Breaking News

ತಿಲ್ಲಾರಿ ಡ್ಯಾಮ್ ನಲ್ಲಿ ಬೆಳಗಾವಿಯ ಇಬ್ಬರು ಯುವಕರು ನೀರು ಪಾಲು

ಬೆಳಗಾವಿ- ಸಮೀಪದ ತಿಲ್ಲಾರಿ ಡ್ಯಾಮ್ ಪರಿಸರದಲ್ಲಿ ಸ್ನೇಹಿತನ ಜನ್ಮ ದಿನ ಆಚರಿಸಲು ಹೋದ ಬೆಳಗಾವಿಯ ಇಬ್ಬರು ನರ್ಸಿಂಗ್ ಸ್ಟೂಡೆಂಟ್ ಗಳು ನೀರು ಪಾಲಾದ ಘಟನೆ ನಡೆದಿದೆ

ಬೆಳಗಾವಿಯ ನರ್ಸಿಂಗ್ ಕಾಲೇಜೊಂದರಲ್ಲಿ ಓದುತ್ತಿದ್ದ ಯರಗಟ್ಟಿಯ 22 ವರ್ಷದ ಸೋಹೇಲ್ ಗುದಗಿ,ಹಾಗು ಶಿವಶಂಕರ ಪಾಟೀಲ ಅವರು ತಲ್ಲಾರಿ ಡ್ಯಾಮಿನ ಹಿನ್ನೀರಿನಲ್ಲಿ ನಾಪತ್ತೆಯಾಗಿದ್ದಾರೆ

ಎರಡು ದಿನದ ಹಿಂದೆ ತಲ್ಲಾರಿ ಡ್ಯಾಮ್ ಹಿನ್ನೀರಿನ ಪರಿಸರದಲ್ಲಿ ಧಾಮಣೆ ಗ್ರಾಮದ ಬಳಿ ಐದು ಜನ ಸ್ನೇಹಿತರು ಸೇರಿಕೊಂಡು ಸ್ನೇಹಿತನೊಬ್ಬನ ಜನ್ಮ ದಿನ ಆಚರಿಸಲು ತಡರಳಿದ್ದರು

ಡ್ತಾಮಿನ ಹಿನ್ನೀರಿನಲ್ಲಿ ಈಜುವ ಸಂಧರ್ಭದಲ್ಲಿ ಮುಳುಗುತ್ತಿದ್ದ ಗೆಳೆಯನನ್ನು ಉಳಿಸಲು ಹೋಗಿ ಮತ್ತೊಬ್ಬ ಗೆಳೆಯ ನೀರು ಪಾಲಾಗಿದ್ದಾನೆ ಎಂದು ತಿಳಿದು ಬಂದಿದೆ

ಎರಡು ದಿನಗಳಿಂದ ನಾಪತ್ತೆ ಆಗಿರುವ ಇಬ್ಬರು ಯುವಕರನ್ನು ಶೋಧಿಸುವ ಕಾರ್ಯಾಚರಣೆ ಮುಂದುವರೆದಿದ್ದು ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ನೀರು ಪಾಲಾದ ಇಬ್ಬರು ಯುವಕರಲ್ಲಿ ಒಬ್ಬ ಯರಗಟ್ಟಿ ಗ್ರಾಮದವ ಇನ್ನೊಬ್ಬ ಕರಗುಪ್ಪಿ ಗ್ರಾಮದವನಾಗಿದ್ದಾನೆ

Check Also

ಖಡಕ್ ಪೋಲೀಸ್ ಅಧಿಕಾರಿ ಭರಮಣಿಗೆ ಅವಮಾನ, ಸಿಎಂ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಳಗಾವಿ-ಸಿಎಂ ಖುರ್ಚಿ ಕಳೆದುಕೊಳ್ಳುವ ಭೀತಿಯಲ್ಲಿರುವ ಸಿದ್ರಾಮಯ್ಯ ಸಹನೆ ಕಳೆದುಕೊಂಡಿದ್ದು ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿಗಳ ಜೊತೆ ಅಸಭ್ಯವಾಗಿ ವರ್ತಿಸತ್ತಿದ್ದಾರೆ,ಮುಖ್ಯಮಂತ್ರಿಗಳ ಅಸಭ್ಯ ವರ್ತನೆಯಿಂದ …

Leave a Reply

Your email address will not be published. Required fields are marked *