Breaking News
Home / Breaking News / ಬೇಸ್ ಮೇಟ್ ಬುಡಕ್ಕೆ ಬುಲ್ಡೇಝರ್ ..ಮುಂದುವರೆದ ಕಾರ್ಯಾಚರಣೆ

ಬೇಸ್ ಮೇಟ್ ಬುಡಕ್ಕೆ ಬುಲ್ಡೇಝರ್ ..ಮುಂದುವರೆದ ಕಾರ್ಯಾಚರಣೆ

ಬೆಳಗಾವಿ- ಸ್ಥಳೀಯ ಜನಪ್ರತಿಧಿಗಳ ಮತ್ತು ರಾಜಕೀಯ ನಾಯಕರ ಒತ್ತಡದ ನಡುವೆಯೂ ಪಾಲಿಕೆ ಅಧಿಕಾರಿಗಳು ಬೇಸ್ ಮೇಟ್ ತೆರವು ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ

ಶುಕ್ರವಾರ ಬೆಳಗಾವಿ ಉತ್ತರ ಮತಕ್ಷೇತ್ರದ ಖಡೇಬಝಾರ್ ಮತ್ತು ಗಣಪತಿ ಬೀದಿ ಮಾರುತಿ ಗಲ್ಲಿಗಳಲ್ಲಿರುವ ಬೇಸ್ ಮೇಟ್ ಗಳಲ್ಲಿ ಇದ್ದ ವಾಣಿಜ್ಯ ಮಳಿಗೆಗಳನ್ನು ಜೆಸಿಬಿ ಗಳ ಮೂಲಕ ದ್ವಂಸ ಮಾಡಿದ ಪಾಲಿಕೆ ಅಧಿಕಾರಿಗಳ ತಂಡ ಇಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಹಾಪೂರ,ದೇಶಮುಖ ರಸ್ತೆ ಸೇರಿದಂತೆ ದಕ್ಷಿಣ ಮತಕ್ಷೇತ್ರದ ಬೇಸ್ ಮೇಟ್ ಮಳಿಗೆಗಳನ್ನು ತೆರವು ಮಾಡುವ ಕಾರ್ಯಾಚರಣೆ ಮುಂದುವರಿಸಿದರು

ಪಾಲಿಕೆ ಅಧಿಕಾರಿಗಳು ಶುಕ್ರವಾರ ಬೇಸ್ ಮೇಟ್ ಗಳಲ್ಲಿ ಜೆಸಿಬಿಗಳ ಸೊಂಡೆ ತುರುಕಿದಾಗ ಶಾಸಕ ಸೇಠ ಮತ್ತು ಬಿಜೆಪಿ ನಾಯಕ ಅನೀಲ ಬೆನಕೆ ಮೂಗು ತೂರಿಸಿ ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರಿಗೆ ಆವಾಜ್ ಹಾಕಿ ಕಾರ್ಯಾಚರಣೆ ನಿಲ್ಲಿಸುವಂತೆ ಧಮಕೀ ಹಾಕಿದ್ದರು
ಇವರ ಧಮಕೀಗೆ ಜಗ್ಗದ ಪಾಲಿಕೆ ಆಯುಕ್ತರು ಕಾರ್ಯಾಚರಣೆಯನ್ನು ನಿಲ್ಲಿಸದೇ ಶುಕ್ರವಾರ ನೂರಕ್ಕೂ ಹೆಚ್ಚು ಬೇಸ್ ಮೇಟ್ ಗಳ ಬುಡಕ್ಕೆ ಬೋಲ್ಡೇಝರ್ ಚಲಾಯಿಸಿದ್ದರು
ಇಂದು ಶನಿವಾರ ದಕ್ಷಿಣ ಮತ ಕ್ಷೇತ್ರದ ಶಹಾಪೂರ ಪ್ರದೇಶದಲ್ಲಿ ಬೋಲ್ಡೇಝರ್ ಗಳು ಸದ್ದು ಮಾಡುತ್ತಿವೆ
‌ಬೇಸ್ ಮೇಟ್ ತೆರವು ಕಾರ್ಯಾಚರಣೆಯ ನೇತ್ರತವವನ್ನು ಪಾಲಿಕೆ ಆರೋಗ್ಯಾಧಿಕಾರಿ ನಾಡಗೌಡ ವಹಿಸಿದ್ದು ಕಾರ್ಯಾಚರಣೆ ಎರಡನೇಯ ದಿನವೂ ಮುಂದುವರೆದಿದೆ

ಶಾಸಕರ ಕಚೇರಿಯಲ್ಲಿ ಸಭೆ

ಪಾಲಿಕೆ ಅಧಿಕಾರಿಗಳು ನಗರದಲ್ಲಿ ಬೇಸ್ ಮೇಟ್ ಗಳಲ್ಲಿ ಇರುವ ವಾಣಿಜ್ಯ ಮಳಿಗೆಗಳನ್ನು ತೆರವು ಮಾಡಿ ಬೇಸ್ ಮೇಟ್ ಗಳಲ್ಲಿ ಪಾರ್ಕಿಂಗ್ ಗೆ ಅವಕಾಶ ಮಾಡಿ ಕೊಡುವ ಕಾರ್ಯಾಚರಣೆ ಆಭವಾಗುತ್ತಿದ್ದಂತೆಯೇ ಖಡೇಬಝಾರ್ ವ್ಯಾಪಾರಿಗಳು ಶಾಸಕ ಸೇಠ ಅವರ ಮೊರೆ ಹೋಗಿದ್ದಾರೆ ಶನಿವಾರ ಶಾಸಕ ಸೇಠ ಅವರನ್ನು ಭೇಟಿಯಾದ ವ್ಯಾಪಾರಿಗಳು ಹೇಗಾದರೂ ಮಾಡಿ ಕಾರ್ಯಾಚರಣೆ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ
ಶಾಸಕ ಸೇಠ ಶುಕ್ರವಾರ ಕಾರ್ಯಾಚರಣೆ ನಿಲ್ಲಿಸುವಂತೆ ಆಯುಕ್ತರಿಗೆ ಆವಾಜ್ ಹಾಕಿದ್ದರು ಈಗ ಶಾಸಕ ಸೇಠ ಅಭಿವೃದ್ಧಿಯ ಪರವಾಗಿ ನಿಲ್ಲುತ್ತಾರೆಯೋ ಅಥವಾ ಕಾರ್ಯಾಚರಣೆ ನಿಲ್ಲಿಸುವಲ್ಲಿ ಯಶಸ್ವಿಯಾಗುತ್ತಾರೆಯೋ ಕಾದು ನೋಡಬೇಕು

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *