Breaking News

ಸಾಹುಕಾರ್ ವಿರುದ್ಧ ಡಿಕೆಶಿ ಆರೋಪದ ಬೆನ್ನಲ್ಲೇ ಬೆಳಗಾವಿಗೆ ಸಚಿವ ಸೋಮಶೇಖರ್ ದೌಡು…

ಬೆಳಗಾವಿ-ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಪೆಕ್ಸ್ ಬ್ಯಾಂಕಿನ ಕೋಟ್ಯಾಂತರ ರೂ ಗುಳುಂ ಮಾಡಿದೆ,ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪ ಮಾಡಿದ ಬೆನ್ನಲ್ಲಿಯೇ ರಾಜ್ಯ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಇಂದು ಬೆಳಗಾವಿಗೆ ಆಗಮಿಸುತ್ತಿದ್ದಾರೆ.

ಇಂದು ಮಂಗಳವಾರ ಬೆಳಗಾವಿಗೆ ಆಗಮಿಸುವ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಬೆಳಗಾವಿಯ ಡಿಸಿಸಿ ಬ್ಯಾಂಕಿನಲ್ಲಿ ಪ್ರಗತಿ ಪರಶೀಲನಾ ಸಭೆ ನಡೆಸಲಿದ್ದು,ಬೆಳಗಾವಿ ಡಿಸಿಸಿ ಬ್ಯಾಂಕ್ ಜಿಲ್ಲೆಯ ಯಾವ.ಯಾವ ಸಕ್ಕರೆನ ಕಾರ್ಖಾನೆಗಳಿಗೆ ಎಷ್ಟು ಕೋಟಿ ಸಾಲ ಕೊಟ್ಟಿದೆ,ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಯಾವ ಸಕ್ಕರೆ ಕಾರ್ಖಾನೆ,ಎಷ್ಟು ಕೋಟಿ ಬಾಕಿ ಉಳಿಸಿಕೊಂಡಿದೆ,ಎನ್ನುವದರ ಬಗ್ಗೆ ಸಚಿವರು ಪರಶೀಲನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್ ಅವರು ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ಅವರ ಹೆಸರು ಪ್ರಸ್ತಾಪಿಸದೇ,ಜಿಲ್ಲೆಯ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ರೈತರ ಬಿಲ್ ಬಾಕಿ ಉಳಿಸಿಕೊಂಡಿದ್ದು ಅಪೆಕ್ಸ್ ಬ್ಯಾಂಕಿನಿಂದ ಕೋಟ್ಯಾಂತರ ರೂ ಸಾಲ ಪಡೆದು ಸಾಲ ಮರುಪಾವತಿ ಮಾಡದೇ ಕಾರ್ಖಾನೆ ದಿವಾಳಿ ಆಗಿದೆ ಎಂದು ಅಪೆಕ್ಸ್ ಬ್ಯಾಂಕಿಗೆ ಮೋಸ ಮಾಡಿದೆ ಎಂದು ಡಿಕೆಶಿ ಸಾಹುಕಾರ್ ರಮೇಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯ ವ್ಯವಹಾರದ ಕುರಿತು ಮುಖ್ಯಂತ್ರಿಗಳು ,ಹಾಗೂ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಉತ್ತರಿಸಲಿ ಎಂದು ಸವಾಲು ಹಾಕಿದ ಎರಡು ದಿನದಲ್ಲೇ ಸಹಕಾರಿ ಸಚಿವ ಸೋಮಶೇಖರ್ ಬೆಳಗಾವಿಗೆ ಆಗಮಿಸಿ,ಅದರಲ್ಲೂ ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ ಸಭೆ ನಡೆಸುತ್ತಿರುವದು ಎಲ್ಲರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಒಟ್ಟಾರೆಯಾಗಿ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಡಿಸಿಸಿ ಬ್ಯಾಂಕಿನ ವ್ಯವಹಾರ, ಮತ್ತು ಅಪೆಕ್ಸ್ ಬ್ಯಾಂಕಿನಿಂದ ಬೆಳಗಾವಿ ಜಿಲ್ಲೆಯ ಎಷ್ಟು ಜನ ಸಕ್ಕರೆ ಕಾರ್ಖಾನೆ ಮಾಲೀಕರು ಎಷ್ಟು ಸಾಲ ಪಡೆದಿದ್ದಾರೆ,ಡಿಸಿಸಿ ಬ್ಯಾಂಕಿನಿಂದ,ಎಷ್ಟು ಸಾಲ ಪಡೆದಿದ್ದಾರೆ,ಯಾರು ಎಷ್ಟು ? ಬಾಕಿ ಉಳಿಸಿಕೊಂಡಿದ್ದಾರೆ ಎನ್ನುವ ಮಾಹಿತಿಯನ್ನು ಸಚಿವರು ಬಹಿರಂಗ ಪಡಿಸುವದು ಅತ್ಯಗತ್ಯವಾಗಿದೆ.

Check Also

ಬೆಳಗಾವಿ ಜಿಲ್ಲೆಯ ಸಮಸ್ಯೆ ಸಿಎಂ ಭೇಟಿಯಾದ ಬೆಳಗಾವಿ ಶಾಸಕರು

ಬೆಂಗಳೂರು- ಬೆಳಗಾವಿ ಜಿಲ್ಲೆಯ ಸಮಸ್ಯೆಗಳನ್ನು ಇಂದು ಸಿಎಂ ಸಿದ್ರಾಮಯ್ಯ ಆಲಿಸಿದರು ಬೆಳಗಾವಿ ಜಿಲ್ಲೆಯ ಇಬ್ಬರು ಮಂತ್ರಿಗಳು ಹಾಗೂ ಕಾಂಗ್ರೆಸ್ ಶಾಸಕರು …

Leave a Reply

Your email address will not be published. Required fields are marked *