Breaking News
Home / Breaking News / ಹಿಂಡಲಗಾ ಜೈಲಿನಲ್ಲಿದ್ದ, ಕೊಲೆ ಆರೋಪಿ ಅನುಮಾನಸ್ಪದ ಸಾವು

ಹಿಂಡಲಗಾ ಜೈಲಿನಲ್ಲಿದ್ದ, ಕೊಲೆ ಆರೋಪಿ ಅನುಮಾನಸ್ಪದ ಸಾವು

ಬೆಳಗಾವಿ-ಕೇರಳದ ಕುಖ್ಯಾತ ರೌಡಿ ಡಾನ್ ತಸ್ಲಿಮ್ ಕೊಲೆ ಆರೋಪಿ ಅನುಮಾನಸ್ಪದ ಸಾವನ್ನೊಪ್ಪಿದ ಘಟನೆ, ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನಡೆದಿದೆ.

ವಿಚಾರಣಾಧೀನ ಕೈದಿ ಅನುಮಾನಸ್ಪದ ಸಾವನ್ನೊಪ್ಪಿದ್ದು, ನಿನ್ನೆ ಸಂಜೆ ಮೃತಪಟ್ಟಿರುವ ಕೊಲೆ ಆರೋಪಿ ಗುರುರಾಜ್ ದೊಡ್ಡಮನಿ,ಎಂಬಾತ,
ಕಳೆದ ನಾಲ್ಕು ದಿನಗಳಿಂದ ಎದೆ ನೋವಿನಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದ

ಎದೆನೋವು ಕಾಣಿಸಿಕೊಂಡಿದೆ ಐದನೂರು ರೂಪಾಯಿ ನೀಡುವಂತೆ ಸಂಬಂಧಿಗೆ ದೂರವಾಣಿ ಕರೆ ಮಾಡಿದ್ದ ಆರೋಪಿ,ಇದಾದ ಕೆಲವೇ ಗಂಟೆಗಳಲ್ಲಿ ಆತ ಮೃತಪಟ್ಟಿದ್ದಾನೆ ಅಂತಾ ಜೈಲು ಸಿಬ್ಬಂದಿ ಕರೆ ಮಾಡಿ ಮೃತರ ಸಂಬಂಧಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಹದಿನೈದು ದಿನಗಳ ಹಿಂದೆ ಆರೋಪಿ ಗುರುರಾಜ್ ಮೇಲೆ ಹಲ್ಲೆ ನಡೆದಿತ್ತೆಂಬ ಆರೋಪ ಕೇಳಿ ಬಂದಿದೆ.
ಗುರುರಾಜ್ ಮೇಲೆ ಸಿಬ್ಬಂದಿ ಹಲ್ಲೆ ಮಾಡಿದ ಇದಾದ ಬಳಿಕ ಆತನಿಗೆ ಎದೆ ನೋವು ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.ಗುರುರಾಜ್ ಸಾವಿಗೆ ಹಿಂಡಲಗಾ ಜೈಲು ಸಿಬ್ಬಂದಿಯೇ ಕಾರಣ ಅಂತಾ ಮೃತನ ಸಹೋದರ ಕಿರಣ್ ಗಂಭೀರ ಆರೋಪ ಮಾಡಿದ್ದಾರೆ.

ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಜೈಲು ಸಿಬ್ಬಂದಿ ವಿರುದ್ಧ ದೂರು ನೀಡಲು ಮೃತನ ಕುಟುಂಬಸ್ಥರು ಮುಂದಾಗಿದ್ದಾರೆ.

Check Also

ಮೇ 2 ರಂದು ಏಕನಾಥ, 3 ರಂದು ಅಮೀತ್ ಶಾ ಬೆಳಗಾವಿಗೆ….

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ, ಮತಬೇಟೆಗಾಗಿ ಮೇ 2 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮೇ …

Leave a Reply

Your email address will not be published. Required fields are marked *