Breaking News
Home / Breaking News / ಕನ್ನಡದ ಶಾಲು ಹಾಕಿಕೊಂಡು ಮಹಾರಾಷ್ಟ್ರದ ಗಡಿಯಲ್ಲಿ ನುಗ್ಗುತ್ತೇವೆ….

ಕನ್ನಡದ ಶಾಲು ಹಾಕಿಕೊಂಡು ಮಹಾರಾಷ್ಟ್ರದ ಗಡಿಯಲ್ಲಿ ನುಗ್ಗುತ್ತೇವೆ….

ಬೆಳಗಾವಿ-ಎಂಇಎಸ್ ಶಿವಸೇನೆ ವಿರುದ್ಧ ಚೆನ್ನಮ್ಮ ವೃತ್ತದಲ್ಲಿ ಕರವೇ ಪ್ರವೀಣ ಶೆಟ್ಟಿ ಬಣ  ಪ್ರತಿಭಟನೆ ನಡೆಸಿತು.

ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಸೇರಿದ ನೂರಾರು ಕರವೇ ಕಾರ್ಯಕರ್ತರು ಶಿವಸೇನೆ ಮತ್ತು ಎಂಈಎಸ್ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯೆಕ್ತಪಡಿಸಿದರು. ಪ್ರವೀಣ್ ಶೆಟ್ಟಿ ಬಣದ ಕರವೇ ರಾಜ್ಯಾಧ್ಯಕ್ಷ  ಪ್ರವೀಣ್ ಶೆಟ್ಟಿ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯಿತು.

ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಪ್ರವೀಣ ಶೆಟ್ಟಿ,ಬೆಳಗಾವಿ ಗಡಿಯಲ್ಲಿ ಶಿವಸೇನೆ ಎಂಇಎಸ್ ಶಾಂತಿ ಕದಡುವ ಕೆಲಸ ಮಾಡುತ್ತಿದೆ‌,ಕನ್ನಡಿಗರ ವಿರುದ್ಧ ಶಿವಸೇನೆ ಎಂಇಎಸ್ ಮುಖಂಡರು ಕನ್ನಡ ಶಾಲು ಹಾಕಿ ಅಡ್ಡಾಡಿದ್ರೆ ಹೊಡಿತಿವಿ ಎಂದು ಗೂಂಡಾ ಹೇಳಿಕೆ ನೀಡುತ್ತಿದ್ದಾರೆ,ಕೂಡಲೇ ಶಿವಸೇನೆ ಎಂಇಎಸ್ ನಾಯಕರ ಗೂಂಡಾ ಕಾಯ್ದೆಯಡಿ ಬಂದಿಸಿ  ಗಡಿಪಾರು ಮಾಡಬೇಕು,ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ತೊಂದರೆ ಆದ್ರ  ರಾಜ್ಯದಲ್ಲಿ ಮತ್ತೊಂದು ಕ್ರಾಂತಿ ಆಗುತ್ತದೆ.ಎಂದು ಪ್ರವೀಣ ಶೆಟ್ಟಿ ಎಚ್ಚರಿಕೆ ನೀಡಿದರು.ಎಂಇಎಸ್ ಎಚ್ಚರಿಕೆ ನೀಡಲು ಕನ್ನಡದ ಸಾಲು ಹಾಕಿಕೊಂಡು ಮಹಾರಾಷ್ಟ್ರ ಗಡಿಯಲ್ಲಿ ನುಗ್ಗಿ ಕನ್ನಡ ಬಾವುಟ ಹಾರಿಸುತ್ತೇವೆ   ಎಂದರು.

ಮಹಾರಾಷ್ಟ್ರ – ಕರ್ನಾಟಕ ಗಡಿ ಭಾಗ ಸಿನ್ನೋಳ್ಳಿ ಗಡಿ ಭಾಗಕ್ಕೆ ನುಗ್ಗಲು ಯತ್ನಿಸಿದ ಕರವೇ ರಾಜಾಧ್ಯಕ್ಷ ಪ್ರವೀಣಶೆಟ್ಟಿ ಸೇರಿ ನೂರಾರು ಕಾರ್ಯಕರ್ತರನ್ನು ಪೋಲೀಸರು ವಶಕ್ಕೆ ಪಡೆದರು..

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *