Breaking News

ಇವಳ ಮರ್ಡರ್ ಮಾಡಲು,ಅವನು ಕಂಟ್ರೀ ಪಿಸ್ತೂಲ್ ಖರೀಧಿ ಮಾಡಿದ್ದ…!!

ಬೆಳಗಾವಿ-ಹೆಂಡತಿಯನ್ನು ಕೊಲ್ಲಲು ಕಂಟ್ರಿ ಪಿಸ್ತೂಲ್ ಖರೀದಿಸಿ ಪಾಪಿ ಪತಿ,ಈಗ ಪೋಲೀಸರ ಅತಿಥಿಯಾದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

೧೫ ದಿನಗಳ ಹಿಂದಷ್ಟೆ ಡಿವೋರ್ಸ್ ನೀಡಿ ಕೊಲ್ಲಲು ಸ್ಕೆಚ್ ಹಾಕಿದ್ದ ಪತಿ,ಪೋಲೀಸರ ಬಲೆಗೆ ಬಿದ್ದಿದ್ದಾನೆ.ಹೆಂಡತಿಗೆ ಬೇರೆಯವರ ಜತೆಗೆ ಸಂಬಂಧ ಇದೆ ಎಂದು ಅನುಮಾನಿಸಿ ಕೊಲೆಗೆ ಸ್ಕೆಚ್,ಹಾಕಿದ್ದ ಪಾಪಿಸಚಿನ್ ಬಾಬಾಸಾಹೇಬ್ ರಾಯಮಾನೆ ಎಂಬಾತನನ್ನು ಪೋಲೀಸರು ಅರೆಸ್ಟ್ ಮಾಡಿದ್ದಾರೆ.

ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ಕುಪವಾಡ ಗ್ರಾಮದಲ್ಲಿ ಪಿಸ್ತೂಲ್ ಖರೀದಿಸಿದ್ದ ಭೂಪ,ಪಿಸ್ತೂಲ್ ಖರೀದಿಸಿ ಮೀರಜ್ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಅನುಮಾನ ಬಂದು ಸಚಿನ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಮಹಾ ಪೊಲೀಸರು,ವಿಚಾರಣೆ ವೇಳೆ ಹೆಂಡತಿಯನ್ನು ಕೊಲ್ಲಲು ರಿವಾಲ್ವಾರ ಖರೀದಿಸಿದ್ದಾಗಿ ಸಚಿನ್ ಬಾಯ್ಬಿಟ್ಟಿದ್ದಾನೆ.

ತಕ್ಷಣವೇ ಸಚಿನನನ್ನು ಬಂಧಿಸಿದ ಮೀರಜ್ ನ ಗಾಂಧೀ ಚೌಕ್ ಪೊಲೀಸರು,ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಿವಾಸಿಯಾಗಿರುವ ಸಚಿನ್,ನನ್ನು ಮಿರಜ್ ಪೋಲೀಸರು ಬಂಧಿಸಿದ್ದಾರೆ.ಇತ್ತ ಚಿಕ್ಕೋಡಿ ಪೊಲೀಸರಿಗೆ ಸಚಿನ್ ಪತ್ನಿ ಹರ್ಷಿತಾರಿಂದಲೂ ದೂರು,ದಾಖಲಾಗಿದೆ.ತನಗೆ ರಕ್ಷಣೆ ನೀಡುವಂತೆ ಹಾಗೂ ತನ್ನ ಜೀವಕ್ಕೆನಾದರೂ ಆದರೆ ಅದಕ್ಕೆ ಪತಿ ಸಚಿನ್ ಕಾರಣ ಎಂದು ದೂರು ದಾಖಲಾಗಿದೆ.ಮೀರಜ್ ನ ಗಾಂಧೀ ಚೌಕ್ ಹಾಗೂ ಚಿಕ್ಕೋಡಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಸಚಿನ್ ಪತ್ನಿ ಹರ್ಷೀತಾ ಹೇಳಿದ್ದು.

ಕಳೆದ 7 ವರ್ಷಗಳಿಂದಲು ಪದೆ ಪದೆ ಕಾಟ ನೀಡುತ್ತಲೆ ಬಂದಿದ್ದಾರೆ.ನನ್ನ ಪತಿಯಿಂದ ಜೀವ ಬೇದರಿಕೆ ಇದೆ ಎಂದು ಪತ್ನಿ ಹೇಳಿದ್ದಾಳೆ.ಈಗಾಗಲೇ ಒಂದು ಬಾರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದೇನೆ.ಪತಿಯಿಂದ ಬೇಸತ್ತು ಒಂದು ತಿಂಗಳ ಹಿಂದೆ ವಿಚ್ಚೇದನ ಕೂಡ ಪಡೆದಿದ್ದೇನೆ ಎಂದು ಹರ್ಷಿತಾ ತಿಳಿಸಿದ್ದಾಳೆ.

Check Also

ಇವರು ನೀಡಿದ ಚಿಕಿತ್ಸೆ ಅದ್ಭುತ , ಬೆಳಗಾವಿಯ ವ್ಯಕ್ತಿ ಇವರ ಔಷಧಿಯಿಂದ ಬದುಕಿದ್ದು ಪವಾಡ…!!

ನಾಟಿ ವೈದ್ಯ ಲೋಕೇಶ್ ಟೇಕಲ್ ಅವರು ನೀಡಿದ ಚಿಕಿತ್ಸೆ ನೋಡಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ …

Leave a Reply

Your email address will not be published. Required fields are marked *