Breaking News
Home / Breaking News / ಕಿತವಾಡ ಫಾಲ್ಸ್ ನಲ್ಲಿ ಬೆಳಗಾವಿಯ ಯುವಕ ನಾಪತ್ತೆ….

ಕಿತವಾಡ ಫಾಲ್ಸ್ ನಲ್ಲಿ ಬೆಳಗಾವಿಯ ಯುವಕ ನಾಪತ್ತೆ….

ಬೆಳಗಾವಿ-ಕರ್ನಾಟಕದ ಗಡಿ ಅಂಚಿನಲ್ಲಿರುವ,ಮಹಾರಾಷ್ಟ್ರ ಚಂದಗಡ ಹದ್ದಿಯಲ್ಲಿ ಬರುವ ಕಿತವಾಡ ಫಾಲ್ಸ್ ನಲ್ಲಿ ಬೆಳಗಾವಿಯ ಯುವಕನೊಬ್ಬ ನಾಪತ್ತೆಯಾಗಿದ್ದಾನೆ.

ಬೆಳಗಾವಿಯ ಮಾಳಮಾರುತಿ ಬಡಾವಣೆಯ ನಿವಾಸಿ ಅಭಿಷೇಕ ಸಜ್ಜನ್ (24) ಎಂಬಾತ ಕಿತವಾಡ ಮಿನಿ ಜಲಪಾತದಲ್ಲಿ ನಾಪತ್ತೆಯಾಗಿದ್ದು,ಚಂದಗಡ ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಅಭಿಷೇಕ ಸಜ್ಜನ್ ಇಂದು ಬೆಳಿಗ್ಗೆ ತನ್ನ ಕುಟುಂಬ ಸದಸ್ಯರೊಂದಿಗೆ ಕಿತವಾಡ ಜಲಪಾತಕ್ಕೆ ತೆರಳಿದ್ದ,ಮಧ್ಯಾಹ್ನ 2-30 ರ ಸುಮಾರಿಗೆ ಜಲಪಾತದಲ್ಲಿ ಜಲ ವಿಹಾರ ಮಾಡುತ್ತಿರುವಾಗ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದ್ದು ಚಂದಗಡ ಪೋಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

Check Also

ಹೃದಯಾಘಾತದಿಂದ ನರೇಗಾ ಕಾರ್ಮಿಕ ಸಾವು

ಬೈಲಹೊಂಗಲ: ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಸ್ಥಳದಲ್ಲಿಯೇ ಸೋಮವಾರ ಸಾವನ್ನಪ್ಪಿದ್ದಾರೆ. ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತ …

Leave a Reply

Your email address will not be published. Required fields are marked *