ಬೆಳಗಾವಿಗೆ ನಾಯಕರ ದಂಡು…ಕೈ..ಕಮಲ ಟಿಕೆಟ್ ಗೆ ಡಿಮ್ಯಾಂಡು…!!!

ಬೆಳಗಾವಿಗೆ ಲೀಡರ್ ಗಳ ಲಗ್ಗೆ ಇವತ್ತಿನಿಂದ ಇಲೆಕ್ಷನ್ ಸುಗ್ಗಿ…..

ಬೆಳಗಾವಿ- ಬೆಳಗಾವಿ ಮಹನಾಗರ ಪಾಲಿಕೆಯ ಚುನಾವಣೆಗೆ ಇವತ್ತಿನಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭ ಆಗಲಿದೆ ಹೀಗಾಗಿ ಕಾಂಗ್ರೆಸ್ ಬಿಜೆಪಿ ನಾಯಕರು ಬೆಳಗಾವಿಗೆ ಆಗಮಿಸಿದ್ದಾರೆ.

ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್,ಕಾಂಗ್ರೆಸ್ಸಿನ ಮಾಜಿ ಸಚಿವ ಎಂಬಿ ಪಾಟೀಲ,ಬಿ.ಕೆ ಹರೀಪ್ರಸಾದ ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ನಾಯಕರು ಈಗ ಬೆಳಗಾವಿಯಲ್ಲಿ ಪಾಲಿಕೆ ಚುನಾವಣೆ ಕುರಿತು ಸರಣಿ ಸಭೆಗಳನ್ನು ಮಾಡಲಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಈ ಬಾರಿ ಪಕ್ಷದ ಚಿಹ್ನೆಯ ಆದಾರದ ಮೇಲೆ ನಡೆಯಲಿದೆ,ಈ ಕುರಿತು ಇವತ್ತು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಅಧಿಕೃತ ಮುದ್ರೆ ಒತ್ತಲಿವೆ.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಗದ್ದುಗೆ ಏರಲು ಕಾಂಗ್ರೆಸ್ ಮತ್ತು ಬಿಜೆಪಿ ರಣರಂತ್ರ ರೂಪಿಸುತ್ತಿವೆ,ಅದಲ್ಕಾಗಿ ಎರಡೂ ಪಕ್ಷಗಳ ನಾಯಕರು ಬೆಳಗಾವಿಗೆ ಆಗಮಿಸಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ಈಗ ಬಿ ಪಾರ್ಮಿಗಾಗಿ ಡಿಮ್ಯಾಂಡು ಹೆಚ್ಚಾಗಿದೆ.ಕೆಲವರು ಆಮ್ ಆದ್ಮಿ, ಮತ್ತು ಎಂಐಎಂ ಟಿಕೆಟ್ ಬುಕ್ ಮಾಡಿದ್ದಾರೆ‌

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *