Breaking News

ಬೆಳಗಾವಿ ಜಿಲ್ಲೆಯ ಅರಣ್ಯ ಪರಿಸರದಲ್ಲಿ ನಟ ಸುನೀಲ್ ಶೆಟ್ಟಿ ಎಂಜಾಯ್….

ರಾಕಸಕ್ಕೊಪ್ಪ ಪರಿಸರದಲ್ಲಿ ನಟ ಸುನೀಲ್ ಶೆಟ್ಟಿ ಎಂಜಾಯ್….

ಬೆಳಗಾವಿ – ಹಿಂದೀ ಚಿತ್ರನಟ ಸುನೀಲ್ ಶೆಟ್ಟಿ ಸದ್ಸಿಲ್ಲದೇ ಬೆಳಗಾವಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸುತ್ತಾಡಿ ಬೆಳಗಾವಿ ಜಿಲ್ಲೆಯಲ್ಲಿ ಕೃಷಿ ಆಧಾರಿತ ಹೊಸ ಉದ್ಯೋಗ ಆರಂಭಿಸುವ ಮೆಸ್ಸೇಜ್ ಬಿಟ್ಟು ಹೋಗಿದ್ದಾರೆ.

ಕುಂದಾನಗರಿಯಲ್ಲಿ ಕೃಷಿ, ವ್ಯವಸಾಯಕ್ಕೆ ಸಂಬಂಧಪಟ್ಟು ಉದ್ಯಮ ಪ್ರಾರಂಭಿಸಲು ಬಾಲಿವುಡ್ ನಟ ಸುನೀಲ್​ ಶೆಟ್ಟಿ ಆಸಕ್ತಿ ವಹಿಸಿದ್ದಾರೆ.
ಉದ್ಯಮ ಪ್ರಾರಂಭಕ್ಕಾಗಿ ಬೆಳಗಾವಿ ತಾಲೂಕಿಗೆ ಆಗಮಿಸಿದ ಅವರು, ಬೆಳಗುಂದಿ, ರಾಕಸ್​ಕೊಪ್ಪ, ಜಾಂಬೊಟಿ ಮತ್ತಿತರ ಗ್ರಾಮಗಳ ವೀಕ್ಷಣೆ ಮಾಡಿದ್ದಾರೆ. ರಾಕಸಕೊಪ್ಪ ಶಿವಾಲಯದಲ್ಲಿ ಪೂಜೆ ಸಲ್ಲಿಸಿದ, ಸುತ್ತಲಿನ ಅರಣ್ಯದಲ್ಲಿ ಟ್ರಕಿಂಗ್​ ಕೂಡ ನಡೆಸಿದ್ದಾರೆ.

ರವಿವಾರ ರಾತ್ರಿ ಟೆಂಡುಲ್ಕರ್​ ಫಾರ್ಮ್​ಹೌಸ್​ನಲ್ಲಿ ವಾಸ್ತವ್ಯ ಹೂಡಿದ್ದ ಅವರು ಸೋಮವಾರ ಕೆಲವು ಸ್ಥಳಗಳನ್ನು ವೀಕ್ಷಣೆ ಮಾಡಿ ಮುಂಬೈಗೆ ಮರಳಿದ್ದಾರೆ ಎಂದು ತಿಳಿದು ಬಂದಿದೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *