Breaking News

ಅಂತ್ಯಸಂಸ್ಕಾರಕ್ಕೆ ಆಕ್ಷೇಪ,ಕವಳೇವಾಡಿಯಲ್ಲಿ ಜಟಾಪಟಿ….!!

ಬೆಳಗಾವಿ-ಮೃತ ವ್ಯಕ್ತಿಯ ಅಂತ್ಯಕ್ರಿಯೆ ವೇಳೆ ಜಮೀನು ಮಾಲೀಕ ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಕವಳೇವಾಡಿ ಗ್ರಾಮದಲ್ಲಿ ಜಟಾಪಟಿ ನಡೆದಿದೆ.

ನನ್ನ ಜಮೀನಿನಲ್ಲಿ ಸಂಸ್ಕಾರ ಮಾಡಬೇಡಿ ಎಂದು ಕೋರ್ಟ್ ಆರ್ಡರ್ ತಂದ ಭೂ ಮಾಲೀಕ ಅಂತ್ಯಸಂಸ್ಕಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ.ವಿವಾದಿತ ಜಾಗದಲ್ಲಿ ಮೃತ ವ್ಯಕ್ತಿಯ ಅಂತ್ಯಕ್ರಿಯೆಗೆ ಗ್ರಾಮಸ್ಥರ ಪಟ್ಟು ಹಿಡಿದರೂ ಜಮೀನು ಮಾಲೀಕ ಒಪ್ಪದ ಹಿನ್ನಲೆಯಲ್ಲಿ ಕೆಲ ಕಾಲ ಗದ್ದಲ ಗಲಾಟೆ ನಡೆದಿದೆ.ವಿವಾದಿತ ಜಾಗದಲ್ಲೇ ಶವ ಇಟ್ಟು ಗ್ರಾಮಸ್ಥರ ಪ್ರತಿಭಟನೆ ನಡೆಸಿದ್ರುಪೊಲೀಸರಿಂದ ಮಾಲೀಕನ ಮನವೊಲಿಕೆ ಮುಂದುವರೆದಿತ್ತು.ಬೆಳಗಾವಿ ತಾಲೂಕಿನ ಕವಳೇವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ನಿನ್ನೆ ರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದ ತುಕಾರಾಮ್ ಮೋರೆ ಅಂತ್ಯಕ್ರಿಯೆ ನಡೆಯುತ್ತಿರುವಾಗ,ಈ ಘಟನೆ ನಡೆದಿದೆ.ಸ್ಮಶಾನ ಭೂಮಿ ಇಲ್ಲದ ಕಾರಣ ವೋಮಿನಿ ಗಾವಡೆ ಎಂಬುವವರ ಜಾಗದಲ್ಲಿ ಅಂತ್ಯಕ್ರಿಯೆ ಮಾಡುತ್ತಿರುವಾಗ,ಕೆಲ ದಿನಗಳ ಬಳಿಕ ಕೋರ್ಟ್ ಮೊರೆ ಹೋಗಿದ್ದ ವೋಮನಿ ಗಾವಡೆ.
ವೋಮನಿ ಗಾವಡೆ ಪರ ಕೋರ್ಟ್ ಆದೇಶ.
ಈ ಮೊದಲು ಇದೆ.

ಗ್ರಾಮದ ಮಹಿಳೆಯರಿಂದಲೇ ಅಂತ್ಯಕ್ರಿಯೆ

ಕವಳೇವಾಡಿ ಗ್ರಾಮದಲ್ಲಿ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರು,ಒಂದು ಗಂಟೆ ವರೆಗೂ ಕಾಯ್ದು ಬೇಸ್ತ ಮಹಿಳೆಯರಿಂದಲೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ.ನಿನ್ನೆಯಷ್ಟೇ ಅನಾರೋಗ್ಯ ದಿಂದ ಮೃತಪಟ್ಟಿದ್ದ ತುಕಾರಾಮ್ ಮೋರೆ

Check Also

ಇವರು ನೀಡಿದ ಚಿಕಿತ್ಸೆ ಅದ್ಭುತ , ಬೆಳಗಾವಿಯ ವ್ಯಕ್ತಿ ಇವರ ಔಷಧಿಯಿಂದ ಬದುಕಿದ್ದು ಪವಾಡ…!!

ನಾಟಿ ವೈದ್ಯ ಲೋಕೇಶ್ ಟೇಕಲ್ ಅವರು ನೀಡಿದ ಚಿಕಿತ್ಸೆ ನೋಡಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ …

Leave a Reply

Your email address will not be published. Required fields are marked *