Breaking News

ಮನೆಯಲ್ಲಿ ಜಗಳಾಡಿದ್ರು ಪೋಸ್ಟಮಾರ್ಟಮ್ ರೂಮ್ ನಲ್ಲಿ ಒಂದಾದ್ರು….

ಬೆಳಗಾವಿ- ವಿಜಯಪೂರ ಜಿಲ್ಲೆಯಿಂದ ಬೆಳಗಾವಿಗೆ ದುಡಿಯಲು ಆಗಮಿಸಿದ್ದ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಕತಿ ಬಳಿಯ ಅಲತಗಾ ಗ್ರಾಮದಲ್ಲಿ ನಡೆದಿದೆ

ವಿಜಯಪೂರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಯಲಗೂಡ ತಡಾದಿಂದ ಬೆಳಗಾವಿಗೆ ಬಂದು ಅಲತಗಾ ಗ್ರಾಮದ ಗೋಡಂಬಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಅಂಜಲಿ ರವಿ ರಾಠೋಡ್,25 ವರ್ಷದ ರವಿ ರಾಮಚಂದ್ರ ರಾಠೋಡ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳಾಗಿದ್ದಾರೆ

ನಿನ್ನೆ ಸಂಜೆ ಮನೆಯಲ್ಲಿ ಇಬ್ಬರು ಯಾವುದೋ ಕಾರಣಕ್ಕಾಗಿ ಪರಸ್ಪರ ಜಗಳಾಡಿದ್ದಾರೆ ಗಂಡನನ್ನು ಮನೆಯಿಂದ ಹೊರಗೆ ತಳ್ಳಿದ ಅಂಜಲಿ ಬೀಗ ಹಾಕಿಕೊಂಡು ನೇಣಿಗೆ ಶರಣಾಗಿದ್ದಾಳೆ ತನ್ನ ಮಡದಿ ನೇಣು ಹಾಕಿಕೊಂಡಿರುವದನ್ನು ಕಿಟಕಿಯಿಂದ ನೋಡಿದ ರವಿ ರಾಠೋಡ್ ಹೆದರಿ ಅಲ್ಲಿಂದ ಪರಾರಿಯಾಗಿದ್ದ

ಆತ್ಮಹತ್ಯೆ ಮಾಡಿಕೊಂಡ ಅಂಜಲಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಭೀಮ್ಸ ಶವಾಗಾರಕ್ಕೆ ತರಲಾಗಿತ್ತು ಇನ್ನೇನು ಪೋಸ್ಟ ಮಾರ್ಟಮ್ ಮುಗಿಯುವಷ್ಟರಲ್ಲಿ ಅಲತಗಾ ಬಳಿಯ ಗಿಡವೊಂದಕ್ಕೆ ಇನ್ನೊಂದು ಶವ ನೇತಾಡುತ್ತಿದೆ ಎನ್ನುವ ಮಾಹಿತಿ ಕಾಕತಿ ಪೋಲೀಸರಿಗೆ ಬಂದಿದೆ ವಿಚಾರಣೆ ಮಾಡಿದಾಗ ಈ ಶವ ಅಂಜಲಿಯ ಪತಿ ರವಿಯ ಶವ ಎಂದು ಗೊತ್ತಾಯಿತು ಆತನ ಶವವನ್ನೂ ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಶವಾಗಾರಕ್ಕೆ ತರಲಾಯಿತು ಮನೆಯಲ್ಲಿ ಜಗಳಾಡಿಕೊಂಡಿದ್ದ ದಂಪತಿಗಳೂ ಕೊನೆಗೂ ಬೆಳಗಾವಿಯ ಶವಾಗಾರದಲ್ಲಿ ಒಂದಾಗಿದ್ದು ದುರ್ದೈವ..

Check Also

ನಾಳೆ ಬೆಳಗಾವಿಯಲ್ಲಿ ಗಾಂಜಾವಾಲಾ, ಕೋಕೀಲಾ ಲೈವ್ ರಸಮಂಜರಿ….

ಕಿತ್ತೂರು ಉತ್ಸವ: ಅ.22 ರಂದು ಬೆಳಗಾವಿ ನಗರದಲ್ಲಿ ಕುನಾಲ್ ಗಾಂಜಾವಾಲಾ, ಸಾಧು ಕೋಕಿಲ ರಸಮಂಜರಿ ಬೆಳಗಾವಿ,-: ಕಿತ್ತೂರು ಉತ್ಸವ ಹಾಗೂ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.