Breaking News

ಹೊಂಡದಲ್ಲಿ ಈಜಲು ಹೋದ ಇಬ್ಬರು ಮಕ್ಕಳು ಸಾವು

ಬೆಳಗಾವಿ : ಈಜಲು ಜಮೀನಿನಲ್ಲಿದ್ದ ಕೃಷಿ ಹೊಂಡದಲ್ಲಿ ಇಳಿದ ಇಬ್ಬರು ಮಕ್ಕಳು ನೀರಲ್ಲಿ ಮುಳುಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮದಲ್ಲಿ ಇಂದು ನಡೆದಿದೆ.

ಯಾದಗೂಡು ಗ್ರಾಮದ ಯಮನಪ್ಪ ಪ್ರಕಾಶ ರೆಡ್ಡರಟ್ಟಿ (10) ಹಾಗೂ ಯೇಸು s/o ಬಸಪ್ಪ 14 ವರ್ಷ ಈ ಇಬ್ಬರು ನೀರಲ್ಲಿ ಮುಳಗಿ ಮೃತಪಟ್ಟಿರುವ ದುರ್ಧೈವಿಗಳಾಗಿದ್ದಾರೆ.

ರವಿವಾರ ಸಂಜೆ 4.50 ರ ವೇಳೆಯಲ್ಲಿ ಈ ದಾರುಣ ಘಟನೆ ನಡೆದಿದ್ದು, ಈ ಇಬ್ಬರೂ ಮಕ್ಕಳು ಕ್ರಿಕೆಟ್ ಆಡುತ್ತಾ ತೋಟದ ಬಳಿ ಇರುವ ಕೃಷಿ ಹೊಂಡದಲ್ಲಿ ಈಜಲು ಬಂದರು. ಯಮನಪ್ಪ ನೀರಿನಲ್ಲಿ ಮುಳುಗುತ್ತಿದ್ದನು, ಆ ಸಮಯದಲ್ಲಿ ಯೇಸು ಅವನನ್ನು ರಕ್ಷಿಸಲು ಪ್ರಯತ್ನಿಸಿದನು ಆದರೆ ಯಶಸ್ವಿಯಾಗಲಿಲ್ಲ.

ಮುಳುಗುತ್ತಿದ್ದ ಯಮನಪ್ಪನನ್ನು ರಕ್ಷಿಸಲು ಹೋದ ಇನ್ನೊಬ್ಬ ಬಾಲಕ ಯೇಶು ಸಹ ಅಸುನೀಗಿದ್ದಾನೆ. ಘಟನಾ ಸ್ಥಳಕ್ಕೆ ಹುಕ್ಕೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ಬೆಳಗಾವಿಗೆ ವಂದೇ ಭಾರತ ರೈಲು ಬರತೈತಿ ಅಂತಾ ಅವರು ಹೇಳಿದ್ದಾರೆ,ಇವರು ತಿಳಿಸಿದ್ದಾರೆ

ಬೆಳಗಾವಿಗೆ ಹೊಸ ವಂದೇ ಭಾರತ ರೈಲು ಬರತೈತಿ ಅಂತಾ ದೆಹಲಿಯವರು ಹೇಳಿದ್ದಾರೆ ಬೆಳಗಾವಿಯವರು ತಿಳಿಸಿದ್ದಾರೆ. ಬೆಂಗಳೂರು ಧಾರವಾಡ ನಡುವೆ ಸದ್ಯ …

Leave a Reply

Your email address will not be published. Required fields are marked *