ರಾಹುಲ್ ಬೆಳಗಾವಿಗೆ ಬರಲಿ,ಸಿಂಹವೋ,ನರಿಯೋ ,ಕುರಿಯೋ ಗೊತ್ತಾಗುತ್ತದೆ-ಈಶ್ವರಪ್ಪ

*ಬೆಳಗಾವಿ-ರಣದೀಪ ಸಿಂಗ್ ಸುರ್ಜಿವಾಲಾ,ಅವರು ರಾಹುಲ್ ಗಾಂಧಿ ಅವರನ್ನು ಹೊಗಳಿ,ಹೊಗಳಿ ಹಾಳು ಮಾಡಿದ್ದಾರೆ,ರಾಹುಲ್‌ ಹೋದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ,ಸುರ್ಜಿವಾಲಾ ರಾಹುಲ್ ಕರ್ಕೋಂಡು ಬೆಳಗಾವಿಗೆ ಬರಲಿ ಅನ್ನೋದು ನನ್ನ ಆಸೆ ಆವಾಗ ರಾಹುಲ್ ಸಿಂಹವೋ,ನರಿಯೋ,ಕುರಿಯೋ ಅಂತಾ ಗೊತ್ತಾಗುತ್ತದೆ ಎಂದು ಸಚಿವ ಈಶ್ವರಪ್ಪ ಲೇವಡಿ ಮಾಡಿದ್ದು ಬೆಳಗಾವಿಯಲ್ಲಿ.

ಬೆಳಗಾವಿಯಲ್ಲಿ ಸುದ್ಧಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಎಲ್ಲ ಕಡೆ ಹೀನಾಯ ಸೋಲು ಅನುಭವಿಸಿದೆ,ಕಾಂಗ್ರೆಸ್ ಈಗ ಖಾಲಿ ಕೊಡ,ಖಾಲಿ ಕೊಡ ಯಾವತ್ತೂ ಶಬ್ದ ಮಾಡುತ್ತದೆ, ಬಿಜೆಪಿ ತುಂಬಿದ ಕೊಡ ಅದು ಶಬ್ದ ಮಾಡೋಲ್ಲ,ಸಿದ್ರಾಮಯ್ಯ ಸುಳ್ಳು ಹೇಳೋದ್ರಲ್ಲಿ ನಿಸ್ಸೀಮ,ಡಿ.ಕೆ.ಶಿವಕುಮಾರ್ ಮತ್ತು,ಸಿದ್ರಾಮಯ್ಯ ಖಾಲಿ ಕೊಡ ಇದ್ಹಂಗೆ ಸುಳ್ಳು ಹೇಳುವುದು ಅವರ ಕಾಯಕವಾಗಿದ್ದು,ಬಸವ ಕಲ್ಯಾಣ,ಮಸ್ಕಿ,ಬೆಳಗಾವಿಯಲ್ಲಿ ಬಿಜೆಪಿ ಗೆಲವು ಸಾಧಿಸುತ್ತದೆ ಇದರಲ್ಲಿ ಸಂಶಯವೇ ಇಲ್ಲ ಎಂದು ಈಶ್ವರಪ್ಪ ಹೇಳಿದರು.

ಬಿಜೆಪಿ ಸರ್ಕಾರವಿದ್ದಾಗ ಎಲ್ಲ ಸಮುದಾಯಗಳ ಮಠಗಳಿಗೆ ಒಂದರಿಂದ ಐದು ಕೋಟಿ ರೂಗಳ ವರೆಗೆ ಅನುದಾನ ಕೊಟ್ಟಿದೆ,ಕುರುಬ,ಪಂಚಮಸಾಲಿ ಸೇರಿದಂತೆ ವಿವಿಧ ಸಮುದಾಯಗಳು ಮೀಸಲಾತಿ ನೀಡುವಂತೆ ಹೋರಾಟ ನಡೆಸುತ್ತಿವೆ.ಸಿದ್ರಮಾಯ್ಯ ಮುಖ್ಯಮಂತ್ರಿ ಆಗಿದ್ದಾಗ ಹಿಂದುಳಿದ ಆಯೋಗದಿಂದ ವರದಿ ತರಿಸಲಿಲ್ಲ,ಈಗ ವರದಿ ತರಿಸುವಂತೆ ಸಿದ್ರಾಮಯ್ಯ ಬೀದಿಗೆ ಬಿದ್ದು ಹೋರಾಟ ಮಾಡ್ತೀನಿ ಅಂತೀದ್ದಾರೆ ಅವರು ಮುಖ್ಯಮಂತ್ರಿ ಆಗಿದ್ದಾಗ ವರದಿ ಯ್ಯಾಕೆ ತರಿಸಲಿಲ್ಲ ಎಂದು ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

ಸಿದ್ರಾಮಯ್ಯ ಮಂಗಲಾ ಅಂಗಡಿ ಅವರ ಬಗ್ಗೆ ಹಗುರವಾಗಿ ಮಾತನಾಡಿ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ.ಒಬ್ಬ ಮಹಿಳೆ ಪಾರ್ಲಿಮೆಂಟ್ ಗೆ ಹೋಗಿ ಏನು ಮಾಡಲು ಸಾಧ್ಯ ಎಂದು ಸಿದ್ರಾಮಯ್ಯ ಕೇಳಿದ್ದಾರೆ,ಇಂದಿರಾ ಗಾಂಧಿ ಮಹಿಳೆ ಅಲ್ಲವೇ.‌? ಸುಶ್ಮಾ ಸ್ವರಾಜ್ ಮಹಿಳೆ ಅಲ್ಲವೇ ,? ಅವರೆಲ್ಲ ಪಾರ್ಲಿಮೆಂಟ್ ನಲ್ಲಿ ಏನು ಮಾಡಿದ್ರು ಗೊತ್ತಿಲ್ಲವೇ ? ಎಂದು ಪ್ರಶ್ನೆ ಮಾಡಿರುವ ಈಶ್ವರಪ್ಪ, ಈ ಬಾರಿಯ ಲೋಕಸಭೆ ಉಪ ಚುನಾವಣೆಯಲ್ಲಿ,ಮಹಿಳೆಯರು ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರನ್ನು ಗೆಲ್ಲಿಸಿ ಕಾಂಗ್ರೆಸ್ಸಿಗೆ ಪಾಠ ಕಲಿಸುತ್ತಾರೆ ಎಂದು ಈಶ್ವರಪ್ಪ ಹೇಳಿದ್ರು..

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *