ನವ್ಹೆಂಬರ 21 ರಿಂದ ಡಿಸೆಂಬರ 7 ರವರೆಗೆ ಬೆಳಗಾವಿಯಲ್ಲಿ ಗೂಟದ ಕಾರುಗಳ ಕಾರಬಾರು

ಬೆಳಗಾವಿ -ಬೆಳಗಾವಿಯ ಸುವರ್ಣ ವಿದಾನ ಸೌಧದಲ್ಲಿ ನವ್ಹೆಂಬರ 21ರಂದ ಡಿಸೆಂಬರ 7 ರವರೆಗೆ ಚಳಿಗಾಲದ ಅಧಿವೇಶನ ನಡೆಸಲು ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಟಿಬಿ ಜಯಚಂದ್ರ ತಿಳಿಸಿದ್ದಾರೆ

ಸಚಿವ ಸಂಪುಟದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು ಬೆಳಗಾವಿಯಲ್ಲಿ ಚಳಿಗಾದ ಅಧಿವೇಶನ ನಡೆಸಲು  ಸಚಿವ ಸಂಪುಟದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದರು ಒಟ್ಟಾರೆ ಹದಿನೈದು ದಿನಗಳ ಕಾಲ ಬೆಳಗಾವಿ ನಗರದ ಸುವರ್ಣ ವಿಧಾನ ಸೌಧದಲ್ಲಿ ಸರ್ಕಾರ ಗಂಟೆ ಮೂಟೆ ಕಟ್ಟಿಕೊಂಡು ಬೆಳಗಾವಿಯಲ್ಲಿ ಶಿಪ್ಟ ಆಗಲಿದೆ ನವ್ಹೆಂಬರ 21 ರಿಂದ ಡಿಸೆಂಬೆ 7 ರ ವರೆಗೆ ಬೆಳಗಾವಿ ನಗರದಲ್ಲಿ ಗೂಟದ ಕಾರುಗಳ ಕಾರಬಾರು ನಡೆಯಲಿದೆ

ಈ ಬಾರಿ ಬರೊಬ್ಬರಿ ಕಬ್ಬು ನುರಿಸುವ ಹಂಗಾಮಿನಲ್ಲಿಯೇ ಚಳಿಗಾಲದ ಅಧಿವೇಶನ ನಡೆಯಲಿರುವದರಿಂದ ರೈತ ಸಂಘಟನೆಗಳು ಸರ್ಕಾರದ ಚಳಿ ಬಿಡಿಸುವದು ಗ್ಯಾರಂಟಿ

Check Also

ಕುಂಭಮೇಳದಿಂದ ವಾಪಸ್ ಬರುವಾಗ ಬೆಳಗಾವಿಯ ನಾಲ್ವರ ಸಾವು

ಬೆಳಗಾವಿ- ಮಹಾ ಕುಂಭಮೇಳಕ್ಕೆ ಹೋಗಿ ವಾಪಾಸ್ ಆಗುವಾಗ ಟಿ.ಟಿ ವಾಹನ ಅಪಘಾತಕ್ಕೀಡಾಗಿ ಬೆಳಗಾವಿಯ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.ಬೆಳಗಾವಿಯ ಶಹಾಪುರ …

Leave a Reply

Your email address will not be published. Required fields are marked *