ಶಕ್ತಿ ಕೇಂದ್ರವಾದ ಬೆಳಗಾವಿ ನಗರ… ಕೇಂದ್ರಬಿಂದುವಾದ ಹೊಟೇಲ್ UK 27

ಎಲ್ಲರೂ ಇಲ್ಲೇ ಇದ್ದಾರೆ,ಬೇಕಾಗಿದ್ದನ್ನು ಹೇಳಲು ನಾ..ಒಲ್ಲೇ ಅಂತೀದ್ದಾರೆ…!!

ಬೆಳಗಾವಿ- ಮಾಜಿ ಸಚಿವ ಉಮೇಶ್ ಕತ್ತಿ ಒಡೆತನದ ಯು.ಕೆ 27 ಹೊಟೇಲ್ ನಲ್ಲಿ ರಾಜ್ಯ ಸರ್ಕಾರವೇ ಠಿಖಾನಿ ಹೂಡಿದ್ದು,ಇದೇ ಹೊಟೆಲ್ ನಲ್ಲಿ ಮುಖ್ಯಮಂತ್ರಿ,ಬಿ.ಎಸ್ ಯಡಿಯೂರಪ್ಪ ಸೇರಿ ಬೆಜೆಪಿಯ ವರಿಷ್ಠರು ಈಗ ಬಿಜೆಪಿಯ ಕೋರ್ ಕಮೀಟಿ ಸಭೆ ನಡೆಸುತ್ತಿದ್ದಾರೆ.

ಹೊಟೇಲ್ ಎದುರುಗಡೆ ತಾತ್ಕಾಲಿಕ ಮೀಡಿಯಾ ಸೆಂಟರ್ ಕೂಡ ಶುರುವಾಗಿದೆ. ಇಲ್ಲಿ ಬಹುತೇಕ ಎಲ್ಲ ನಾಯಕರು ಮಾತಾಡಿದ್ದಾರೆ,ಎಲ್ಲರಿಗೂ ಮಾದ್ಯಮ ಮಿತ್ರರು ಕೇಳುವ ಸಾಮಾನ್ಯ ಪ್ರಶ್ನೆ ಏನೆಂದರೆ,ಸಚಿವ ಸಂಪುಟದ ವಿಸ್ತರಣೆ ಯಾವಾಗ ? ಈ ಪ್ರಶ್ನೆಗೆ ಬಹುತೇಕ ಎಲ್ಲ ನಾಯಕರು ಒಂದೇ ಧಾಟಿಯಲ್ಲಿ ಮಾತಾಡಿದ್ದಾರೆ,ಇದು ಮುಖ್ಯಮಂತ್ರಿಗಳ ಪರಮಾಧಿಕಾರ ಬಿಜೆಪಿಯ ಆಂತರಿಕ ವಿಚಾರ ಅದನ್ನು ಬಹಿರಂಗವಾಗಿ ಚರ್ಚೆ ಮಾಡೋಲ್ಲ ಅಂತೀದ್ದಾರೆ,ಈ ಬಗ್ಗೆ ಮಾತನಾಡಲು ನಾ ಒಲ್ಲೇ ಅಂತೀದ್ದಾರೆ.

ಬೆಳಗಾವಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಕೂಡಾ ಇದೇ ಧಾಟಿಯಲ್ಲಿ ಮಾತಾಡಿದ್ರು,
ಸರ್ಕಾರದ ಸಾಧನೆಯನ್ನು ಪಕ್ಷದ ಕಾರ್ಯಕರ್ತರಿಗೆ ತಲುಪಿಸಲು ಸಭೆ ಮಾಡುತ್ತಿದ್ದೇವೆ ಪಕ್ಷದ ದೃಷ್ಟಿಯಿಂದ ಕರ್ನಾಟಕ ಮಹತ್ವದ ರಾಜ್ಯ. ರಾಜ್ಯದಲ್ಲಿ ಸಂಪುಟ ವಿಸ್ತರಣೆ ವಿಚಾರ. ಈ ಬಗ್ಗೆ ಸಿಎಂ ಯಡಿಯೂರಪ್ಪ ಜತೆಗೆ ಚರ್ಚೆ ಮಾಡುವೆ, ಚರ್ಚೆ ಬಳಿಕ ನಿರ್ಧಾರ ಮಾಡಲಿದ್ದೇವೆ. ವರಿಷ್ಠರಿಂದ ತಂದಿರೋ ಸಂದೇಶದ ಬಗ್ಗೆ ಕೋರ್ ಕಮಿಟಿಯಲ್ಲಿ ಚರ್ಚೆ ಮಾಡ್ತೀನಿ
ಬಹಿರಂಗ ವಾಗಿ ಹೇಳಲು ಆಗಲ್ಲ,ಇದು ನಮ್ಮ ಆಂತರಿಕ ವಿಚಾರ ಈ ಬಗ್ಗೆ ಬಹಿರಂಗ ಚರ್ಚೆ ಮಾಡೋಲ್ಲ ಅಂದ್ರು…

ಒಟ್ಟಾರೆ ಬೆಳಗಾವಿ ಈಗ ಶಕ್ತಿ ಕೇಂದ್ರವಾಗಿದೆ,ಬೆಳಗಾವಿಯ ಹೊಟೇಲ್ ಯು.ಕೆ 27 ಕೇಂದ್ರ ಬಿಂದುವಾಗುದೆ.

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *