Breaking News

ಪರ ಪುರುಷನ ಜೊತೆಗೆ ಪತ್ನಿ ಪರಾರಿ, ಗಂಡ ಕಂಗಾಲು….!!

ಬೆಳಗಾವಿ-ಪ್ರೀತಿ ಪ್ರೇಮಕ್ಕೆ ವ್ಯಾಪ್ತಿಯೂ ಇಲ್ಲ,ಯಾವ ಅಡ್ಡಿ ಆತಂಕವೂ ಇಲ್ಲ ಅನ್ನೋದು ಅನುಭವದ ಮಾತು,ಒಬ್ಬನ ಜೊತೆ ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿ, ನಂತರ ಇನ್ನೊಬ್ಬನ ಜಿತೆ ಪರಾರಿಯಾಗುವ ಘಟನೆಗೆ ಲವ್ ಮ್ಯಾಟರ್ ಎನ್ನಬೇಕೋ ಬೇರೆ ಹೆಸರಿಡಬೇಕೋ ಗೊತ್ತಾಗುತ್ತಿಲ್ಲ.

ಹೌದು ಈ ರೀತಿಯ ಘಟನೆ,
ಬೆಳಗಾವಿ ಪಕ್ಕದ ಮಾರಿಹಾಳ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ವಿವಾಹಿತ ಮಹಿಳೆ ಎರಡು ಮಕ್ಕಳ ತಾಯಿಯೊಬ್ಬಳು ಪರ ಪುರುಷನ ಜೊತೆಗೆ ಪರಾರಿಯಾಗಿದ್ದು, ಪತಿ ಕಂಗಾಲಾಗಿದ್ದಾನೆ.ಇಬ್ಬರು ಮಕ್ಕಳು, ಚಿನ್ನ, ಹಣ ಹಾಗೂ ಮನೆಯ ಗೃಹೋಪಯೋಗಿ ವಸ್ತುಗಳ ಜೊತೆಗೆ ಪತ್ನಿ ಪರ ಪುರುಷನ ಜೊತೆಗೆ ಗಂಡನ ಕಾರಿನಲ್ಲಿ ಪರಾರಿಯಾಗಿದ್ದಾಳೆ.

ಹೆಂಡತಿ ಪರ ಪುರುಷನ ಜೊತೆ ಪರಾರಿಯಾದ ಬಳಿಕ ಕಂಗಾಲು ಆಗಿರುವ ಗಂಡ ಈಗ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾನೆ. ತನ್ನ ಪತ್ನಿ ಮಾಸಾಬಿ(28) ಆಸೀಫ್ ಸೈಯದ್ ಪರ ಪುರುಷನ ಜೊತೆ ಪರಾರಿಯಾಗಿದ್ದಾಳೆ ಎಂದು ದೂರು ನೀಡಿದ್ದಾನೆ.ಈ ಕುರಿತು ಜನವರಿ 2ರಂದು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.ಆಸೀಫ್ ಪತ್ನಿ ಮಾಸಾಬಿ ಇದೇ ಗ್ರಾಮದ ಬಸವರಾಜ ಸೀತಿಮನಿ ಎಂಬಾತನ ಜೊತೆಗೆ ಪರಾರಿಯಾಗಿದ್ದಾಳೆ,ಮನೆಯಲ್ಲಿ ಇದ್ದ 60 ಗ್ರಾಂ ಚಿನ್ನ, ಮನೆಯಲ್ಲಿ ಐದು ಲಕ್ಷ ಹಣ ಸಮೇತ ಪರಾರಿ‌ಯಾಗಿದ್ದಾಳೆ.

ಬಾಳೆಕುಂದ್ರಿ ಹಾಗೂ ನಂದಗಢದಲ್ಲಿ ಎರಡು ಸೈಟ್ ಪತ್ನಿಯ ಹೆಸರಿನಲ್ಲಿ ಮಾಡಿದ್ದ ಪತಿ‌,ಈಗ
ಸೈಟ್ ದಾಖಲೆ, ಕಾರು, ಮನೆಯ ಸಿಲಿಂಡರ್ ಸೇರಿ ಎಲ್ಲಾ ವಸ್ತುಗಳ ಸಮೇತ ಮಾಸಾಬಿ ಗಂಡ ಅಸೀಪ್ ನನ್ನು ಬಿಟ್ಟು ಪರಾರಿಯಾಗಿದ್ದಾಳೆ ಎಂದು ಗಂಡ ಅಸೀಪ್ ಪತ್ನಿ ಮಾಸಾಬಿ ವಿರುದ್ಧ ಪೋಲೀಸರಿಗೆ ದೂರು ನೀಡಿದ್ದಾನೆ.

ಪತ್ನಿಗಾಗಿ ಅಪ್ಪ, ಅಮ್ಮನನ್ನು ದೂರ ಮಾಡಿ ಬಂದಿದ್ದ ಆಸೀಫ್ ಈಗ ಪತ್ನಿಯನ್ನೂ ಮಿಸ್ ಮಾಡಿಕೊಂಡಿದ್ದಾನೆ.
ಮೂಲತಃ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ನಿವಾಸಿ‌ಯಾಗಿರುವ ಅಸೀಪ್ ಈಗ ಹೆಂಡತಿ,ಮಕ್ಕಳು,ಸೈಟ್ ಚಿನ್ನ,ಜೊತೆಗೆ ತನ್ನ ಕಾರನ್ನೂ ಕಳೆದುಕೊಂಡು ಕಂಗಾಲು ಆಗಿದ್ದಾನೆ.ಪತ್ನಿಯ ಗ್ರಾಮವಾದ ಮಾರಿಹಾಳದಲ್ಲಿ ಬಂದು ನೆಲೆಸಿದ್ದ ಆಸೀಫ್ ಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.ಈ ಮೊದಲು ಮದುವೆಯಾಗಿ ಮಕ್ಕಳನ್ನು ಹೊಂದಿದ್ದ ಬಸವರಾಜ ಸೀತಿಮನಿ ಎಂಬಾತ ಜನವರಿ 1ರಂದು ರಾತ್ರಿ ಒಂಬತ್ತು ಗಂಟೆಯ ಹೊತ್ತಿಗೆ ಪರಾರಿ‌ ಆಗಿದ್ದಾನೆ.

ಬಸವರಾಜ ಜೊತೆಗೆ ಕಾರಿನಲ್ಲಿ ಪರಾರಿಯಾದ ಮಾಸಾಬಿ ಹಾಗೂ ಮಕ್ಕಳು.ಪತ್ನಿ ಹಾಗೂ ಮಕ್ಕಳನ್ನು ಹುಡುಕಿಕೊಂಡಿ ಪೊಲೀಸ್ ಮೊರೆ ಹೊದ ಪತಿ‌ ಅಸೀಪ್
ಡ್ರೈವರ್ ವೃತ್ತಿ ಮಾಡುತ್ತಿದ್ದ

Check Also

ಈಜಲು ಹೋದ ಬಾಲಕ ನೀರು ಪಾಲು

ಬೆಳಗಾವಿ ಕೆರೆಯಲ್ಲಿ ಈಜಲು ಹೋದ ಬಾಲಕನೋರ್ವ ನೀರು ಪಾಲಾದ ಘಟನೆ ಬೆಳಗಾವಿ ತಾಲೂಕಿನ ವಾಘವಡೆ ಗ್ರಾಮದಲ್ಲಿ ನಡೆದಿದೆ.ಬೆಳಗಾವಿ ತಾಲೂಕಿನ ವಾಘವಡೆ …

Leave a Reply

Your email address will not be published. Required fields are marked *