Breaking News
Home / Breaking News / ಸ್ಮಶಾನದಲ್ಲಿ ಮೌಢ್ಯದ ವಿರುದ್ಧ ಸೆಡ್ಡು,….

ಸ್ಮಶಾನದಲ್ಲಿ ಮೌಢ್ಯದ ವಿರುದ್ಧ ಸೆಡ್ಡು,….

ಬುದ್ಧ, ಬಸವ, ಅಂಬೇಡ್ಕರ್ ರವರು ಕಂಡಿದ್ದ ಸಮಾನತೆಯ ಸಮಾಜವನ್ನು ನಾವು ಕಟ್ಟಬೇಕಿದೆ. ಇದಕ್ಕೆ ತಮ್ಮೆಲ್ಲರ ಸಹಕಾರ, ಒಗಟ್ಟು ನಮಗೆ ತುಂಬ ಮುಖ್ಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ನಗರದ ಮರಾಠ ಸಮಾಜ ಭೂಮಿಯಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಪ್ರತಿವರ್ಷ ನಡೆಯುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಹಣ ದಿನದಂದು ಆಚರಿಸುವ ಮೌಢ್ಯ ವಿರೋಧಿ ದಿನ ಕಾರ್ಯಕ್ರಮದ‌ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅನ್ಯಾಯಕ್ಕೆ ಒಳಗಾಗಿರುವ ಜನರನ್ನು ನ್ಯಾಯ ನೀಡುವ, ಶೋಷಣೆಗೆ ಒಳಗಾಗಿರುವ ಜನರನ್ನು ಮುಕ್ತಗೊಳಿಸಿ ಅವರನ್ನು ಸ್ವತಂತ್ರ ನೀಡುವ, ಸಮಾನತೆಯಿಂದಲೇ ಮಾನವೀಯತೆಯಂದು ಹೋರಾಡಿದ ಅಂಬೇಡ್ಕರ್, ಬುದ್ಧ, ಬಸವ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಒಂದು ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಒಂದಾಗಬೇಕಿದೆ.

ಮಾನವ ಬಂಧುತ್ವ ವೇದಿಕೆಯು ನನ್ನ ನೇತ್ರತ್ವದಲ್ಲಿ ಕಳೆದ ಆರೇಳು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿದೆ. ನಂಬಿಕೆ ಮತ್ತು ಮೂಢನಂಬಿಕೆ ಎರಡು ಬೇರೆ ಬೇರೆ ವಿಚಾರಗಳು ನಾವು ನಂಬಿಕೆಯ ವಿರುದ್ಧವಿಲ್ಲ ನಾವು ಮೂಢನಂಬಿಕೆಯ ವಿರುದ್ಧ ಇದ್ದೇವೆ.
ದೇಶದಲ್ಲಿ ಮೂಢನಂಬಿಕೆಯು ಅಸಮಾನತೆ, ಜಾತಿ, ಮೇಲು ಕೀಳು, ಕೋಮು ಗಲಭೆ ಸೇರಿದಂತೆ ಇತರ ಅಪಾರ ಅನಾಚಾರಗಳಿಗೆ ಸಾಕ್ಷಿಯಾಗಿದೆ.

ಸಮಾನತೆ,‌ ಶೋಷಣೆ, ಜಾತಿ ವ್ಯವಸ್ಥೆ ತೋಲಗಬೇಕೆಂದರೆ ಮೂಢನಂಬಿಕೆಯನ್ನು ಬೇರು ಸಮೇತ ಕಿತ್ತೊಗೆಯಬೇಕು ಇದಕ್ಕೆ ನೀವು ನಮ್ಮ ಜೊತೆ ಬೆನ್ನೆಲುಬು ಆಗಿ ನಮಗೆ ಸಹಕಾರ ನೀಡಬೇಕು ಎಂದು ಅವರು ಕಾರ್ಯಕ್ರಮದಲ್ಲಿ ನೆರೆದಿದ್ದ ಜನರಿಗೆ ಮನವಿ ಮಾಡಿದರು.

ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಹಲವು ಘಟಾನುಘಟಿ ನಾಯಕರ ವಿಚಾರಗಳನ್ನು ದಾರಿ ತಪ್ಪಿಸುವ ಕೆಲಸ‌ ನಡೆಯುತ್ತಿದೆ‌. ಅವರನ್ನು ಟೀಕಿಸುವ ಹಾಗೂ ಅವರನ್ನು ಅಪಮಾನಿಸುವ ಕಾರ್ಯ ನಡೆಯುತ್ತಿದೆ.
ಇವುಗಳನ್ನು ನಾವೆಲ್ಲಾ ಸೇರಿ ತಡೆಯಬೇಕು ಅಂಬೇಡ್ಕರ್ ಅವರ ಕನಸನ್ನು ನೆನಸು ಮಾಡಬೇಕು ಎಂದು ಅವರು ಹೇಳಿದರು.

ಸಮಾರಂಭದ ವೇದಿಕೆಯಲ್ಲಿ ಯುವ ಮಖಂಡ ರಾಹುಲ್ ಜಾರಕಿಹೊಳಿ, ಮಾನವ ಬಂಧುತ್ವ ವೇಧಿಕೆಯ ಜಿಲ್ಲಾ ಅಧ್ಯಕ್ಷ ಜೀವನ್ ಮಾಂಜ್ರೆಕರ್, ಬಿ..ಎಸ್.ನಾಡಕರ್ಣಿ, ಗೋಕಾಕ ನಗರಸಭೆ ಸದಸ್ಯೆ ಹಾಗೂ ಮರಾಠ ಸಮಾಜದ ಮುಖಂಡೆ ಜೋತಿಬಾ ಸುಬಂಜಿ, ಚರಂತ್ವೇಶರ ಮಠದ ಶರಣ ಬಸವ ದೇವರು ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭ ಉದ್ಘಾಟನೆಗೂ ಮೊದಲು ಅನಿಲ್ ಕಾಂಬಳೆ ಹಾಗೂ ಕಲಾ ತಂಡದಿಂದ ಕ್ರಾಂತಿಗೀತೆ ಹಾಡಲಾಯಿತು.

ಮೂಢನಂಬಿಕೆ ಕಸ ಬಹಳಷ್ಟು ಬೆಳೆದಿದೆ. ವೈಚಾರಿಕತೆ ಮೂಲಕ ಅದನ್ನು ಕಿತ್ತು ಹಾಕುವ ಕೆಲಸ ಮಾಡಬೇಕು ಎಂದು ಬಸವ ಬೆಳವಿ ಚರಂತೇಶ್ವರ ಮಠದ ಶರಣ ಬಸವ ದೇವರು ಹೇಳಿದರು.

ನಗರದ ಮರಾಠಾ ರುದ್ರಭೂಮಿಯಲ್ಲಿ ನಡೆದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪರಿನಿರ್ವಾಣ ನಿಮಿತ್ತ ಮಾನವ ಬಂಧುತ್ವ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮೌಡ್ಯ ವಿರೋಧಿ ಪರಿವರ್ತನಾ ದಿ‌ನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬುದ್ದ, ಬಸವ ಅಂಬೇಡ್ಕರ್ ಅವರು ಒಂದು ಜಾತಿಗೆ ಸೀಮತಿವಲ್ಲ ಇಡೀ ಸಮುದಾಯದ ಆಸ್ತಿ.‌ ಅಂಬೇಡ್ಕರ್ ಅವರು ಎಳೆದ ರಥವನ್ನು ಸತೀಶ ಜಾರಕಿಹೊಳಿ ಮುಂದಿವರೆಸಿಕೊಂಡು ಹೋಗುತ್ತಿದ್ದಾರೆ. ಸತೀಶ ಅವರು ವೈಚಾರಿಕ ಪ್ರಜ್ಞೆಯ ಓಯಾಸೀಸ್ ಇದ್ದಂತೆ ಎಂದರು.

ಬಣ್ಣದ ಮೇಲೆ ಮನುಷ್ಯನ ಅಳೆಯುವುದಕ್ಕಿಂತ ಸದ್ಗುಣಗಳ ಮೇಲೆ ಅಳೆಯಬೇಕು. ಸಮಾಜದ ಸ್ವತ್ತು ಸಮಾಜದ ಜನ ಅಭಿವೃದ್ದಿಗೆ ಬಳಕೆಯಾಗಬೇಕೆ ಹರತು‌ ಕೆಲವರ ಸ್ವತ್ತಾಗಬಾರದು.

ಹೆಣ್ಣು ಮಕ್ಕಳು ಎಲ್ಲ‌ ರಂಗದಲ್ಲಿಯೂ ಪುರುಷರ ಸಮಾನ ಕೆಲಸ‌ ಮಾಡಲು ಸಿದ್ದಳಾಗಿದ್ದಾಳೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರ ಸಂವಿಧಾನಸಮವೇ ಕಾರಣ ಮಂಗಳ ಗೌರಿ ನೆನೆಯುವ ಬದಲು ಸಮಾನತೆಯ ಹಕ್ಕು ನೀಡಿದ ಬುದ್ದ, ಬಸವ ಅಂಬೇಡ್ಕರ್ ಅವರನ್ನು ನೆನೆಯಬೇಕು ಎಂದರು.

ಕಾರ್ಯಕ್ರ‌ದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಜೆಡಿಸ್ ಮುಖಂಡ ಅಶೋಕ ಪೂಜಾರಿ, ರಾಹುಲ್ ಜಾರಕಿಹೊಳಿ, ಗೋಕಾಕ ನಗರಸಭೆ ಸದಸ್ಯ ಜೋತಿಬಾ ಸುಬಂಜಿ, ಬಂಡಾಯ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ಮುಂತಾದರು ಇದ್ದರು.

Check Also

ಹೃದಯಾಘಾತದಿಂದ ನರೇಗಾ ಕಾರ್ಮಿಕ ಸಾವು

ಬೈಲಹೊಂಗಲ: ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಸ್ಥಳದಲ್ಲಿಯೇ ಸೋಮವಾರ ಸಾವನ್ನಪ್ಪಿದ್ದಾರೆ. ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತ …

Leave a Reply

Your email address will not be published. Required fields are marked *