ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಚಾಕು ಇರಿತದ ಪ್ರಕರಣಗಳು ವಿಪರೀತವಾಗಿವೆ. ಸಣ್ಣ ಪುಟ್ಟ ವಿಚಾರಗಳಿಗೂ ಚಾಕು ಚುಚ್ಚಾಟದ ಹುಚ್ಚಾಟ ನಡೆಯುತ್ತಿದೆ.ಬೆಳಗಾವಿಯಲ್ಲಿ ಬಸ್ ನ ಕಿಟಕಿ ಸೀಟಗಾಗಿ ಕಾಲೇಜು ವಿದ್ಯಾರ್ಥಿ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾದ ಘಟನೆ ಬೆಳಗಾವಿ ಬಸ್ ನಿಲ್ಧಾಣದಲ್ಲಿ ನಡೆದಿದೆ.
ಅಪರಿಚಿತ ಯುವಕರು ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಎದೆಗೆ ಚಾಕು ಹಾಕಿ ಪರಾರಿಯಾಗಿದ್ದಾರೆ.ಬೆಳಗಾವಿ ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.ಬೆಳಗಾವಿ ತಾಲೂಕಿನ ಪಂತ ಬಾಳೇಕುಂದರಗಿ ಗ್ರಾಮದ ಮಾಜ್ ಸನಧಿ (20) ಎಂಬಾತನಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದ್ದು ಗಾಯಗೊಂಡಿರುವ ಈತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪಂತಬಾಳೇಕುಂದರಗಿ ಗ್ರಾಮದಿಂದ ಬೆಳಗಾವಿಗೆ ಬರುವಾಗ ಕಿಟಕಿ ಪಕ್ಕದ ಸೀಟಿಗಾಗಿ ಗಲಾಟೆ ಆಗಿತ್ತು,ಬಸ್ ನ ಕಿಟಕಿ ಸೀಟಗಾಗಿ ನಡೆದ ಗಲಾಟೆಯಲ್ಲಿ ಚಾಕು ಹಾಕಿ ಮತ್ತೊಂದು ಯುವಕರ ಗುಂಪು ಪರಾರಿಯಾಗಿದೆ.ಬೆಳಗಾವಿ ಮಾರ್ಕೆಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.