ಕತ್ತಿ ಸಹೋದರರಿಗೆ ಶಾಕ್, ಬಂಡಾಯದ ಬಲೆಯಲ್ಲಿ ಚಿಕ್ಕೋಡಿ ಲಾಕ್, ಜೊಲ್ಲೆಗೆ ಬಿಜೆಪಿ ಬಹುಪರಾಕ್..!

ಬೆಳಗಾವಿ:ತೀವ್ರ‌ ಕುತೂಹಲ ಕೆರಳಿಸಿದ್ದ ಚಿಕ್ಕೋಡಿ ‌ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆ ‌ಆಗಿದ್ದು, ಕತ್ತಿ ಸಹೋದರರಿಗೆ ತೀವ್ರಮುಖಭಂಗವಾಗಿದೆ.

ಕೊನೆ ಕ್ಷಣದಲ್ಲಿ ಉದ್ಯಮಿ ಅಣ್ಣಾಸಾಹೇಬ್ ಜೊಲ್ಲೆಗೆ ಬಿಜೆಪಿ ಟಿಕೆಟ್ ನೀಡಿದೆ. ಹೀಗಾಗಿ‌ ಚಿಕ್ಕೋಡಿ ಕ್ಷೇತ್ರ ಬಂಡಾಯದ ಬಲೆಗೆ ಸಿಲುಕುವುದು ಬಹುತೇಕ ಖಚಿತ‌ ಎನ್ನಲಾಗುತ್ತಿದೆ.
ಟಿಕೆಟ್ ಕೈ ತಪ್ಪಿದ್ದರಿಂದ ಶಾಕ್ಗೆ‌ ಒಳಗಾಗಿರುವ ಕತ್ತಿ ಸಹೋದರರು ಮುಂದಿನ ನಡೆ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ.
ಚಿಕ್ಕೋಡಿ ಕ್ಷೇತ್ರದ ಟಿಕೆಟ್ ಘೋಷಣೆ ವೇಳೆ
ಆರ್ ಎಸ್ ಎಸ್ ಪ್ರಭಾವ ‌ವರ್ಕೌಟ್ ಆಗಿದೆ. ಈ ಸಂಗತಿಯೇ ನಾಲ್ಕು ದಶಕಗಳಿಂದ ರಾಜಕಾರಣ ಮಾಡುತ್ತ ರಾಜ್ಯ ಮಟ್ಟದಲ್ಲಿ ಪ್ರಭಾವ ಹೊಂದಿದ್ದ ಕತ್ತಿ ಸಹೋದರರಿಗೆ ತೀವ್ರ ಹಿನ್ನಡೆ ಆಗಿದೆ.

Check Also

ಮದುವೆ ಆಗದೆ ಜೀವನದಲ್ಲಿ ಜಿಗುಪ್ಸೆ : ಇಬ್ಬರು ಸಹೋದರರು ವಿಷ ಸೇವಿಸಿ ಆತ್ಮಹತ್ಯೆ

ಸಂಕೇಶ್ವರ : ಮದುವೆ ಆಗದೆ ಜೀವನದಲ್ಲಿ ಜಿಗುಪ್ಸೆ ಗೊಂಡಿದ್ದ ಇಬ್ಬರು ಸಹೋದರರು ವಿಷಕಾರಿ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ …

Leave a Reply

Your email address will not be published. Required fields are marked *