ಮುಖಕ್ಕೆ ಪ್ಲಾಸ್ಟಿಕ್ ರ‌್ಯಾಪರ್ ಸುತ್ತಿ ಪೇಂಟರ್ ಮರ್ಡರ್…

ಬೆಳಗಾವಿ- ಮುಖಕ್ಕೆ ಪ್ಲಾಸ್ಟಿಕ್ ರ‌್ಯಾಪರ್ ಸುತ್ತಿ ವ್ಯಕ್ತಿಯ ಹತ್ಯೆ ಮಾಡಿದ ಘಟನೆ,ಬೆಳಗಾವಿ ಜಿಲ್ಲೆ ಬೈಲಹೊಂಗಲ‌ ಪಟ್ಟಣದಲ್ಲಿ ನಡೆದಿದೆ.ಪಟ್ಟಣದ ಬಸ್ ನಿಲ್ದಾಣ ಬಳಿ ಖುಲ್ಲಾ ಜಾಗದಲ್ಲಿ ಶವ ಪತ್ತೆಯಾಗಿದ್ದು,ಹತ್ಯೆಯಾದ ವ್ಯೆಕ್ತಿಯನ್ನು 34 ವರ್ಷದ ಶಶಿಕಾಂತ ಮಿರಜಕರ್ ಎಂದು ಗುರುತಿಸಲಾಗಿದೆ.

ಮುಖಕ್ಕೆ ಪ್ಲಾಸ್ಟಿಕ್ ರ‌್ಯಾಪರ್ ಸುತ್ತಿ ಹತ್ಯೆ ಮಾಡಲಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ.ರಾತ್ರಿಹೊತ್ತು ಈ ಹತ್ಯೆ ಮಾಡಿದ್ದು ಶವ ಬಸ್ ನಿಲ್ಧಾಣದ ಬಳಿ ಇರುವ ಖುಲ್ಲಾ ಜಾಗೆಯಲ್ಲಿ ಪತ್ತೆಯಾಗಿದೆ.

ಸ್ಥಳಕ್ಜೆ ಬೈಲಹೊಂಗಲ ಠಾಣೆ ಪೊಲೀಸರ ಭೇಟಿ, ನೀಡಿ ಪರಿಶೀಲನೆ ನಡೆಸಿದ್ದು, ಹತ್ಯೆಯಾದ ವ್ಯೆಕ್ತಿ ಬೈಲಹೊಂಗಲದಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ. ಹತ್ಯೆಗೆ ಕಾರಣವೇನು ಎಂಬುದು ಇನ್ನೂ ಗೊತ್ತಾಗಿಲ್ಲ.

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *