾರೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *