Breaking News

ವಿಷ ಕುಡಿದು ನ್ಯಾಯ ಕೇಳಲು ಪೊಲೀಸ್ ಠಾಣೆಗೆ ಬಂದ ಯುವಕ

ಬೆಳಗಾವಿ- ವಿಷ ಕುಡಿದು ಅಸ್ವಸ್ಥನಾಗಿದ್ದ ಯುವಕನೊಬ್ಬ ಕ್ಯಾಂಪ್ ಪೋಲೀಸ್ ಠಾಣೆಗೆ ಧಾವಿಸಿದ ಘಟನೆ ನಡೆದಿದೆ

ನ್ಯಾಯ ಕೊಡಿ ಎಂದು ಪೊಲೀಸ್ ಠಾಣೆಗೆ ಬಂದ ಯುವಕನನ್ನ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದ ಪೊಲೀಸರು ವಿಷ ಕುಡಿದ ಯುವಕನಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ

ಕ್ಯಾಂಪ್ ಮಹಿಳಾ ಪೊಲೀಸ್ ಠಾಣೆಗೆ ಆಗಮಿಸಿದ ಯುವಕನನ್ನು
ಸುತಾರ್ ನಿವೃತ್ತಿ ಎಂದು ಗುರುತಿಸಲಾಗಿದೆ

ಬೆಳಗಾವಿ ನಗರದ ರಾಮಲಿಂಗ ಗಲ್ಲಿ ನಿವಾಸಿಯಾಗಿರುವ ಈ ಯುವಕ ಯಾವ ಕಾರಣಕ್ಕೆ ವಿಷ ಕುಡಿದಿದ್ದು ಎಂಬುದು ತಿಳಿದಿಲ್ಲ

ತೀವ್ರವಾಗಿ ಅಸ್ವಸ್ಥನಾಗಿರುವ ಸುತಾರ್ ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ

ಕೋಟೆ ಕೆರೆ ಬಳಿ ಅಟೋ ಪಲ್ಟಿ

ಚಾಲಕನ‌ ನಿಯಂತ್ರಣ ತಪ್ಪಿ ಬುದ್ದಿ ಮಾಂಧ್ಯ ಮಕ್ಕಳಿದ್ದ ಆಟೋ ಪಲ್ಟಿಯಾದ ಘಟನೆ ಬೆಳಗಾವಿ ನಗರದ ಕಿಲ್ಲಾ ಬಳಿಯ ಪ್ರುಟ್ ಮಾರುಕಟ್ಟೆ ಬಳಿ ನಡೆದಿದೆ

ಬುದ್ದಿ‌ಮಾಂದ್ಯ‌ ಮಕ್ಕಳನ್ನ ಮನೆಯಿಂದ ಕರೆದುಕೊಂಡು ಶಾಲೆಗೆ ಹೋಗುವಾಗ ಅಪಘಾತ ಸಂಭವಿಸಿದೆ ಚಾಲಕ ಇರ್ಷಾದ್ ಗೆ ಗಂಭೀರ ಗಾಯಗಳಾಗಿದ್ದು ಆತನಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ

ಐದು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು
ಕಿಲ್ಲಾದಲ್ಲಿರುವ ಆರಾಧನಾ ಶಾಲೆಗೆ ಈ ಮಕ್ಕಳು ಹೋಗುತ್ತಿದ್ದರು ಎಂದು ತಿಳಿದು ಬಂದಿದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Check Also

ಈಜಲು ಹೋದ ಬಾಲಕ ನೀರು ಪಾಲು

ಬೆಳಗಾವಿ ಕೆರೆಯಲ್ಲಿ ಈಜಲು ಹೋದ ಬಾಲಕನೋರ್ವ ನೀರು ಪಾಲಾದ ಘಟನೆ ಬೆಳಗಾವಿ ತಾಲೂಕಿನ ವಾಘವಡೆ ಗ್ರಾಮದಲ್ಲಿ ನಡೆದಿದೆ.ಬೆಳಗಾವಿ ತಾಲೂಕಿನ ವಾಘವಡೆ …

Leave a Reply

Your email address will not be published. Required fields are marked *