Breaking News
Home / Breaking News / ಕಬ್ಬಿನ ಬಾಕಿ ಕೊಡದಿದ್ದರೆ ದಯಾಮರಣ ಕೊಡಿ ,ರೈತರ ಅರ್ಜಿ

ಕಬ್ಬಿನ ಬಾಕಿ ಕೊಡದಿದ್ದರೆ ದಯಾಮರಣ ಕೊಡಿ ,ರೈತರ ಅರ್ಜಿ

ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ದೆವಲತ್ತಿ ಗ್ರಾಮದ ರೈತರ ಕುಟುಂಬಗಳು ದಯಾಮರಣಕ್ಕೆ ಅರ್ಜಿ ಬರೆದಿದ್ದಾರೆ,

ಉಸ್ತುವಾರಿ ಸಚಿವ ರಮೇಶ್ ಜಾರಕಿಹೋಳಿ ಒಡೆತನದ ಹೀರೆನಂದಿ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಗೆ 2014 ರಲ್ಲಿ ರೈತರು ಕಬ್ಬನ್ನು ಕೊಟ್ಟಿದ್ದಾರೆ, ರಮೇಶ ಅಕ್ಕಿ, ಬಾಡಿಗೆ 50,000, ಪುಂಡಲಿಕ ಇಟಗಿ 1 ಲಕ್ಷ ಬಾಡಿಗೆ, ಪುಂಡಲಿಕ ಬರಬುಕರ ೫ಲಕ್ಷ ಹಣ ರೈತರಿಗೆ ಬಾಕಿ ಬರಬೇಕಿತ್ತು, ಕಬ್ಬಿನ ಬಾಕಿ ಬಿಲ್, ಕಟಾವು ಮಾಡಿದ ಕರ್ಚು, ಲಾರಿ‌ಬಾಡಿಗೆ‌ಸೇದಂತೆ ಸುಮಾರು ೫ ಜನ ರೈತರದ್ದು ೧೦ ಲಕ್ಷಕ್ಕೂ ಅದಿಕ ಹಣ ಬರಬೇಕಿತ್ತು, ಆದರೆ ಸಚಿವರು ಹಣ ನಿಡಿಲ್ಲಾ ಅಂದ್ರೆ ನಾವೆಲ್ಲ ದಯಾಮರಣಕ್ಕೆ ಅನುಮತಿ ಕೊಡಿ ಎಂದು ಅರ್ಜಿಯನ್ನ ಬರೆದು ಜಿಲ್ಲಾದಿಕಾರಿಗಳಿಗೆ ಕೊಟ್ಟಿದ್ದಾರೆ, ಒಂದು‌ ವಾರದಲ್ಲಿ‌ ಬಾಕಿ‌ ಹಣವನ್ನ ನಿಡಬೇಕು, ಇಲ್ಲದಿದ್ದರೆ ಮೊನ್ನೆ ಮರಣ ಹೊಂದಿದ ರೈತ ಶಂಕರ ಮಾಟೋಳಿ ಅವರ ಕುಟುಂಬಕ್ಕೆ ಆದ ಪರಿಸ್ತಿತಿ ನಮಗೂ ಬರಬಾರದು‌ ಕೂಡಲೆ ಸಚಿವರು ಬಾಕಿ‌ ಹಣವನ್ನು ಕೊಡಬೇಕು ಇಲ್ಲದಿದ್ದರೆ ದಯಾಮರಣಕ್ಕೆ ಮುಂದಾಗಿದ್ದಾರೆ…

Check Also

ಹೃದಯಾಘಾತದಿಂದ ನರೇಗಾ ಕಾರ್ಮಿಕ ಸಾವು

ಬೈಲಹೊಂಗಲ: ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಸ್ಥಳದಲ್ಲಿಯೇ ಸೋಮವಾರ ಸಾವನ್ನಪ್ಪಿದ್ದಾರೆ. ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತ …

Leave a Reply

Your email address will not be published. Required fields are marked *