Breaking News
Home / Breaking News / ಹತ್ಯೆ ಮಾಡಿ, ಮನೆಯ ಮುಂದೆ ಶವ ಬಿಸಾಡಿದ್ರು…

ಹತ್ಯೆ ಮಾಡಿ, ಮನೆಯ ಮುಂದೆ ಶವ ಬಿಸಾಡಿದ್ರು…

ಬೆಳಗಾವಿ ಕಮಿಷ್ನರೇಟ್ ವ್ಯಾಪ್ತಿಯಲ್ಲಿ ಮರ್ಡರ್ ಗಳ ಹಾವಳಿ ಹೆಚ್ಚಾಗಿದೆ. ಬೆಳಗಾವಿ ಮಹಾನಗರದ ನಡು ರಸ್ತೆಯಲ್ಲೇ ಮರ್ಡರ್ ನಡೆದ ಬೆನ್ನಲ್ಲಿಯೇ ಬೆಳಗಾವಿ ಪಕ್ಕದ ರಣಕುಂಡೆ ಗ್ರಾಮದಲ್ಲಿ ಈಗ ಮತ್ತೊಬ್ಬ ಯುವಕನ ಹತ್ಯೆಯಾಗಿದೆ.

ಆತ ಮರ್ಚೆಂಟ್ ನೆವಿಯಲ್ಲಿ ಕೆಲಸಕ್ಕೆ ಸೇರಿದ್ದಾತ ಅದಕ್ಕೆ ರಾಜೀನಾಮೆ ನೀಡಿ ಗುಜರಾತ್‌ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಊರಿಗೆ ವಾಪಾಸ್ ಆಗಿದ್ದ.‌ ಹೀಗಿದ್ದವ ನಾಳೆ ಮತ್ತೆ ತಾನೂ ಕೆಲಸ ಮಾಡ್ತಿದ್ದ ಸ್ಥಳಕ್ಕೆ ವಾಪಸ್ ಆಗಲು ಟಿಕೆಟ್ ಬುಕ್ ಸಹ ಮಾಡಿದ್ದನಂತೆ. ಊರಿಗೆ ಹೋಗುವ ತಯಾರಿಯಲ್ಲಿದ್ದವ ಮನೆಯಲ್ಲಿ ಮಲಗಿದ್ದಾಗಲೇ ತಡರಾತ್ರಿ ಎಂಟ್ರಿಕೊಟ್ಟಿತ್ತು ದುಷ್ಕರ್ಮಿಗಳ ತಂಡ. ಹೀಗೆ ಬಂದವರು ಅಲ್ಲಿ ರಕ್ತದ ಕೋಡಿಯನ್ನೇ ಹರಿಸಿದ್ರೂ. ಅಷ್ಟಕ್ಕೂ ಬೆಳಗಾವಿಯಲ್ಲಿ ಅದ್ಯಾವ ಕಾರಣಕ್ಕೆ ಅಣ್ತಮ್ಮಂದಿರನ್ನ ನಟ್ಟ ನಡುರಾತ್ರಿ ಮನೆಯಿಂದ ಎತ್ತಾಕ್ಕೊಂಡು ಹೋಗಿದ್ದು? ಅಣ್ಣನನ್ನ ಹತ್ಯೆ ಮಾಡಿ ಮನೆ ಮುಂದೆ ಬಿಸಾಡಿ ಹೋಗಿದ್ದು ಈ ಕುರಿತು ಸಂಪೂರ್ಣ ವರದಿ ಇಲ್ಲಿದೆ ನೋಡಿ….

ಹತ್ಯೆ ಮಾಡಿ ಮತ್ತೆ ಮನೆಯ ಮುಂದೆ ಶವ ಬಿಸಾಡಿದ್ರು...

ಇಂದು ಬೆಳ್ಳಂಬೆಳಗ್ಗೆ ಬೆಳಗಾವಿ ತಾಲೂಕಿನ ರಣಕುಂಡಯೇ ಗ್ರಾಮದ ಜನರು ನಡು ರಸ್ತೆಯಲ್ಲೇ ಯುವಕನ ಶವ ಬಿದ್ದಿದ್ದನ್ನ ಕಂಡು ಬೆಚ್ಚಿ ಬಿದ್ದಿದ್ದರು. ನಡುರಾತ್ರಿ ಅದೊಂದು ಮನೆಗೆ ನುಗ್ಗಿದ ಹತ್ತಕ್ಕೂ ಅಧಿಕ ದುಷ್ಕರ್ಮಿಗಳು ಮನೆಯಲ್ಲಿ ದಾಂಧಲೆ ಮಾಡಿ ಮಲಗಿದ್ದ ಅಣ್ತಮ್ಮಂದಿರನ್ನ ಎತ್ತಾಕ್ಕೊಂಡು ಹೋಗಿ ಮನ ಬಂದಂತೆ ಹಲ್ಲೆ ಮಾಡಿ ಅದ್ರಲ್ಲಿ ಅಣ್ಣನ ಹತ್ಯೆ ಮಾಡಿ ಮನೆ ಮುಂಭಾಗದ ರಸ್ತೆಯಲ್ಲಿ ಶವ ಬಿಸಾಡಿ ಎಸ್ಕೇಪ್ ಆಗಿದ್ದರು. ಅಷ್ಟಕ್ಕೂ ಅಲ್ಲಿ ಕೊಲೆಯಾಗಿ ಬಿದ್ದವನ ಹೆಸರು ನಾಗರಾಜ್ ಪಾಟೀಲ್ ಅಂತಾ 30ವರ್ಷದ ಯುವಕ. ಮರ್ಚೆಂಟ್ ನೆವಿಯಲ್ಲಿ ಕೆಲಸ ಮಾಡ್ತಿದ್ದ ಈ ಯುವಕ ಬಳಿಕ ರಾಜೀನಾಮೆ ನೀಡಿ ಮತ್ತೆ ಗುಜರಾತ್‌ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ.. ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಊರಿಗೆ ವಾಪಸ್ ಆಗಿದ್ದ. ಮನೆಗೆ ದೊಡ್ಡ ಮಗನಾಗಿದ್ದ ನಾಗರಾಜ್ ಎಲ್ಲ ಜವಾಬ್ದಾರಿಯನ್ನ ತಾನೇ ನಿಭಾಯಿಸುತ್ತಿದ್ದ. ನಾಗರಾಜ್ ಗೆ ಮತ್ತಿಬ್ಬರು ತಮ್ಮಂದಿರಿದ್ದು ಮೋಹನ್ ಎಂಬಾತ ರಣಕುಂಡಯೇ ಗ್ರಾಮದಲ್ಲೇ ವಾಸವಿದ್ದ. ತಂದೆ ಇಲ್ಲದ ಈ ಮನೆಯಲ್ಲಿ ಮೂರು ಮಕ್ಕಳಿಗೆ ತಾಯಿಯೇ ಎಲ್ಲವೂ ಆಗಿದ್ದಳು. ನಾಗರಾಜ್ ಮತ್ತು ಓರ್ವ ತಮ್ಮ ಗುಜರಾತ್ ರಾಜ್ಯದಲ್ಲಿ ಕೆಲಸ ಮಾಡ್ತಿದ್ರೇ ಮೋಹನ್ ಮತ್ತು ತಾಯಿ ಗ್ರಾಮದಲ್ಲಿ ವಾಸವಿದ್ರೂ. ಇನ್ನೂ ವರ್ಷಕ್ಕೆ ಒಂದು ಬಾರಿ ಮಾತ್ರ ಇಬ್ಬರು ಅಣ್ತಮ್ಮಂದಿರು ಊರಿಗೆ ಬಂದೂ ಹೋಗ್ತಿದ್ರೂ. ಹೀಗೆ ಈ ಸಾರಿ ನಾಗರಾಜ್ ಊರಿಗೆ ಬಂದಿದ್ದ ನಾಳೆ ವಾಪಾಸ್ ಆಗಲು ಟಿಕೆಟ್ ಬುಕ್ ಕೂಡ ಮಾಡಿಕೊಂಡಿದ್ದ. ಇನ್ನೂ ನಿನ್ನೆ ರಾತ್ರಿ ಊಟ ಮಾಡಿ ತಮ್ಮ ಮತ್ತು ತಾಯಿ ಒಟ್ಟಿಗೆ ಮಲಗಿದ್ದಾರೆ. ಮಧ್ಯರಾತ್ರಿ ಒಂದೂವರೆ ಗಂಟೆ ಸುಮಾರಿಗೆ ಹತ್ತಕ್ಕೂ ಅಧಿಕ ದುಷ್ಕರ್ಮಿಗಳ ಗ್ಯಾಂಗ್ ನಾಗರಾಜ್ ಮನೆ ಬಳಿ ಎಂಟ್ರಿಕೊಟ್ಟಿದೆ. ಹೊರಗಡೆ ನಿಲ್ಲಿಸಿದ್ದ ಬೈಕ್ ಗಳನ್ನ ಒಡೆದು ಹಾಕಲು ಶುರು ಮಾಡಿದ್ದಾರೆ. ಈ ವೇಳೆ ಎಚ್ಚರಗೊಂಡ ಅಣ್ತಮ್ಮಂದಿರು ಕೂಡಲೇ ಬಾಗಿಲು ತಗೆದು ಹೊರ ಬಂದಿದ್ದಾರೆ. ಅವರು ಹೊರ ಬರ್ತಿದ್ದಂತೆ ಅಣ್ತಮ್ಮಂದಿರ ಮೇಲೆಯೂ ದುಷ್ಕರ್ಮಿಗಳು ಮುಗಿಬಿದ್ದಿದ್ದಾರೆ. ತಲ್ವಾರ್, ಮಚ್ಚು, ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಬಿಡಿಸಲು ಬಂದ ನಾಗರಾಜ್ ತಾಯಿ ಮೇಲೆಯೂ ಹಲ್ಲೆ ಮಾಡಿ, ಸೀರೆ ಹರಿದು ಎಳೆದಾಡಿದ್ದಾರೆ. ಇದಾದ ಬಳಿಕ ಗದ್ದಲ ಆಗ್ತಿದ್ದಂತೆ ಎಚ್ಚೇತ್ತುಕೊಂಡು ದುಷ್ಟರು ಇಬ್ಬರು ಅಣ್ತಮ್ಮಂದಿರನ್ನ ಕಾರಿನಲ್ಲಿ ಕೂರಿಸಿಕೊಂಡು ಊರ ಹೊರಗೆ ಹೋಗಿ ನಾಗರಾಜ್‌ನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ರೇ ಸಹೋದರ ಮೋಹನ್ ಕಾಲು ಮುರಿದು ಇಬ್ಬರನ್ನೂ ತಂದು ಮನೆಯ ಮುಂದೆ ಎಸೆದು ಎಸ್ಕೇಪ್ ಆಗಿದ್ದಾರೆ ಪಾಪಿಗಳು

ಬೆಳ್ಳಂಬೆಳಗ್ಗೆ ರಸ್ತೆಯಲ್ಲಿ ಶವ ಬಿದ್ದಿರುವುದನ್ನ ಕಂಡ ಗ್ರಾಮಸ್ಥರು ಕೂಡಲೇ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಮೋಹನ್ ಮತ್ತು ಆತನ ತಾಯಿಗೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನೂ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಕೂಡಲೇ ಶವವನ್ನ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಇತ್ತ ನಾಗರಾಜ್ ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆ ಸಂಬಂಧಿಕರು ಮತ್ತು ಅಜ್ಜಿ ಮನೆಗೆ ಬಂದಿದ್ದಾರೆ. ಮದುವೆ ವಯಸ್ಸಿಗೆ ಬಂದ ನಾಗರಾಜ್‌ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇತ್ತ ಕೇಸ್ ದಾಖಲಿಸಿಕೊಂಡು ಗ್ರಾಮೀಣ ಠಾಣೆ ಪೊಲೀಸರು ತನಿಖೆಗೆ ಶುರು ಮಾಡಿದ್ದಾರೆ ಈ ವೇಳೆ ರಣಕುಂಡಯೇ ಗ್ರಾಮದ ಕೆಲ ಯುವಕರ ಮೇಲೆ ಅನುಮಾನ ಬಂದಿದ್ದು ಒಂದು ಟೀಮ್ ಮಾಡಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ವೈಯಕ್ತಿಕ ಕಾರಣಕ್ಕೆ ಅಥವಾ ಹಣಕಾಸಿನ ವಿಚಾರಕ್ಕೆ ಇಲ್ಲ ಹುಡುಗಿ ವಿಚಾರಕ್ಕೆ ಈ ಕೊಲೆಯಾಗಿರಬಹುದು ಎಂಬ ಮೂರು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ರವೀಂದ್ರ ಗಡಾದಿ ಶವ ಬಿಸಾಕಿದ ಸ್ಥಳ ಪರಿಶೀಲನೆ ನಡೆಸಿದರು. ಇದರ ಜತೆಗೆ ಸಂಬಂಧಿಕರಿಂದಲೂ‌ ಮಾಹಿತಿಯನ್ನ ಪಡೆದುಕೊಂಡಿದ್ದು ಆರೋಪಿಗಳ ಬಗ್ಗೆ ಗೊತ್ತಾಗಿದ್ದು ಇದೇ ಗ್ರಾಮದ ಯುವಕರ ಕೃತ್ಯ ಎಸಗಿದ್ದು ಆದಷ್ಟು ಬೇಗ ಆರೋಪಿಗಳನ್ನ ಬಂಧಿಸುವುದಾಗಿ ಹೇಳಿದ್ದಾರೆ. ಅವರ ತಾಯಿ ಹೇಳುವ ಪ್ರಕಾರ ನಾಗರಾಜ ಮೋಹನ ಕಾರಿನಲ್ಲಿ ಕರೆದುಕೊಂಡು ಹೋಗಿ ಹೊಡೆದು ಬಳಿಕ ಮನೆಯ ಮುಂದೆ ತಂದು ಎಸೆದಿದ್ದಾರೆ. ಆರೋಪಿಗಳು ಅದೇ ಊರಿನವರಿದ್ದು ಅವರ ಪತ್ತೆಗೆ ಬಲೆ ಬೀಸಲಾಗಿದೆ. ಎಂಟು ವರ್ಷದ ಹಿಂದೆ ಕೊಲೆಯಾದ ನಾಗರಾಜ್ ತಂದೆ ಓರ್ವನಿಗೆ 20 ಸಾವಿರ ರೂಪಾಯಿ ಸಾಲ ನೀಡಿದ್ದರಂತೆ. ಅದನ್ನ ವಾಪಸ್ ಕೇಳಲು ನಾಗರಾಜ ಹೋದ ವೇಳೆ ಗಲಾಟೆಯಾದ ಮಾಹಿತಿ ಇದ್ದು ತನಿಖೆ ಮುಂದುವರಿಸಿದ್ದಾಗಿ ತಿಳಿಸಿದ್ದಾರೆ.

ಪ್ರತ್ಯೇಕ ತಂಡ ಮಾಡಿಕೊಂಡು ಪೊಲೀಸರು ತನಿಖೆಯನ್ನ ಚುರುಕುಗೊಳಿಸಿದ್ದು ಹತ್ಯೆ ಮಾಡಿಷ ಆರೋಪಿಗಳು ಗೋವಾದಲ್ಲಿ ತಲೆ ಮರೆಸಿಕೊಂಡಿದ್ದು ಅವರ ಹುಡುಕಾಟವೂ ಆರಂಭವಾಗಿದೆ. ಅದೇನೆ ಇರಲಿ ಮನೆಯಲ್ಲಿ ಮಲಗಿದ್ದವರನ್ನ ತಡರಾತ್ರಿ ಎಬ್ಬಿಸಿ ಎತ್ತಾಕ್ಕೊಂಡು ಹೋಗಿ ಹತ್ಯೆ ಮಾಡಿ ಮತ್ತೆ ಶವ ಮನೆ ಮುಂದೆ ಬಿಸಾಡಿ ಹೋಗ್ತಾರೆ ಅಂದ್ರೇ ಬೆಳಗಾವಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಅಂತಾ ಜನ ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ ಮತ್ತು ಯಾರು ಕೃತ್ಯ ಎಸಗಿದ್ದಾರೆ ಅಂತರವನ್ನ ಶೀಘ್ರದಲ್ಲಿ ಬಂಧಿಸಿ ಸರಿಯಾದ ಶಿಕ್ಷೆ ಕೊಡಿಸುವ ಮೂಲಕ ಈ ರೀತಿ ಕ್ರೌರ ಮೆರೆಯುವ ದುಷ್ಕರ್ಮಿಗಳಿಗೆ ಬೆಳಗಾವಿ ಪೊಲೀಸರು ಪಾಠ ಕಲಿಸಲಿ ಎಂಬುದು ಸಾರ್ವಜನಿಕರ ಆಗ್ರಹ.

Check Also

ಶಾಸಕ ರಾಜು ಕಾಗೆ ಅವರಿಗೆ ನೋಟೀಸ್ ಜಾರಿ..

ವಿವಾದಾತ್ಮಕ ಹೇಳಿಕೆ ಶಾಸಕರಾದ ರಾಜು ಕಾಗೆ ಅವರಿಗೆ ನೋಟಿಸ್ ಜಾರಿ ಚಿಕ್ಕೋಡಿ (ಮೇ.1) ಕಾಗವಾಡ ಶಾಸಕರಾದ ರಾಜು ಕಾಗೆ ಅವರು …

Leave a Reply

Your email address will not be published. Required fields are marked *