Breaking News
Home / Breaking News / ಬೆಳಗಾವಿ ಖಡೇಬಝಾರದಲ್ಲಿನ ಮರಗಳು ಮಟ್ಯಾಶ್

ಬೆಳಗಾವಿ ಖಡೇಬಝಾರದಲ್ಲಿನ ಮರಗಳು ಮಟ್ಯಾಶ್

ಬೆಳಗಾವಿ-ನಗರದ ಮುಖ್ಯ ಮಾರುಕಟ್ಟೆ ಪ್ರದೇಶವಾಗಿರುವ ಖಡೇ ಬಝಾರದಲ್ಲಿ ಪಾಲಿಕೆಯಿಂದ ರಸ್ತೆ ಅಗಲೀಕರಣ ಕಾರ್ಯಾಚರಣೆ ಭರದಿಂದ ಸಾಗಿದ್ದು ಮಂಗಳವಾರ ಈ ರಸ್ತೆಯಲ್ಲಿರುವ ೨೫ ಕ್ಕೂ ಹೆಚ್ಚು ಮರಗಳು ನೆಲಕಚ್ಚಿವೆ

ಖಡೇ ಬಝಾರಿನ ಎಲ್ಲ ಮರಗಳಿಗೆ ಯಂತ್ರಾಧಾರಿತ ಕರಗಸಗಳ ಹಚ್ಚಿ ಒಂದು ಘಂಟೆಯಲ್ಲಿಯೇ ಎಲ್ಲ ಮರಗಳನ್ನು  ಮಟ್ಯಾಶ್ ಮಾಡಲಾಗಿದೆ

ಖಡೇ ಬಝಾರ ತುಂಬೆಲ್ಲ ಮರದ ಟೊಂಗೆಗಳು ಗಿಡದ ತಪ್ಪಲುಗಳು ಹರಡಿದ್ದು ಈ ರಸ್ತೆಯಲ್ಲಿ ದಾಟಿದರೆ ಖಾನಾಪೂರ ಜಂಗಲ್ ವಿಹರಿದಂತಹ ಅನುಭವವಾಗುತ್ತಿದೆ

ಖಡೇಬಝಾರದ,ಗಣಪತಿ ಬೀದಿ,ಮಾರುತಿ ಗಲ್ಲಿಯ ಗಿಡಗಳನ್ನು ಕಡಿದು ಈ ಮೂರು ರಸ್ರೆಗಳನ್ನು ಅಗಲೀಕರಣ ಮಾಡಿ ಸ್ಮಾರ್ಟ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸಿ ರಸ್ತೆಯ ಇಕ್ಜೆಲುಗಳಲ್ಲಿ ಸಸಿಗಳನ್ನು ನೆಡುವದು ಪಾಲಿಕೆಯ ಯೋಜನೆ ಆಗಿದೆ

ಪಾಲಿಕೆ ಸಿಬ್ಬಂಧಿಗಳು ಖಡೇ ಬಝಾರದಲ್ಲಿ ಗಿಡಗಳನ್ನು ಮಟ್ಯಾಶ್ ಮಾಡುವ ಕಾರ್ಯಾಚರಣೆಯನ್ನು ಭರದಿಂದ ಮುಂದುವರೆಸಿದ್ದಾರೆ ಈಗ ಈ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *