ಹಿಂಡಲಗಾ ಜೈಲಿನಲ್ಲಿದ್ದ, ಕೊಲೆ ಆರೋಪಿ ಅನುಮಾನಸ್ಪದ ಸಾವು

ಬೆಳಗಾವಿ-ಕೇರಳದ ಕುಖ್ಯಾತ ರೌಡಿ ಡಾನ್ ತಸ್ಲಿಮ್ ಕೊಲೆ ಆರೋಪಿ ಅನುಮಾನಸ್ಪದ ಸಾವನ್ನೊಪ್ಪಿದ ಘಟನೆ, ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನಡೆದಿದೆ.

ವಿಚಾರಣಾಧೀನ ಕೈದಿ ಅನುಮಾನಸ್ಪದ ಸಾವನ್ನೊಪ್ಪಿದ್ದು, ನಿನ್ನೆ ಸಂಜೆ ಮೃತಪಟ್ಟಿರುವ ಕೊಲೆ ಆರೋಪಿ ಗುರುರಾಜ್ ದೊಡ್ಡಮನಿ,ಎಂಬಾತ,
ಕಳೆದ ನಾಲ್ಕು ದಿನಗಳಿಂದ ಎದೆ ನೋವಿನಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದ

ಎದೆನೋವು ಕಾಣಿಸಿಕೊಂಡಿದೆ ಐದನೂರು ರೂಪಾಯಿ ನೀಡುವಂತೆ ಸಂಬಂಧಿಗೆ ದೂರವಾಣಿ ಕರೆ ಮಾಡಿದ್ದ ಆರೋಪಿ,ಇದಾದ ಕೆಲವೇ ಗಂಟೆಗಳಲ್ಲಿ ಆತ ಮೃತಪಟ್ಟಿದ್ದಾನೆ ಅಂತಾ ಜೈಲು ಸಿಬ್ಬಂದಿ ಕರೆ ಮಾಡಿ ಮೃತರ ಸಂಬಂಧಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಹದಿನೈದು ದಿನಗಳ ಹಿಂದೆ ಆರೋಪಿ ಗುರುರಾಜ್ ಮೇಲೆ ಹಲ್ಲೆ ನಡೆದಿತ್ತೆಂಬ ಆರೋಪ ಕೇಳಿ ಬಂದಿದೆ.
ಗುರುರಾಜ್ ಮೇಲೆ ಸಿಬ್ಬಂದಿ ಹಲ್ಲೆ ಮಾಡಿದ ಇದಾದ ಬಳಿಕ ಆತನಿಗೆ ಎದೆ ನೋವು ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.ಗುರುರಾಜ್ ಸಾವಿಗೆ ಹಿಂಡಲಗಾ ಜೈಲು ಸಿಬ್ಬಂದಿಯೇ ಕಾರಣ ಅಂತಾ ಮೃತನ ಸಹೋದರ ಕಿರಣ್ ಗಂಭೀರ ಆರೋಪ ಮಾಡಿದ್ದಾರೆ.

ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಜೈಲು ಸಿಬ್ಬಂದಿ ವಿರುದ್ಧ ದೂರು ನೀಡಲು ಮೃತನ ಕುಟುಂಬಸ್ಥರು ಮುಂದಾಗಿದ್ದಾರೆ.

Check Also

ಮಸೀದಿಯಲ್ಲೇ ಮೌಲ್ವಿಯಿಂದ ಬಾಲಕಿ ಮೇಲೆ ಅತ್ಯಾಚಾರ

ಬೆಳಗಾವಿ – ಮಸೀದಿಯಲ್ಲಿ‌ ಮೌಲ್ವಿಯಿಂದ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಘಟನೆ ಮೂರು ವರ್ಷದ ಬಳಿಕ ಬೆಳಕಿಗೆ …

Leave a Reply

Your email address will not be published. Required fields are marked *