Breaking News

ಮೀನು ಹಿಡಿಯಲು ಹೋದ ತಂದೆ, ಇಬ್ಬರು ಮಕ್ಕಳು ನೀರು ಪಾಲು

 

ಬೆಳಗಾವಿ-ಮೀನು ಹಿಡಿಯಲು ಹೋದ ತಂದೆ ಹಾಗೂ ಇಬ್ಬರು ಮಕ್ಕಳು ನೀರು ಪಾಲಾದ ಘಟನೆ,ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆನಕನಹೊಳಿ ಗ್ರಾಮದ ಘಟಪ್ರಭಾ ನದಿಯಲ್ಲಿ ನಡೆದಿದೆ.

ಬೆನಕನಹೊಳಿ ಗ್ರಾಮದ ಲಕ್ಷ್ಮಣರಾಮ ಅಂಬಲಿ (49) ರಮೇಶ್ ಅಂಬಲಿ (14),ಯಲ್ಲಪ್ಪ ಅಂಬಲಿ (12) ಘಟಪ್ರಭಾ ನದಿಯಲ್ಲಿ ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.ಭಾನುವಾರ ಸಂಜೆ ನದಿಯಲ್ಲಿ ಬಲೆ ಹಾಕುವ ವೇಳೆ ಅವಘಡ ಸಂಭವಿಸಿದೆ.ಮೂವರಿಗೂ ಎಸ್‌ಡಿಆರ್‌ಎಫ್ ತಂಡದಿಂದ ಶೋಧಕಾರ್ಯ ನಡೆಯುತ್ತಿದೆ.ಸ್ಥಳಕ್ಕೆ ಯಕಮನಮರಡಿ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.

Check Also

ಬಜೆಟ್ ನಲ್ಲಿ ಬೆಳಗಾವಿಗೆ ಸಿಕ್ಕಿದ್ದೇನು ಗೊತ್ತಾ……???

ಬೆಳಗಾವಿ- ಗ್ಯಾರಂಟಿ ಯೋಜನೆಗಳ ಹೊಡೆತಕ್ಕೆ ರಾಜ್ಯ ಸರ್ಕಾರದ ಖಜಾನೆ ಖಾಲಿ ಆಗಿದೆ ಎನ್ನುವದು ಎಲ್ಲರ ಊಹೆ ಆಗಿತ್ತು ಇಂತಹ ಖಾಲಿ …

Leave a Reply

Your email address will not be published. Required fields are marked *