Breaking News
Home / Breaking News / 9 ಸಚಿವರು 53 ಶಾಸಕರನ್ನ ಅನರ್ಹ ಮಾಡಿ ಅಂತಾ ಹೇಳಿದ್ದು ಯಾಕೆ ಗೊತ್ತಾ..??

9 ಸಚಿವರು 53 ಶಾಸಕರನ್ನ ಅನರ್ಹ ಮಾಡಿ ಅಂತಾ ಹೇಳಿದ್ದು ಯಾಕೆ ಗೊತ್ತಾ..??

ಬೆಳಗಾವಿ-ಕಾನೂನು ಬಾಹಿರವಾಗಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರು, ಹಾಗೂಶಾಸಕರ ವಿರುದ್ಧ ಕ್ರಮ ಜರುಗಿಸುವಂತೆ ಸಾಮಾಜಿಕ ಕಾರ್ಯಕರ್ತ ಭೀಮಪ್ಪಾ ಗಡಾದ್ ಒತ್ತಾಯಿಸಿದ್ದಾರೆ.

ಬೆಳಗಾವಿಯಲ್ಲಿ ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ,ಅವರುಸುದ್ದಿಗೋಷ್ಠಿ‌ ನಡೆಸಿ,9 ಸಚಿವರು 53 ಶಾಸಕರನ್ನ ಅನರ್ಹಗೊಳಿಸಿ ಸೌಲಭ್ಯ ನಿಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.ರಾಜ್ಯಪಾಲರು ಮತ್ತು ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದು ಮನವಿ.ಮಾಡಿಕೊಂಡಿರುವ,ರಾಜ್ಯಪಾಲರು ಕ್ರಮ ಕೈಗೊಳ್ಳದಿದ್ರೇ ನ್ಯಾಯಾಲಯದಲ್ಲಿ ಪಿಆಯ್‌ಎಲ್ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ‌.ಕ್ರಮ ಬದ್ದವಾಗಿ ಪ್ರಮಾಣ ವಚನ ಸ್ವೀಕಾರ ಮಾಡುವವರೆಗೂ ಸೌಲಭ್ಯ ವಾಪಾಸ್ ಪಡೆಯಬೇಕು ಎಂದು ಭೀಮಪ್ಪಾ ಗಡಾದ್ ಒತ್ತಾಯಿಸಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ 9ಜನ ಸಚಿವರು.ಯುಟಿ ಖಾದರ್, ಬಸನಗೌಡ ಪಾಟೀಲ್ ಯತ್ನಾಳ್, ಜಿಟಿ ದೇವೆಗೌಡ ಸೇರಿ 53ಶಾಸಕರ ಅನರ್ಹಗೊಳಿಸಲು ಭೀಮಪ್ಪಾ ಗಡಾದ್ ಒತ್ರಾಯಿಸಿದ್ದಾರೆ.

ಸಂವಿಧಾನದ ಅನುಚ್ಛೇದ 118ರ, ಮೂರನೇ ಅನುಸೂಚಿ ಪ್ರಕಾರ ಕೇವಲ ದೇವರ ಹೆಸರಲ್ಲಿ ಸತ್ಯ ನಿಷ್ಠೆ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಬೇಕು.ಬಹುತೇಕರು ಸ್ವಾಮೀಜಿ ಹೆಸರಲ್ಲಿ, ಬುದ್ದ ಬಸವಣ್ಣನವರ ಹೆಸರಲ್ಲಿ, ಕ್ಷೇತ್ರದ ಹೆಸರಲ್ಲಿ, ವ್ಯಕ್ತಿಯ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಈ ಎಲ್ಲ ಬೆಳವಣಿಗೆ ಕಾರ್ಯದರ್ಶಿ ಮುಂದೆ ನಡೆದ್ರೂ ಪ್ರಮಾಣ ವಚನ ನಿಲ್ಲಿಸಿಲ್ಲ.ಕಾರ್ಯದರ್ಶಿಯವರು ಹುದ್ದೆಗೆ ಚ್ಯುತಿ ತಂದಿದ್ದು ಅವರ ಮೇಲೆಯೂ ಕ್ರಮ ಕೈಗೊಳ್ಳಬೇಕು.ದಾಖಲೆ ಸಮೇತ ನಿನ್ನೆಯೇ ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ.ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದಲ್ಲಿ ಪಿ ಐ ಎಲ್‌ ಹೋಗುವುದಾಗಿ ಎಚ್ಚರಿಸಿದ ಗಡಾದ್,

Check Also

ಕಾಂಗ್ರೆಸ್ ಪಾರ್ಟಿಯಲ್ಲೂ ಚಹಾ ಪೇ ಚರ್ಚಾ ವೀದೌಟ್ ಖರ್ಚಾ…!!!

ಬೆಳಗಾವಿ- ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಇವತ್ತು ಬೆಳಗಾವಿಗೆ ಬಂದ್ರು ಇಲ್ಲಿಯ ಕಾಂಗ್ರೆಸ್ ಭವನದಲ್ಲಿ …

Leave a Reply

Your email address will not be published. Required fields are marked *