Breaking News
Home / Breaking News / ಕಿತ್ತೂರು ಉತ್ಸವ: ಸಂಗೀತ ದಿಗ್ಗಜ ಹಂಸಲೇಖ ಅವರಿಂದ ಕಾರ್ಯಕ್ರಮ

ಕಿತ್ತೂರು ಉತ್ಸವ: ಸಂಗೀತ ದಿಗ್ಗಜ ಹಂಸಲೇಖ ಅವರಿಂದ ಕಾರ್ಯಕ್ರಮ

ಬೆಳಗಾವಿ, ಅ.20(ಕರ್ನಾಟಕ ವಾರ್ತೆ): ಸಂಗೀತ ದಿಗ್ಗಜ ಎನಿಸಿಕೊಂಡಿರುವ ನಾಡಿನ ಪ್ರಖ್ಯಾತ ಸಂಗೀತ‌ ಕಲಾವಿದರಾದ ಹಂಸಲೇಖ ಅವರು ಈ ಬಾರಿಯ ಕಿತ್ತೂರು ಉತ್ಸವದಲ್ಲಿ ಅ.25 ರಂದು ಕಾರ್ಯಕ್ರಮ‌ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.

ಪ್ರತಿವರ್ಷದಂತೆ ಅ.23, 24 ಹಾಗೂ 25 ರಂದು ಚನ್ನಮನ ಕಿತ್ತೂರಿನ ಕೋಟೆ ಆವರಣದಲ್ಲಿ ಕಿತ್ತೂರು ಉತ್ಸವ ನಡೆಯಲಿದೆ.ಉತ್ಸವದ ಕೊನೆಯ ದಿನವಾದ ಅ.25 ರಂದು ಹಂಸಲೇಖ ಅವರು ಸಂಗೀತ ಕಾರ್ಯಕ್ರಮ‌ ನಡೆಸಿಕೊಡಲಿದ್ದಾರೆ.

ಉತ್ಸವದ ಮೊದಲ ದಿನವಾಗಿರುವ ಅ.23ರಂದು ಪ್ರಸಿದ್ಧ ಗಾಯಕರಾದ ಸಂಚಿತ್ ಹೆಗಡೆ ಅವರು ಕಾರ್ಯಕ್ರಮ ನೀಡುವರು.ಅದೇ ರೀತಿ ಉತ್ಸವದ ಎರಡನೇ ದಿನವಾದ ಅ.24 ರಂದು ಮಹಿಳೆಯರಿಗಾಗಿ ಕಾರ್ಯಕ್ರಮಗಳನ್ನು ಮೀಸಲಿಡಲಾಗಿದ್ದು, ಅಂದು ಗಾಯಕಿ ಶಮಿತಾ ಮಲ್ನಾಡ ಕಾರ್ಯಕ್ರಮ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
***

Check Also

ಶಾಸಕ ರಾಜು ಕಾಗೆ ಅವರಿಗೆ ನೋಟೀಸ್ ಜಾರಿ..

ವಿವಾದಾತ್ಮಕ ಹೇಳಿಕೆ ಶಾಸಕರಾದ ರಾಜು ಕಾಗೆ ಅವರಿಗೆ ನೋಟಿಸ್ ಜಾರಿ ಚಿಕ್ಕೋಡಿ (ಮೇ.1) ಕಾಗವಾಡ ಶಾಸಕರಾದ ರಾಜು ಕಾಗೆ ಅವರು …

Leave a Reply

Your email address will not be published. Required fields are marked *