Breaking News

ಮೇಯರ್ ಕಾರ್, ಕಿರಣ ಸಾಯಿನಾಯಿಕ ವಿರುದ್ಧ ಗುಂಜಟಕರ ವಾರ್ ಎಂಈಎಸ್ ನಲ್ಲಿ ಗುಂಪುಗಾರಿಕೆ ಜೋರಧಾರ್

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮೇಯರ್ ಹಾಗು ಉಪಮೇಯರ್ ಗೆ ಹೊಸ ಕಾರು ಕೊಡಿಸಬೇಕು ಎನ್ನುವ ವಿಷಯ ಪಾಲಕೆಯ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು
ಸಭೆ ಆರಂಭವಾಗುತ್ತಿದ್ದಂತೇಯೇ ಎಂ ಈ ಎಸ್ ನಗರ ಸೇವಕ ವಿನಾಯಕ ಗುಂಜಟಕರ ಮೇಯರ್ ಸರೀತಾ ಪಾಟೀಲರು ಬೆಳಗಾವಿಯ ಪ್ರಥಮ ಪ್ರಜೆ ಅವರು ಸ್ಕೂಟರ್ ಮೇಲೆ ಬರುತ್ತಿರುವದರಿಂ ಬೆಳಗಾವಿ ನಿವಾಸಿಗಳಿಗೆ ಅವಮಾನವಾಗಿದೆ ಈ ಬಗ್ಗೆ ಮೇಯರ್ ಸರಿತಾ ಪಾಟೀಲರು ಉತ್ತರ ಕೊಡಬೇಕು ಎಂದು ಒತ್ತಾಯಿಸಿದಾಗ ಇದಕ್ಕೆ ಮಾಜಿ ಮಹಾಪೌರ ಕಿರಣ ಸೈನಾಯಿಕ ಉತ್ತರ ನೀಡಲು ಮುಂದಾದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು
ಮೇಯರ್ ಕಾರಿನ ಬಗ್ಗೆ ಮೇಯರ್ ಚೇಂಬರದಲ್ಲಿ ಚರ್ಚಿಸಲಾಗಿದೆ ಈ ವಿಷಯವನ್ನಿ ಇಲ್ಲಿ ಚರ್ಚೆ ಮಾಡುವದು ಬೇಡ ಎಂದಾಗ ಅದಕ್ಕೆ ವಿನಾಯಕ ಗುಂಜಟಕರ ವಿರೋಧ ವ್ಯೆಕ್ತಪಡಿಸಿ ಮೇಯರ್ ಸರೀತಾ ಪಾಟೀಲ ಸ್ಕೂಟರ್ ಮೇಲೆ ಪಾಲಿಕೆಗೆ ಬರುವ ವಿಷಯ ಮಾದ್ಯಮಗಳಲ್ಲಿ ಪ್ರಕಟವಾಗಿದೆ ಅದಕ್ಕೆ ಉತ್ತರ ಕೊಡಲೇಬೇಕು ಗುಣಜಟಕರ ಪಟ್ಟು ಹಿಡಿದಾಗ ಕಿರಣ ಸೈನಾಯಿಕ ಗುಂಜಟಕರ ಅವರನ್ನು ತರಾಟರಗೆ ತೆಗೆದುಕೊಂಡು ನೀವು ಮೇಯರ್ ಚೇಂಬರಗೆ ಬರೋದಿಲ್ಲ ಈ ವಿಷಯ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದರು
ಒಟ್ಟಾರೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಾಡವಿರೋಧಿ ಎಂಈಎಸ್ ಗುಂಪಿನಲ್ಲಿ ಎರಡು ಗುಂಪುಗಳಾಗಿ ಪರಸ್ಪರ ಗುದ್ದಾಟ ನಡೆಸಿರುವದರಿಂದ ವಿರೋಧಿ ಗುಂಪು ಸದ್ಯಕ್ಕೆ ರಿಲ್ಯಾಕ್ಸ ಆಗಿದೆ

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *