Breaking News

ಮುಖಕ್ಕೆ ಪ್ಲಾಸ್ಟಿಕ್ ರ‌್ಯಾಪರ್ ಸುತ್ತಿ ಪೇಂಟರ್ ಮರ್ಡರ್…

ಬೆಳಗಾವಿ- ಮುಖಕ್ಕೆ ಪ್ಲಾಸ್ಟಿಕ್ ರ‌್ಯಾಪರ್ ಸುತ್ತಿ ವ್ಯಕ್ತಿಯ ಹತ್ಯೆ ಮಾಡಿದ ಘಟನೆ,ಬೆಳಗಾವಿ ಜಿಲ್ಲೆ ಬೈಲಹೊಂಗಲ‌ ಪಟ್ಟಣದಲ್ಲಿ ನಡೆದಿದೆ.ಪಟ್ಟಣದ ಬಸ್ ನಿಲ್ದಾಣ ಬಳಿ ಖುಲ್ಲಾ ಜಾಗದಲ್ಲಿ ಶವ ಪತ್ತೆಯಾಗಿದ್ದು,ಹತ್ಯೆಯಾದ ವ್ಯೆಕ್ತಿಯನ್ನು 34 ವರ್ಷದ ಶಶಿಕಾಂತ ಮಿರಜಕರ್ ಎಂದು ಗುರುತಿಸಲಾಗಿದೆ.

ಮುಖಕ್ಕೆ ಪ್ಲಾಸ್ಟಿಕ್ ರ‌್ಯಾಪರ್ ಸುತ್ತಿ ಹತ್ಯೆ ಮಾಡಲಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ.ರಾತ್ರಿಹೊತ್ತು ಈ ಹತ್ಯೆ ಮಾಡಿದ್ದು ಶವ ಬಸ್ ನಿಲ್ಧಾಣದ ಬಳಿ ಇರುವ ಖುಲ್ಲಾ ಜಾಗೆಯಲ್ಲಿ ಪತ್ತೆಯಾಗಿದೆ.

ಸ್ಥಳಕ್ಜೆ ಬೈಲಹೊಂಗಲ ಠಾಣೆ ಪೊಲೀಸರ ಭೇಟಿ, ನೀಡಿ ಪರಿಶೀಲನೆ ನಡೆಸಿದ್ದು, ಹತ್ಯೆಯಾದ ವ್ಯೆಕ್ತಿ ಬೈಲಹೊಂಗಲದಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ. ಹತ್ಯೆಗೆ ಕಾರಣವೇನು ಎಂಬುದು ಇನ್ನೂ ಗೊತ್ತಾಗಿಲ್ಲ.

Check Also

ಕೆಎಂಎಫ್ ಅಧ್ಯಕ್ಷ ಸ್ಥಾನದ ರೇಸ್ ಲ್ಲಿ ನಾನಿಲ್ಲ.ನಾನು ಆಂಕಾಂಕ್ಷಿಯೂ ಅಲ್ಲ,ಸ್ಪರ್ದೆಯೂ ಮಾಡೋದಿಲ್ಲ…

ಬೆಳಗಾವಿ-ಮುಂದೆ ನಡೆಯುವ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧೆ ಮಾಡುವುದಿಲ್ಲ. ಈ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಕೇವಲ …

Leave a Reply

Your email address will not be published. Required fields are marked *