Breaking News
Home / Breaking News / ಮುದುಡಿದ ತಾವರೆ ಅರಳಿತು..ಹಳೆಯ ದೋಸ್ತಿ ಮತ್ತೆ ಚಿಗುರಿತು..!

ಮುದುಡಿದ ತಾವರೆ ಅರಳಿತು..ಹಳೆಯ ದೋಸ್ತಿ ಮತ್ತೆ ಚಿಗುರಿತು..!

ಬೆಳಗಾವಿ- ರಮೇಶ ಕುಡಚಿ ಅವರಿಗೆ ಕಾಂಗ್ರೆಸ್ ಟಿಕೇಟ್ ತಪ್ಪಿಸಿ ಫಿರೋಜ್ ಸೇಠ ಅವರಿಗೆ ಟಿಕೇಟ್ ಕೊಡಿಸಿ ಅವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್ ಮುಖಂಡ ಅನೀಲ ಪೋತದಾರ ಕೆಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಿಂದ ದೂರಾಗಿದ್ದರೂ ಆದರೆ ಇಂದು ಮಂಗಳವಾರ ನಗರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಹೆಚ್ ಸಿ ಮಹಾದೇವ ಪ್ರಸಾದ ಅವರ ಶೃದ್ಧಾಂಜಲಿ  ಸಭೆಯಲ್ಲಿ ಅವರು ಸೇಠ ಅವರ ಜೊತೆ ಕಾಣಿಸಿಕೊಳ್ಳುವದರ ಮೂಲಕ ಎಲ್ಲರಲ್ಲಿ ಅಚ್ಚರಿ ಮೂಡಿಸಿದರು

ವಿಶ್ವ ಕನ್ನಡ ಸಮ್ಮೇಳನದ ಸಂಧರ್ಭದಲ್ಲಿ ಅನೀಲ ಪೋತದಾರ ಅವರು ಬೀಡಾ ಅಂಗಡೀಕಾರರ ಜೊತೆಗಿದ್ದು ಅವರಿಗೆ ಪರ್ಯಾಯ ವ್ಯೆವಸ್ಥೆ ಮಾಡುವವರಿಗೂ ಡಬ್ಬಾ ಅಂಗಡಿಗಳನ್ನು ತೆರವು ಮಾಡಬಾರದು ಎಂದು ಹೋರಾಟ ನಡೆಸಿದ್ದರು ಆದರೆ ಶಾಸಕ ಫಿರೋಜ್ ಸೇಠ ಅವರು ಅನೀಲ ಪೋತದಾರ ಅವರ ಹೋರಾಟಕ್ಕೆ ಬೆಂಬಲ ಕೊಡದೇ ಇರುವದರಿಂದ ಅನೀಲ ಪೋತದಾರ ಹಾಗು ಸೇಠ ನಡುವೆ ಬಿರುಕಾಗಿತ್ತು

ಕಾಂಗ್ರೆಸ್ ಚಟುವಟಿಕೆಗಳಿಂದ ದೂರ ಉಳಿದುಕೊಂಡಿದ್ದ ಅನೀಲ ಪೋತದಾರ ಅವರು ಫಿರೋಜ್ ಸೇಠ ಅವರ ಸ್ನೇಹವನ್ನು ಮರು ಸ್ವಿಕರಿಸದೇ ರಾಜು ಸೇಠ ಅವರ ಜೊತೆ ಗೆಳೆತನವನ್ನು ಮುಂದುವರೆಸಿದ್ದಾರೆ ರಾಜು ಸೇಠ ಅವರ ಹೆಗಲಿಗೆ ಹೆಗಲು ಹಚ್ಚಿದ ಪೋತದಾರ ನಗರ ಕಾಂಗ್ರೆಸ್ ವಲಯದಲ್ಲಿ ಈಗ ಚರ್ಚೆಗೆ ಗ್ರಾಸವಾಗಿದ್ದಾರೆ

ರಾಜು ಸೇಠ ಅವರ ಜೊತೆ ಅನೀಲ ಪೋರದಾರ ಕಾಣಿಸಿಕೊಂಡಿರುವ ವಿಷಯ ಈಗ ರಾಜಕೀಯ ದಿಕ್ಸೂಚಿಯನ್ನು ಬದಲಿಸಿದೆ ನಗರ ಕಾಂಗ್ರೆಸ್ ವಲಯದಲ್ಲಿ ಮತ್ತೆ ಬದಲಾವಣೆಯ ಗಾಳಿ ಬೀಸಿದೆ ಶಾಸಕ ಫಿರೋಜ್ ಸೇಠ ಜೊತೆ ಜಗಳಾಡಿಕೊಂಡಿದ್ದ ಅನೇಕ ಜನ ನಗರ ಸೇವಕರು ಈಗ ರಾಜು ಸೇಠ ಅವರ ಬಳಗದಲ್ಲಿ ಗುರುತಿಸಿಕೊಂಡು ಕಾಂಗ್ರೆಸ ಕೀ ಏ ಮಜಬೂರಿ ಹೈ ರಾಜು ಸೇಠ ಜರೂರಿ ಹೈ ಎಂದು ಡೈಲಾಗ್ ಹೊಡೆಯುತ್ತಿದ್ದಾರೆ

 

 

Check Also

ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ

ಕುಮಟಾ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ …

Leave a Reply

Your email address will not be published. Required fields are marked *