ವಿನಯ ಕುಲಕರ್ಣಿಗೆ ಕೊನೆಗೂ ಸಿಕ್ತು ಜಾಮೀನು….!!!

ಬೆಳಗಾವಿ- ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ,ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಕೊನೆಗೂ ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದು ವಿನಯ ಕುಲಕರ್ಣಿ ಅವರ ಅಭಿಮಾನಿಗಳ ಪಡೆಯಲ್ಲಿ ವಿಜಯೋತ್ಸವ,ಶುರುವಾಗಿದೆ.

ಕೊಲೆ ಪ್ರಕರಣದ ಆರೋಪದಲ್ಲಿ ಜೈಲುವಾಸ ಅನುಭವಿಸುತ್ತಿದ್ದ ವಿನಯ ಕುಲಕರ್ಣಿ ಅವರುಗೆ ಜಾಮೀನು ಸಿಕ್ಕಿರುವ ವಿಷಯ ಈಗ ಅವರ ಅಭಿಮಾನಿಗಳಲ್ಲಿ ಉತ್ಸಾಹದ ವಾತಾವರಣ ಸೃಷ್ಠಿ ಮಾಡಿದೆ.

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇರುವ ವಿನಯ ಕುಲಕರ್ಣಿ ಅವರನ್ನು ಸ್ವಾಗತಿಸಲು ರಾಜ್ಯದ ಮೂಲೆ,ಮೂಲೆಗಳಿಂದ ಅವರ ಅಭಿಮಾನಿಗಳು ಬೆಳಗಾವಿಗೆ ಆಗಮಿಸುತ್ತಿದ್ದಾರೆ.

ಆದ್ರೆ ಈಗಲೇ ಅಭಿಮಾನಿಗಳು ಬೆಳಗಾವಿಗೆ ಬರೋದು ಬೇಡ,ಯಾಕಂದ್ರೆ ಸುಪ್ರೀಂ ಕೋರ್ಟಿನ ಅಧಿಕೃತ ಆದೇಶ ಪ್ರತಿ ಬೆಳಗಾವಿಗೆ ತಲುಪಲು ಸಮಯ ಬೇಕಾಗುತ್ತದೆ. ವಿನಯ ಕುಲಕರ್ಣಿ ಅವರಿಗೆ ಜಾಮೀನು ದೊರೆತರೂ ಪ್ರಕ್ರಿಯೆಯ ಕಾರಣದಿಂದ ಅವರ ಬಿಡುಗಡೆ ವಿಳಂಬ ಆಗುವ‌ ಸಾಧ್ಯತೆ ಇದೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *