Breaking News
Home / Breaking News / ಖಾನಾಪೂರದಲ್ಲಿ ತಾಯಿ ಅಂಜಲಿ…..ಸಮಸ್ಯೆಗಳಿಗೆ ತಿಲಾಂಜಲಿ…..!!!

ಖಾನಾಪೂರದಲ್ಲಿ ತಾಯಿ ಅಂಜಲಿ…..ಸಮಸ್ಯೆಗಳಿಗೆ ತಿಲಾಂಜಲಿ…..!!!

ಬೆಳಗಾವಿ- ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ತಮ್ಮ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಒಂದೊಂದಾಗಿ ನಿವಾರಿಸಿ ಜನಮೆಚ್ವುಗೆಗೆ ಪಾತ್ರರಾಗುತ್ತಿದ್ದಾರೆ.ಕೊಟ್ಟ ಭರವಸೆಗಳನ್ನು ಈಡೇರಿಸುತ್ತ,ನುಡಿದಂತೆ ನಡೆಯುತ್ತ, ಡೈನಾಮಿಕ್ ಲೀಡರ್ ಆಗಿ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಛಾಪು ಮೂಡಿಸುತ್ತಿದ್ದಾರೆ.

ಖಾನಾಪೂರ ಶಾಸಕರಾದ ಡಾ ಅಂಜಲಿ ನಿಂಬಾಳ್ಕರ್ ಅವರು ತಾಲೂಕಿನ ವಿವಿಧೆಡೆ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ತಾಲೂಕಿನ ತೋಪಿನಕಟ್ಟಿ ಗ್ರಾಮದಿಂದ ಲೋಕೋಳಿ, ಲಕ್ಕೆಬೈಲ್ ಮಾರ್ಗವಾಗಿ ಕಾಮಶಿನಕೊಪ್ಪ ಗ್ರಾಮದವರೆಗೆ 3.05 ಕೋಟಿ ರೂ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಹಾಗೂ

ಸಣ್ಣ ಹೊಸೂರು ಗ್ರಾಮದಿಂದ ಗರ್ಲಗುಂಜಿ ಮಾರ್ಗವಾಗಿ ತಾಲೂಕಿನ ಗಡಿಯವರೆಗೆ 5 (ಐದು ಕೋಟಿ ) ರೂ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಹಾಗೂ

ಖಾನಾಪೂರ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಸುಮಾರು 251 ವಿಧ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್ ಟಾಪ್ ವಿತರಣೆಯನ್ನು ಮಾಡಿದರು.

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *